ETV Bharat / sports

ಭಾರತದ ಎದುರು ರಚಿನ್​ ವಿಶ್ವಕಪ್​ ಫೈನಲ್​ನಲ್ಲಿ ಆಡುವುದನ್ನು ನೋಡಲು ಬಯಸುತ್ತೇನೆ: ಅಜ್ಜ ಬಾಲಕೃಷ್ಣ

author img

By ETV Bharat Karnataka Team

Published : Nov 7, 2023, 5:12 PM IST

Rachin Ravindra's grandfather Balakrishna speaks to ETV Bharat: ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಅವರು ತಂದೆಯಿಂದಲೇ ಕ್ರಿಕೆಟ್​ ಕಲಿತರು. ದೋಸೆ ಸೇರಿದಂತೆ ದಕ್ಷಿಣ ಭಾರತದ ಆಹಾರವನ್ನು ರಚಿನ್​ ಇಷ್ಟಪಡುತ್ತಾರೆ. ಈಟಿವಿ ಭಾರತ್‌ನ ಕುಮಾರ ಸುಬ್ರಹ್ಮಣ್ಯ ಎಸ್ ಅವರೊಂದಿಗಿನ ವಿಶೇಷ ಸಂವಾದದಲ್ಲಿ ಅವರ ಅಜ್ಜ ಟಿ ಎ ಬಾಲಕೃಷ್ಣ ರಚಿನ್ ರವೀಂದ್ರ ಅವರ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

Rachin Ravindra
Rachin Ravindra

ಬೆಂಗಳೂರು: ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ನ ಯುವ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ತಮ್ಮ ಆಟದಿಂದ ಮಿಂಚುತ್ತಿದ್ದಾರೆ. ಕ್ರಿಕೆಟ್​ ಪ್ರೀತಿಯನ್ನು ಹೊಂದಿದ್ದ ರಚಿನ್ ರವೀಂದ್ರ ಅವರ ಪೋಷಕರು ಮಗ ಕ್ರಿಕೆಟ್​ನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಲಿ ಎಂಬ ಆಶೋತ್ತರದಿಂದ ಭಾರತದ ಮಾಜಿ ಆಟಗಾರ, ಬ್ಯಾಟಿಂಗ್ ಶ್ರೇಷ್ಠ ಸಚಿನ್ ತೆಂಡೂಲ್ಕರ್ ಮತ್ತು ಪ್ರಸ್ತುತ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಹೆಸರನ್ನು ಸೇರಿಸಿ "ರಚಿನ್​" ಎಂದು ನಾಮಕರಣ ಮಾಡಿದರು. ಎಡಗೈ ಬ್ಯಾಟರ್​ ಮತ್ತು ಬೌಲರ್​ ಆಗಿ ಕಿವೀಸ್​ ತಂಡಕ್ಕೆ ವಿಶ್ವಕಪ್​ ಪಂದ್ಯಗಳಲ್ಲಿ ಮೂರು ಶತಕ ಮತ್ತು 2 ಅರ್ಧಶತಕದಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

23 ವರ್ಷದ ಉದಯೋನ್ಮುಖ ಆಟಗಾರ ರಚಿನ್​ ರವೀಂದ್ರ ಕಿವೀಸ್​ ತಂಡದ ಫ್ಯೂಚರ್​ ಸ್ಟಾರ್ ಎಂಬುದರಲ್ಲಿ ಅನುಮಾನ ಇಲ್ಲ. ವಿಶ್ವಕಪ್​ನಲ್ಲಿ ರಚಿನ್​ ಕೇನ್​ ವಿಲಿಯಮ್ಸನ್​ ಜಾಗದಲ್ಲಿ ಮೈದಾನಕ್ಕಿಳಿದು ಅವರ ಸ್ಥಾನವನ್ನು ಸಮರ್ಥವಾಗಿ ತುಂಬಿಕೊಟ್ಟರು. ಮುಂದಿನ ದಿನಗಳಲ್ಲಿ ಈ ಯುವ ಪ್ರತಿಭೆ ಕಿವೀಸ್​ ತಂಡದ ಪರವಾಗಿ ದಾಖಲೆಗಳನ್ನು ನಿರ್ಮಿಸುತ್ತಾರೆ ಎಂಬ ನಿರೀಕ್ಷೆ ಇದೆ.

