ETV Bharat / sports

ವಿಂಡೀಸ್​​​ ವಿರುದ್ಧದ ODI, T20 ಸರಣಿಯಲ್ಲಿ ಈ ನಾಲ್ವರು​​ 'ಹೆಚ್ಚು ಅರ್ಹರು'.. ಯುವಿ ಹೇಳಿದ ಆ ಪ್ಲೇಯರ್ಸ್‌___

author img

By

Published : Jan 28, 2022, 4:25 PM IST

ಕಳೆದ ವರ್ಷ ಶ್ರೀಲಂಕಾ ಪ್ರವಾಸದ ವೇಳೆ ಶಸ್ತ್ರಚಿಕಿತ್ಸೆಗೊಳಗಾಗಿ ಚೇತರಿಸಿಕೊಂಡಿರುವ ಈ ಪ್ಲೇಯರ್ ಇದೀಗ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ..

Yuvraj singh names four much deserved players
Yuvraj singh names four much deserved players

ಹೈದರಾಬಾದ್ : ಮುಂಬರುವ ವೆಸ್ಟ್​ ಇಂಡೀಸ್​ ವಿರುದ್ಧದ ಸೀಮಿತ ಓವರ್​ಗಳ ಕ್ರಿಕೆಟ್ ಸರಣಿಗೋಸ್ಕರ ಭಾರತ ತಂಡ ಈಗಾಗಲೇ ಪ್ರಕಟಗೊಂಡಿದೆ. ರೋಹಿತ್​ ಶರ್ಮಾ ನೇತೃತ್ವದ 18 ಮಂದಿ ಆಟಗಾರರಲ್ಲಿ ಕೆಲ ಹೊಸ ಪ್ರತಿಭೆಗೆ ಮಣೆ ಹಾಕಲಾಗಿದೆ.

Yuvraj singh names four much deserved players
ವೆಸ್ಟ್​ ಇಂಡೀಸ್​ ಟೂರ್ನಿಗೆ ಟೀಂ ಇಂಡಿಯಾ ತಂಡ

ಭಾರತೀಯ ಕ್ರಿಕೆಟ್ ಮಂಡಳಿಯಿಂದ ಘೋಷಣೆಯಾಗಿರುವ ತಂಡದಲ್ಲಿ ಹರಿಣಗಳ ವಿರುದ್ಧದ ಸರಣಿಗೆ ನಾಲ್ವರು ಪ್ಲೇಯರ್ಸ್ ಹೆಚ್ಚು ಅರ್ಹರು ಎಂದು ಟೀಂ ಇಂಡಿಯಾ ಮಾಜಿ ಪ್ಲೇಯರ್​ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ 2007,2011ರ ವಿಶ್ವಕಪ್​ ಹೀರೋ, ಚೈನಾಮ್ಯಾನ್ ಖ್ಯಾತಿ ಸ್ಪಿನ್ನರ್​ ಕುಲ್ದೀಪ್ ಯಾದವ್,ಬೌಲಿಂಗ್​ ಆಲ್​ರೌಂಡರ್​​ ವಾಷಿಂಗ್ಟನ್​ ಸುಂದರ್​, ದೀಪಕ್ ಹುಡಾ ಮತ್ತು ಋತುರಾಜ್ ಗಾಯ್ಕವಾಡ್​ಗೆ ಮಣೆ ಹಾಕಿದ್ದಾರೆ. ಈ ನಾಲ್ವರು ಪ್ಲೇಯರ್ಸ್​​ ಮುಂಬರುವ ಸರಣಿಯಲ್ಲಿ ಹೆಚ್ಚು ಅರ್ಹರು ಎಂದು ತಿಳಿಸಿದ್ದಾರೆ.

Yuvraj singh names four much deserved players
ತಂಡಕ್ಕೆ ವಾಷಿಂಗ್ಟನ್ ಸುಂದರ್​

ವೆಸ್ಟ್​​ ಇಂಡೀಸ್ ವಿರುದ್ಧದ ಸರಣಿಗಾಗಿ ಘೋಷಣೆಯಾಗಿರುವ ತಂಡದ ಬಗ್ಗೆ ತಮ್ಮ ವಿಚಾರ ಹಂಚಿಕೊಂಡಿರುವ ಯುವರಾಜ್ ಸಿಂಗ್​, ತಂಡದಲ್ಲಿ ಈ ನಾಲ್ವರು ಹೆಸರು ನೋಡಲು ನನಗೆ ಸಂತೋಷವಾಗುತ್ತದೆ ಎಂದಿದ್ದಾರೆ.

Yuvraj singh names four much deserved players
ತಂಡಕ್ಕೆ ಕುಲ್ದೀಪ್ ಯಾದವ್​ ಆಯ್ಕೆ

ಕಳೆದ ವರ್ಷ ಶ್ರೀಲಂಕಾ ಪ್ರವಾಸದ ವೇಳೆ ಶಸ್ತ್ರಚಿಕಿತ್ಸೆಗೊಳಗಾಗಿ ಚೇತರಿಸಿಕೊಂಡಿರುವ ಈ ಪ್ಲೇಯರ್ ಇದೀಗ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇದರ ಜೊತೆಗೆ ಬರೋಡಾ ಆಲ್​ರೌಂಡರ್​ ದೀಪಕ್ ಹೂಡಾ, ಕಳೆದ ವರ್ಷದ ಟಿ20 ವಿಶ್ವಕಪ್​ನಿಂದ ಹೊರಗುಳಿದಿದ್ದ ವಾಷಿಂಗ್ಟನ್ ಸುಂದರ್ ಕೂಡ ಇದೀಗ ತಂಡಕ್ಕೆ ಮರಳಿದ್ದು, ಇವರ ಜೊತೆಗೆ ಸಿಎಸ್​ಕೆ ಆರಂಭಿಕ ಬ್ಯಾಟರ್​ ಋತುರಾಜ್ ಗಾಯ್ಕವಾಡ್ ಕೂಡ ತಂಡದಲ್ಲಿದ್ದಾರೆ.

ಫೆಬ್ರವರಿ 6ರಿಂದ ವೆಸ್ಟ್​ ಇಂಡೀಸ್ ವಿರುದ್ಧದ ODI ಸರಣಿ ಆರಂಭಗೊಳ್ಳಲಿದೆ. ಇದರ ಬಳಿಕ ಕೋಲ್ಕತ್ತಾದಲ್ಲಿ ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ತಂಡ ಇಂತಿದೆ : ಟಿ-20 ತಂಡ : ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್(ಉಪನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿ.ಕೀ), ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಅಕ್ಷರ್​ ಪಟೇಲ್, ಯುಜುವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್​, ಅವೇಶ್ ಖಾನ್, ಹರ್ಷಲ್ ಪಟೇಲ್.

ಏಕದಿನ ತಂಡ : ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ಶಿಖರ್ ಧವನ್​, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಬ್ ಪಂತ್ (ವಿ.ಕೀ), ದೀಪಕ್​​ ಚಾಹರ್, ಶಾರ್ದೂಲ್ ಠಾಕೂರ್, ಯುಜುವೇಂದ್ರ ಚಹಲ್, ಕುಲದೀಪ್ ಯಾದವ್ , ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.