ETV Bharat / state

ಬಾಗಲಕೋಟೆಯಲ್ಲಿ ಅದ್ದೂರಿ ಛಪ್ಪನ್​ ಭೋಜ್​​ ಆಚರಣೆ

author img

By

Published : Oct 4, 2022, 4:52 PM IST

ಬಾಗಲಕೋಟೆ ಜಿಲ್ಲೆಯಲ್ಲಿ ಎಸ್​ಎಸ್​ಕೆ ಸಮಾಜದಿಂದ ನಡೆಯುವ ಛಪ್ಪನ್ ಭೋಜ್ ವಿಶೇಷವಾಗಿದ್ದು, ಗಮನ ಸೆಳೆಯುವಂತಾಗಿದೆ.

ಅಂಬಾಭವಾನಿ
ಅಂಬಾಭವಾನಿ

ಬಾಗಲಕೋಟೆ: ನಗರದ ಎಸ್​ಎಸ್​ಕೆ ಸಮಾಜದ ವತಿಯಿಂದ ಪ್ರತಿ ವರ್ಷ ನಡೆಯುವ ದಸರಾ ಹಬ್ಬದ ನಿಮಿತ್ತ ನಡೆಯುವ ಛಪ್ಪನ್ ಭೋಜ್ ಈ ವರ್ಷವು ಅಂಬಾಭವಾನಿ ದೇವಾಲಯದಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು. 56 ವಿವಿಧ ಬಗೆಯ ತಿಂಡಿ - ತಿನಿಸು, ಆಹಾರ ಪದಾರ್ಥಗಳು, ಹಣ್ಣು ಹಂಪಲು ಹಾಗೂ ಡ್ರೈ ಪ್ರುಟ್ಸ್ ಹಾಕಿ ನೈವೇದ್ಯ ಮಾಡುವುದು ವಿಶೇಷವಾಗಿದೆ.

ಬಾಗಲಕೋಟೆಯಲ್ಲಿ ಅದ್ದೂರಿ ಛಪ್ಪನ್​ ಭೋಜ್​​ ಆಚರಣೆ ಮಾಡಲಾಯಿತು

ಸಾಮೂಹಿಕ ಪ್ರಾರ್ಥನೆ: ದಸರಾ ಹಿನ್ನೆಲೆಯಲ್ಲಿ ನಡೆಯುವ ಛಪ್ಪನ್ ಭೋಜ್​ಗಾಗಿ ದೇಶ - ವಿದೇಶಗಳಿಂದಲೂ ಭಕ್ತರು ತಿಂಡಿ‌ ತಿನಿಸುಗಳನ್ನು ದೇವಿಗೆ ನೈವೇದ್ಯಕ್ಕಾಗಿ ಕಳುಹಿಸುತ್ತಾರೆ. ಅಮೆರಿಕದಲ್ಲಿ ‌ಇರುವ ಇಲ್ಲಿನ ಭಕ್ತರು, ವಿದೇಶದಿಂದಲೇ ಸಿಹಿ ತಿಂಡಿ‌ ಪದಾರ್ಥಗಳನ್ನು ಕಳುಹಿಸಿ ಕೊಡುತ್ತಾರೆ. ದಸರಾ ಹಬ್ಬದ ಅಷ್ಟಮಿ ದಿನದಂದು ರಾತ್ರಿ ಸಮಯದಲ್ಲಿ ಎಲ್ಲ ಆಹಾರ ಪದಾರ್ಥಗಳನ್ನು ಒಂದೆಡೆ ಸೇರಿಸಿ, ದೇವಿಯ ಮುಂದೆ ಇಟ್ಟು ಸಾಮೂಹಿಕವಾಗಿ ಪ್ರಾರ್ಥನೆ ಮಾಡುತ್ತಾರೆ. ದೇವಿಯ ವಿವಿಧ ಬಗೆಯ ಮಂಗಳಾರತಿ ಹಾಡಿ, ಪ್ರಾರ್ಥನೆ ಸಲ್ಲಿಸುತ್ತಾರೆ.

ಮಂಗಳಾರತಿ ಮೂಲಕ ದೇವಿಗೆ ಪ್ರಾರ್ಥನೆ: ನಂತರ ಎಲ್ಲ ಆಹಾರ ಪದಾರ್ಥಗಳನ್ನು ಒಂದೆಡೆ ಸೇರಿಸಿ ಬಂದ ಭಕ್ತರಿಗೂ ಪ್ರಸಾದ ರೂಪದಲ್ಲಿ ಕೊಡುತ್ತಾರೆ. ಇತಿಹಾಸದ ಹಿನ್ನೆಲೆ ಇರುವ ಈ ಅಂಬಾಭವಾನಿ ದೇವಿಗೆ ಭಕ್ತರ ಸಂಕಷ್ಟ ದೂರು ಮಾಡಿ, ಸಕಲ ಸುಖ ಸಂತೋಷ ನೀಡುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಈ‌ ಹಿನ್ನೆಲೆ ದಸರಾ ಸಮಯದಲ್ಲಿ ಒಂಬತ್ತು ದಿನಗಳ ಕಾಲ ಬೆಳಗಿನ ಜಾವ ಕಾಕಡಾರತಿ, ಸಂಜೆ ಮಂಗಳಾರತಿ ಮಾಡುವ ಮೂಲಕ ದೇವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ನಿತ್ಯ ಒಂದೊಂದು ಅಲಂಕಾರ ಮಾಡಿ, ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ.

ವೀಳ್ಯದೆಲೆ, ರೂಪಾಯಿಗಳಿಂದ ಅಲಂಕಾರ ಮಾಡುವ ಜೊತೆಗೆ ತಿರುಪತಿ ತಿಮ್ಮಪ್ಪ, ಚಾಮುಂಡಿ, ಮಹಾಕಾಳಿಯ ವೇಷಭೂಷಣ ಮಾಡಿ, ದೇವಿಗೆ ಅಲಂಕಾರ ಮಾಡಿ, ಪೂಜೆ ಸಲ್ಲಿಸಲಾಯಿತು. ಈ‌ ದೇವಾಲಯದಲ್ಲಿ ಯಾವುದೇ ಜಾತಿ, ಮತ ಪಂಥ ಎನ್ನದೇ ಎಲ್ಲರಿಗೂ ಅವಕಾಶ ನೀಡಿ, ಪ್ರಸಾದ ವಿತರಣೆ ಮಾಡುವ ಮೂಲಕ ಗಮನ ಸೆಳೆದಿದೆ.

ಛಪ್ಪನ್ ಭೋಜ್ ವಿಶೇಷ: ಛಪ್ಪನ್ ಭೋಜ್ ಎಂದು ಅಷ್ಟಮಿ ದಿನ ಆಚರಣೆ ಮಾಡುತ್ತಿರುವ ಹಿನ್ನೆಲೆ ಇದನ್ನು ನೋಡಲು ವಿವಿಧ ಪ್ರದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಎಸ್​ಎಸ್​ಕೆ ಸಮಾಜದಿಂದ ನಡೆಯುವ ಛಪ್ಪನ್ ಭೋಜ್ ವಿಶೇಷವಾಗಿದ್ದು, ಗಮನ ಸೆಳೆಯುವಂತಾಗಿದೆ.

ಓದಿ: ಆಯುಧ ಪೂಜಾ ಹಿನ್ನೆಲೆ: ಗಜಪಡೆಗೆ ವಿಶೇಷ ಪೂಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.