Rachin Ravindra
ರಚಿನ್ ರವೀಂದ್ರ

ಈ ಕಿವೀಸ್​ನ ಸ್ಟಾರ್​ ಆಟಗಾರ ಕನ್ನಡಿಗ ಎಂದೇ ನಾವು ಕರೆಯಬಹುದು. ರಚಿನ್​ ಅವರ ಪೋಷಕರು ಮೂಲತಃ ಕರ್ನಾಟಕದವರು. ಅವರ ಅಜ್ಜ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. 1997ರಲ್ಲಿ ರಚಿನ್​ ಪೋಷಕರು ಉದ್ಯೋಗ ನಿಮಿತ್ತ ನ್ಯೂಜಿಲೆಂಡ್​ಗೆ ಪ್ರಯಾಣಿಸಿ ಅಲ್ಲೇ ವಾಸವಾದರು. 1999ರಲ್ಲಿ ರಚಿನ್​ ಅಲ್ಲೇ ಜನಿಸಿದರು. ಅವರ ಕುಟುಂಬ ಈಗ ಅಲ್ಲಿನ ನಾಗರಿಕರಾಗಿದ್ದಾರೆ.

ಭಾರತ ಚಾಂಪಿಯನ್​ ಆಗಲಿ: 2023ರ ವಿಶ್ವಕಪ್​ನಲ್ಲಿ ರಚಿನ್​ ರವೀಂದ್ರ ಅವರ ಅಜ್ಜ ಭಾರತ ತಂಡವನ್ನು ನೋಡಲು ಬಯಸುತ್ತಾರೆ. ಅಲ್ಲದೇ ನ್ಯೂಜಿಲೆಂಡ್​ ಭಾರತದ ಎದುರಾಳಿ ಆಗಬೇಕು ಎನ್ನುವುದು ಅವರ ಇಚ್ಛೆ ಆಗಿದೆ. "ಟೀಮ್ ಇಂಡಿಯಾ ವಿಶ್ವಕಪ್‌ನಲ್ಲಿ ಉತ್ತಮವಾಗಿ ಆಡಿದೆ. ಅವರು ಇಲ್ಲಿಯವರೆಗೆ ಆಡಿದ ಪ್ರತಿ ಪಂದ್ಯವನ್ನು ಗೆದ್ದಿದ್ದಾರೆ. ನ್ಯೂಜಿಲೆಂಡ್ ಮತ್ತು ಭಾರತ ಫೈನಲ್‌ನಲ್ಲಿ ಆಡುವುದನ್ನು ನೋಡಲು ನಾನು ಇಷ್ಟಪಡುತ್ತೇನೆ. ಆ ಪಂದ್ಯ ರಚಿನ್ ರವೀಂದ್ರ ಉತ್ತಮವಾಗಿ ಆಡಲಿ, ಟೀಂ ಇಂಡಿಯಾ ಚಾಂಪಿಯನ್ ಆಗಲಿ ಎಂದು ಆಶಿಸುತ್ತೇನೆ" ಎಂದು ಬಾಲಕೃಷ್ಣ ಹೇಳಿದ್ದಾರೆ.

Rachin Ravindra
ರಚಿನ್​ ರವೀಂದ್ರ ಪೋಷಕರ ಜೊತೆ

ಸಚಿನ್, ದ್ರಾವಿಡ್​ ಅವನಿಗೆ ಇಷ್ಟ: ಮೊಮ್ಮಗನ ಕ್ರಿಕೆಟ್​ ಪ್ರೀತಿಯ ಹುಟ್ಟಿನ ಬಗ್ಗೆ ಮತ್ತು ಕಲಿಕೆ ಬಗ್ಗೆ ಮಾತನಾಡಿದ ಅವರು," ರಚಿನ್​ಗೆ ಅವರ ತಂದೆ ರವಿ ಕೃಷ್ಣಮೂರ್ತಿ ಅವರೇ ಮೊದಲ ಗುರು. ರವಿ ಕೃಷ್ಣಮೂರ್ತಿ ಅವರು ಕ್ಲಬ್ ಕ್ರಿಕೆಟ್ ಆಡಿದ ಅನುಭವವನ್ನು ಹೊಂದಿದ್ದರು. ಅವರು ಕ್ಲಬ್​ನಲ್ಲಿ ತರಬೇತಿ ನೀಡುತ್ತಾರೆ. ಅವರು ತಮ್ಮ ತಂದೆಯೊಂದಿಗೆ ಕ್ಲಬ್ ಕ್ರಿಕೆಟ್ ಪಂದ್ಯಗಳಿಗಾಗಿ ವಿವಿಧ ರಾಜ್ಯಗಳಿಗೆ ತೆರಳಿದ್ದ. ಅಲ್ಲಿಂದ ಅವನಿಗೆ ಕ್ರಿಕೆಟ್ ಮೇಲಿನ ಪ್ರೀತಿ ಬೆಳೆಯಿತು. ಅದರಂತೆ ಅವನಿಗೆ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ ಹೆಸರನ್ನು ಒಟ್ಟಿಗೆ ಸೇರಿಸಿ ನಾಮಕರಣ ಮಾಡಲಾಯಿತು. ಅವನಿಗೆ ಈ ಇಬ್ಬರು ದಿಗ್ಗಜರು ಅಚ್ಚುಮೆಚ್ಚಿನವರು" ಎಂದು ವಿವರಿಸಿದ್ದಾರೆ.

