ETV Bharat / state

ಪಂಚಮಸಾಲಿ ಸಮಾಜಕ್ಕಷ್ಟೇ ಸಿಮೀತ ಆಗಬಾರದು: ಮಹದೇಶ್ವರ ಸ್ವಾಮೀಜಿ

author img

By

Published : Jan 10, 2021, 3:22 PM IST

ಲಿಂಗಾಯತ ಧರ್ಮದ ಹೋರಾಟದಲ್ಲಿ ನೇತೃತ್ವ ವಹಿಸಿಕೊಂಡು ಮುಂಚೂಣಿಯಲ್ಲಿದ್ದ ಪಂಚಮಸಾಲಿ ಸ್ವಾಮೀಜಿಯವರು ಈಗ ಏಕಾಏಕಿ 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವುದರಿಂದ ಜಾತಿ ಸ್ವಾಮೀಜಿ ಆಗುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ ಎಂದು ಕೂಡಲಸಂಗಮದ ಬಸವ ಧರ್ಮ ಪೀಠದ ಉಪಾಧ್ಯಕ್ಷರಾದ ಮಹದೇಶ್ವರ ಸ್ವಾಮೀಜಿ ಹೇಳಿದರು.

mahedeshwar-swamiji
ಮಹದೇಶ್ವರ ಸ್ವಾಮೀಜಿ

ಬಾಗಲಕೋಟೆ: ಅಖಂಡ ಲಿಂಗಾಯತ ಧರ್ಮಕ್ಕೆ ಸ್ವಾಮೀಜಿ ಆಗಬೇಕು ಹೂರತು ಪಂಚಮಸಾಲಿ ಸಮಾಜಕ್ಕಷ್ಟೇ ಸಿಮೀತ ಆಗಬಾರದು ಎಂದು ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರಿಗೆ ಕೂಡಲಸಂಗಮದ ಬಸವ ಧರ್ಮ ಪೀಠದ ಉಪಾಧ್ಯಕ್ಷರಾದ ಮಹದೇಶ್ವರ ಸ್ವಾಮೀಜಿ ಯವರು ಕಿವಿಮಾತು ಹೇಳಿದ್ದಾರೆ.

ಮಹದೇಶ್ವರ ಸ್ವಾಮೀಜಿ

ನವನಗರದ ಪ್ರೆಸ್​ ಕ್ಲಬ್​ನಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸ್ವಾಮೀಜಿಯವರು ಲಿಂಗಾಯತ ಧರ್ಮದ ಹೋರಾಟದಲ್ಲಿ ನೇತೃತ್ವ ವಹಿಸಿಕೊಂಡು ಮುಂಚೂಣಿಯಲ್ಲಿ ಇದ್ದವರು. ಈಗ ಏಕಾಏಕಿ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವುದರಿಂದ ಜಾತಿ ಸ್ವಾಮೀಜಿ ಆಗುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ ಎಂದರು.

ಲಿಂಗಾಯತರಲ್ಲಿಯೇ 99 ಉಪ ಪಂಗಡಗಳು ಬರುತ್ತಿದ್ದು, ಪಂಚಮಸಾಲಿ ಸಮಾಜವೂ ಬರಲಿದೆ. ಪಂಚಮಸಾಲಿ ಸ್ವಾಮೀಜಿಯವರು ಒಂದೇ ಸಮಾಜದ ಮೀಸಲಾತಿಗಾಗಿ ಹೋರಾಟ ಮಾಡಿದರೆ ಸಣ್ಣ ಪುಟ್ಟ ಸಮಾಜದ ಗತಿ ಏನು ಎಂದು ಪ್ರಶ್ನಿಸಿದರು.

ಓದಿ: "ವಿಧಾನ ಪರಿಷತ್​ನವರು ಬಂದ್ರೆ ನಮ್ಗೆ ಭಯ"... ಸಚಿವ ಈಶ್ವರಪ್ಪ ವ್ಯಂಗ್ಯದ ಮಾತು

ಪ್ರತಿಯೊಂದು ಸಮಾಜಕ್ಕೂ ಮೀಸಲಾತಿ ಸಲ್ಲುವುದಾದರೆ ಅಖಂಡ ಲಿಂಗಾಯತ ಹೋರಾಟ ಮಾಡಬೇಕು. ಶರಣ ಮೇಳ ನಡೆಯುವ ಸಮಯದಲ್ಲಿ ಪಂಚಮಸಾಲಿ ಪೀಠದ ಶ್ರೀಗಳಿಗೆ ಆಹ್ವಾನ ಮಾಡಿದ್ದು, ಎಲ್ಲಾ ಶ್ರೀಗಳ ಸಮ್ಮುಖದಲ್ಲಿ ಪಂಚಮಸಾಲಿ ಮೀಸಲಾತಿಯನ್ನು ಕೈ ಬಿಟ್ಟು ಅಖಂಡ ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡಬೇಕು‌ ಎಂದು ಮನವರಿಕೆ ಮಾಡಿಕೂಡಲಾಗುತ್ತದೆ ಎಂದು ತಿಳಿಸಿದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.