ETV Bharat / sports

ತಂಡದ ಅಗ್ರ-ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟರ್​ಗಳ ಕೊರತೆ ಸೋಲಿಗೆ ಕಾರಣ: ಮಿಥಾಲಿ ರಾಜ್

author img

By

Published : Mar 10, 2022, 4:10 PM IST

ಕಿವೀಸ್​ ನೀಡಿದ್ದ 261 ರನ್​ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 198ಕ್ಕೆ ಆಲೌಟ್ ಆಗಿತ್ತು. ಆದರೆ ಚೇಸಿಂಗ್ ಆರಂಭದಲ್ಲೇ ಎಡವಿದ ಮಿಥಾಲಿ ಪಡೆ ಮೊದಲ 20 ಓವರ್​ಗಳಲ್ಲಿ ಕೇವಲ 50 ರನ್​ ಸಿಡಿಸಲಷ್ಟೇ ಶಕ್ತವಾಗಿತ್ತು. ಹಾಗಾಗಿ ಸೋಲಿಗೆ ನಿಧಾನಗತಿಯ ಬ್ಯಾಟಿಂಗ್ ಕಾರಣ ಎಂದು ನಾಯಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Mithali comment on lost against NZ
ಮಿಥಾಲಿ ರಾಜ್ ಏಕದಿನ ವಿಶ್ವಕಪ್

ಹ್ಯಾಮಿಲ್ಟನ್: ಮಧ್ಯಮ ಕ್ರಮಾಂಕದಲ್ಲಿ ಪಂದ್ಯವನ್ನು ಆಳಕ್ಕೆ ಕೊಂಡೊಯ್ಯಬಲ್ಲ ಬ್ಯಾಟರ್​ ಇಲ್ಲದಿರುದು ತಂಡದ ಅಗ್ರ ಕ್ರಮಾಂಕದ ಬ್ಯಾಟರ್​ಗಳು ಉತ್ತಮ ಪ್ರದರ್ಶನ ನೀಡದಿರುವುದು ನ್ಯೂಜಿಲ್ಯಾಂಡ್​ ವಿರುದ್ಧದ 62 ರನ್​ಗಳ ಸೋಲಿಗೆ ಕಾರಣ ಎಂದು ಭಾರತ ತಂಡದ ನಾಯಕಿ ಮಿಥಾಲಿ ರಾಜ್​ ಒಪ್ಪಿಕೊಂಡಿದ್ದಾರೆ.

ಕಿವೀಸ್​ ನೀಡಿದ್ದ 261 ರನ್​ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 198ಕ್ಕೆ ಆಲೌಟ್ ಆಗಿತ್ತು. ಆದರೆ ಚೇಸಿಂಗ್ ಆರಂಭದಲ್ಲೇ ಎಡವಿದ ಮಿಥಾಲಿ ಪಡೆ ಮೊದಲ 20 ಓವರ್​ಗಳಲ್ಲಿ ಕೇವಲ 50 ರನ್​ ಸಿಡಿಸಲಷ್ಟೇ ಶಕ್ತವಾಗಿತ್ತು.

ನಮ್ಮ ತಂಡದ ಬ್ಯಾಟಿಂಗ್ ವಿಭಾಗ, ಅದರಲ್ಲೂ ಅಗ್ರ ಮತ್ತು ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟರ್​ಗಳ ಅವಶ್ಯಕತೆಯಿದೆ. ಏಕೆಂದರೆ ಬೇರೆ ತಂಡಗಳು ಸುಲಭವಾಗಿ 250-260 ರನ್​ಗಳನ್ನು ಗಳಿಸುತ್ತಿವೆ ಎಮದು ಪಂದ್ಯದ ನಂತರ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ.

ನಾವು ಹೊಂದಿರುವ ಅಗ್ರಕ್ರಮಾಂಕವನ್ನು ನೋಡಿ, ಇದು ಚೇಸ್​ ಮಾಡಬಲ್ಲ ಮೊತ್ತ ಎಂದು ಭಾವಿಸಿದ್ದೆವು. ಆದರೆ ಸತತ ವಿಕೆಟ್​ ಕಳೆದುಕೊಂಡಿದ್ದರಿಂದ ಒತ್ತಡ ಹೆಚ್ಚಾಯಿತು. ಏಕೆಂದರೆ ನಮ್ಮ ಮಧ್ಯಮ ಕ್ರಮಾಂಕದಲ್ಲಿ ಪಂದ್ಯವನ್ನು ಆಳಕ್ಕೆ ಕೊಂಡೊಯ್ಯಬಲ್ಲ ಬ್ಯಾಟರ್​ಗಳಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಪಿಚ್​ ಬೌನ್ಸ್​ಗೆ ಹೆಚ್ಚು ಅನುಕೂಲವಾಗಿತ್ತು, ಆದರೆ ಬ್ಯಾಟ್​ ಬೀಸಲು ಕಷ್ಟವಿರಲಿಲ್ಲ. ಅವರ ಸೀಮರ್ಸ್​ಗಳು ಒಳ್ಳೆಯ ಪ್ರದೇಶದಲ್ಲಿ ಚೆಂಡುಗಳನ್ನು ಎಸೆಯುತ್ತಿದ್ದರು. ಆದರೆ ಇದು ಆಡಲು ಕಷ್ಟಕರವಾಗಿರಲಿಲ್ಲ, ನಾವು ಇನ್ನು ಚೆನ್ನಾಗಿ ಆಡಬಹುದಿತ್ತು ಎಂದು ಮಿಥಾಲಿ ರಾಜ್​ ಸೋಲಿಗೆ ಬ್ಯಾಟಿಂಗ್ ವೈಫಲ್ಯ ಕಾರಣವೆಂದು ಟೀಕಿಸಿದ್ದಾರೆ.

ಇದನ್ನೂ ಓದಿ:ಮಹಿಳಾ ವಿಶ್ವಕಪ್: ಕಿವೀಸ್ ವಿರುದ್ಧ​ 62 ರನ್​ಗಳ ಹೀನಾಯ ಸೋಲು ಕಂಡ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.