ಅಕ್ಟೋಬರ್ 5 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ 96 ಬಾಲ್​ನಿಂದ 123 ರನ್ಅನ್ನು ರಚಿನ್​ ಕಲೆಹಾಕಿದ್ದರು. ಇದು ಅವರ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ ಚೊಚ್ಚಲ ಶತಕವಾಗಿತ್ತು. ಇವರ ಆಟವನ್ನು ಕಂಡ ಭಾರತ ತಂಡದ ಕೋಚ್ ದ್ರಾವಿಡ್​ ಹೊಗಳಿಕೆಯ ಮಾತುಗಳನ್ನು ಆಡಿದ್ದರು.

  • " class="align-text-top noRightClick twitterSection" data="">

"ನ್ಯೂಜಿಲೆಂಡ್‌ನಲ್ಲಿ ರಚಿನ್ ಮತ್ತು ಕೇನ್ ವಿಲಿಯಮ್ಸನ್ ದೇಶೀಯ ಕ್ರಿಕೆಟ್‌ನಲ್ಲಿ ಒಂದೇ ತಂಡಕ್ಕೆ ಆಡುತ್ತಾರೆ. ಆದ್ದರಿಂದ ಕೇನ್ ರವೀಂದ್ರ ಅವರ ಆಟದ ಸಾಮರ್ಥ್ಯದ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ಹೀಗಾಗಿ ಕೇನ್​ ತಮ್ಮ ಸ್ಥಾನವನ್ನು ರಚಿನ್​ಗೆ ಬಿಟ್ಟುಕೊಟ್ಟರು. ಕಿವೀಸ್​ ತಂಡದಲ್ಲಿ ರವೀಂದ್ರಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ ಎಂದು ನಾನು ಭಾವಿಸುತ್ತೇನೆ. ತಂಡದಲ್ಲಿ ರಚಿನ್​ ಆಟವನ್ನು ಸಹ ಆಟಗಾರರು ಮತ್ತು ಹಿರಿಯ ಆಟಗಾರರು ಮೆಚ್ಚುತ್ತಿದ್ದಾರೆ. ಅಲ್ಲದೇ, ಭಾರತದ ಮಾಜಿ ಆಟಗಾರರು ಸಹ ರಚಿನ್​ ಪ್ರದರ್ಶನವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಅದನ್ನು ಕೇಳಲು ಸಂತೋಷವಾಗುತ್ತದೆ" ಎಂದರು.

ದಕ್ಷಿಣ ಭಾರತದ ಆಹಾರ ಹೆಚ್ಚು ಇಷ್ಟ ಪಡುತ್ತಾನೆ: ರಚಿನ್ ರವೀಂದ್ರ ಅವರ ಆಹಾರದ ಬಗ್ಗೆ ಕೇಳಿದಾಗ, ಬಾಲಕೃಷ್ಣನ್, "ರಚಿನ್ ಆಟಕ್ಕೆ ಹೆಚ್ಚು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಹೆಚ್ಚು ಡಯಟ್ ಮಾಡುತ್ತಾರೆ. ಆದರೆ ಅವರಿಗೆ ದಕ್ಷಿಣ ಭಾರತದ ಆಹಾರಗಳು ತುಂಬಾ ಇಷ್ಟ. ವಿಶೇಷವಾಗಿ ದೋಸೆ, ಇಡ್ಲಿ. ರಚಿನ್​ ಮನೆ ಅಡುಗೆಯನ್ನು ಹೆಚ್ಚು ಇಷ್ಟಪಡುತ್ತಾನೆ. ಬೆಂಗಳೂರಿಗೆ ಬಂದಾಗ ಇಷ್ಟದ ಆಹಾರಗಳನ್ನು ಸವಿಯುತ್ತಾನೆ" ಎಂದಿದ್ದಾರೆ.

