ETV Bharat / state

ಅಂಗನವಾಡಿ ನೇಮಕಾತಿ ಆದೇಶ ತಡೆ: ಮುಧೋಳದ ಸಿಡಿಪಿಒ ಕಚೇರಿ ಮೇಲೆ ಎಸಿಬಿ ದಾಳಿ

author img

By

Published : Apr 5, 2022, 4:48 PM IST

ಕಚೇರಿಯಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡಿ ಅಂಗನವಾಡಿ ನೇಮಕಾತಿ ಆದೇಶ ತಡೆ ಹಿಡಿದುಕೊಂಡಿದ್ದ ಸಿಬ್ಬಂದಿ ಮೇಲೆ ದಾಳಿ ಚಾಟಿ ಬೀಸಲಾಗಿದೆ. ಈ ಸಂಬಂಧ ಎಸಿಬಿ ದಾಳಿ ನಡೆಸಿ ದಾಖಲಾತಿ ಪರಿಶೀಲನೆ ನಡೆಸುತ್ತಿದೆ.

ACB attack on CDPO office at mudhol of bagalkot
ACB attack on CDPO office at mudhol of bagalkot

ಬಾಗಲಕೋಟೆ: ಮುಧೋಳದ ರಾಯಣ್ಣ ಸರ್ಕಲ್ ಬಳಿ ಇರೋ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ, ವಿಲೇವಾರಿಯಾಗದೇ ಇರಿಸಿಕೊಂಡಿದ್ದ ನೇಮಕಾತಿ ಪತ್ರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಕಚೇರಿಯಲ್ಲಿ ಹಣಕ್ಕೆ ಡಿಮ್ಯಾಂಡ್ ಮಾಡಿ ಅಂಗನವಾಡಿ ನೇಮಕಾತಿ ಆದೇಶ ತಡೆ ಹಿಡಿದುಕೊಂಡಿದ್ದ ಸಿಬ್ಬಂದಿ ಮೇಲೆ ದಾಳಿ ಚಾಟಿ ಬೀಸಲಾಗಿದೆ. ಈ ಸಂಬಂಧ ದಾಖಲಾತಿ ಪರಿಶೀಲನೆ ನಡೆಸಲಾಗುತ್ತಿದೆ. 1 ವಾರದಿಂದ ನೇಮಕಾತಿ ಪತ್ರ ನೀಡದೇ ಪೆಂಡಿಂಗ್ ಉಳಿಸಿಕೊಂಡಿದ್ದ ಆರೋಪ ಇತ್ತು. ದಾಳಿ ವೇಳೆ 56 ಸಾವಿರ ಹಣ ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ.

ಇದನ್ನೂ ಓದಿ: ಟ್ಯೂಷನ್ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಆರೋಪ.. ಶಿಕ್ಷಕಿ ಮತ್ತು ಸ್ನೇಹಿತ ಅರೆಸ್ಟ್!

ಡಿವೈಎಸ್​ಪಿ ಸುರೇಶ್​ ರೆಡ್ಡಿ ನೇತೃತ್ವದಲ್ಲಿ ಇನ್​ಸ್ಪೆಕ್ಟರ್ ಸಮೀರ್ ಮುಲ್ಲಾ ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.