ETV Bharat / state

ಬೀಳಗಿ ಬಳಿ ನಿಂತಿದ್ದ ಕ್ಯಾಂಟರ್​ಗೆ ವಾಹನ ಡಿಕ್ಕಿ : ನಾಲ್ವರು ಸ್ಥಳದಲ್ಲೇ ದುರ್ಮರಣ

author img

By

Published : Jun 3, 2022, 8:23 AM IST

Updated : Jun 3, 2022, 11:15 AM IST

ಬೀಳಗಿ ತಾಲೂಕಿನ ಬಾಡಂಗಡಿ ಬಳಿ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ..

ಬೀಳಗಿ ಬಳಿ ನಿಂತಿದ್ದ ಕ್ಯಾಂಟರ್​ಗೆ ವಾಹನ ಡಿಕ್ಕಿ
ಬೀಳಗಿ ಬಳಿ ನಿಂತಿದ್ದ ಕ್ಯಾಂಟರ್​ಗೆ ವಾಹನ ಡಿಕ್ಕಿ

ಬಾಗಲಕೋಟೆ : ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಕ್ಯಾಂಟರ್​ಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ‌ ಬಾಗಲಕೋಟೆ ಜಿಲ್ಲೆಯ ಬಾಡಗಂಡಿ ಗ್ರಾಮದ ಬಳಿ ನಡೆದಿದೆ. ಹುಬ್ಬಳ್ಳಿ-ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಮೃತ ನಾಲ್ವರು ಬೀಳಗಿ ಪಟ್ಟಣದವರು ಎಂದು ತಿಳಿದು‌ ಬಂದಿದೆ.

ಮೃತರನ್ನು ಟಕ್ಕಳಕಿ ಗ್ರಾಮದ ರಜಾಕ್ ತಾಂಬೊಳಿ (54), ರಾಮಸ್ವಾಮಿ ಕರಿಗಾರ(36), ಬೀಳಗಿಯ ನಾಶಿರ್ ಮುಲ್ಲಾ(42), ಮಲ್ಲಪ್ಪ ಮಳಲಿ(42) ಎಂದು ಗುರುತಿಸಲಾಗಿದೆ. ಪಂಚರ್ ಆದ ಹಿನ್ನೆಲೆ ರಸ್ತೆ ಪಕ್ಕಕ್ಕೆ ಕ್ಯಾಂಟರ್ ನಿಲ್ಲಿಸಲಾಗಿತ್ತು. ಆದ್ರೆ, ರಾತ್ರಿ 11 ಗಂಟೆ ಸುಮಾರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.

(ಇದನ್ನೂ ಓದಿ: ಒಂದೆಡೆ ಗಣಿಗಾರಿಕೆ: ಮತ್ತೊಂದೆಡೆ ಕುಸಿದು ಬಿದ್ದ ಬೃಹತ್​ ಗುಡ್ಡ.. ವಿಡಿಯೋ)

ವಿಜಯಪುರ ಜಿಲ್ಲೆ ಕಾರಜೋಳ ಗ್ರಾಮದಿಂದ ಕ್ಯಾಂಟರ್​​ನಲ್ಲಿ ಈರುಳ್ಳಿ ತುಂಬಿಕೊಂಡು ಬೆಂಗಳೂರಿಗೆ ಹೋಗುವಾಗ ಬಾಡಗಂಡಿ ಬಳಿ ವಾಹನ ಪಂಚರ್ ಆಗಿತ್ತು. ಅಂತೇಯೇ ಬೀಳಗಿ ಪಟ್ಟಣದಿಂದ ರಾಮಸ್ವಾಮಿ ಎನ್ನುವ ವ್ಯಕ್ತಿಯ ಟಂಟಂನಲ್ಲಿ ಟೈರ್ ಹಾಕಿಕೊಂಡು ಒಟ್ಟು ಐವರು ಸ್ಥಳಕ್ಕೆ ಪಂಚರ್ ತಿದ್ದುತ್ತಿದ್ದರು. ಈ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ.

ನಾಲ್ವರ ಶವಗಳನ್ನು ಬೀಳಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪರಿಷತ್ ಸದಸ್ಯ ಹನಮಂತ ನಿರಾಣಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Last Updated :Jun 3, 2022, 11:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.