ಭಾರತದ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್, ಶುಭಮನ್ ಗಿಲ್ ಮತ್ತು ರಿಷಬ್ ಪಂತ್ ಅವರಂತೆ, ರಚಿನ್ ನ್ಯೂಜಿಲೆಂಡ್‌ನಲ್ಲಿ ಭರವಸೆಯ ಉದಯೋನ್ಮುಖ ಪ್ರತಿಭೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ, ರಚಿನ್ ಈ ವಿಶ್ವಕಪ್‌ನ ಮೂರನೇ ಏಕದಿನ ಶತಕವನ್ನು ಗಳಿಸಿದರು ಮತ್ತು 25ನೇ ವರ್ಷಕ್ಕೆ ಕಾಲಿಡುವ ಮೊದಲು ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಹೆಚ್ಚು ಏಕದಿನ ಶತಕ ಗಳಿಸಿದ ಆಟಗಾರ ಎಂಬ ಖ್ಯಾತಿ ಗಳಿಸಿದ್ದಾರೆ. ಅಲ್ಲದೆ, ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ನಾನು ಹೋಗಿ ವೀಕ್ಷಿಸಿದ್ದೇನೆ ಎಂದು ಬಾಲಕೃಷ್ಣ ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನಿಯಮಗಳಿಂದಾಗಿ ವಿಶ್ವಕಪ್ ವೇಳೆ ಮೊಮ್ಮಗನನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. "ಬೆಂಗಳೂರಿನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಮೈದಾನಕ್ಕೆ ಹೋಗಿದ್ದೆ. ಖುಷಿಯಾಗಿತ್ತು. ಅಲ್ಲಿ ರಚಿನ್ ಶತಕ ಬಾರಿಸಿದ್ದ. ಪಂದ್ಯದ ನಂತರ ನಾನು ಅವನನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ಆದರೆ, ಐಸಿಸಿ ಪ್ರೋಟೋಕಾಲ್ ಪ್ರಕಾರ, ನನಗೆ ಅವಕಾಶ ನೀಡಲಿಲ್ಲ. ವಿಶ್ವಕಪ್‌ನಲ್ಲಿ ಅವರನ್ನು ಭೇಟಿ ಮಾಡಲು ಮತ್ತು ನೋಡಲು ಸಾಧ್ಯವಾಗುತ್ತಿಲ್ಲ. ಪಂದ್ಯಾವಳಿಯ ನಂತರ ಅವರು ನೇರವಾಗಿ ನ್ಯೂಜಿಲೆಂಡ್‌ಗೆ ಹೋಗುತ್ತಾರೆ. ಕಳೆದ ವರ್ಷ (2022) ಅವನು ಬೆಂಗಳೂರಿನಲ್ಲಿ ನಮ್ಮೊಂದಿಗೆ ರಜಾದಿನಗಳನ್ನು ಕಳೆದಿದ್ದಾನೆ" ಎಂದು ಬಾಲಕೃಷ್ಣ ಅವರು ಮೊಮ್ಮಗನ ಕುರಿತು ಈಟಿವಿ ಭಾರತನೊಂದಿಗೆ ಕೆಲ ವಿಚಾರಗಳನ್ನು ಹಂಚಿಕೊಂಡರು.

ರಚಿನ್ ರವೀಂದ್ರ ಅವರು 20 ಏಕದಿನಗಳಲ್ಲಿ 16 ಇನ್ನಿಂಗ್ಸ್‌ಗಳನ್ನು ಆಡಿದ್ದು, 108.54 ಸ್ಟ್ರೈಕ್ ರೇಟ್ ಮತ್ತು 47.47 ರ ಸರಾಸರಿಯಲ್ಲಿ 712 ರನ್ ಗಳಿಸಿದ್ದಾರೆ. 123 ಅವರ ಅತ್ಯುತ್ತಮ ಸ್ಕೋರ್ ಆಗಿದೆ.

ಇದನ್ನು ಓದಿ: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಬಿಗಿ ಸ್ಪರ್ಧೆ: ಈ ಮೂವರಲ್ಲಿ ನಿಮ್ಮ ಆಯ್ಕೆ ಯಾರು? ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.