ETV Bharat / sports

WTC Final 2023: ಭಾರತದ ಸ್ಪಿನ್ ಬೌಲರ್​ಗಳು ಓವೆಲ್​ ಪಿಚ್​ನಲ್ಲೂ ಕಾಡುವ ಭಯ ಇದೆ - ಸ್ಟೀವ್​ ಸ್ಮಿತ್​​

author img

By

Published : May 31, 2023, 10:54 PM IST

ಓವೆಲ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಆಡಲು ಆಸಿಸ್​ಗೆ ಭಾರತೀಯ ಸ್ಪಿನ್​ಗಳ ಭಯ ಇದೆ ಎಂದು ಸ್ಮಿತ್​ ಹೇಳಿಕೊಂಡಿದ್ದಾರೆ.

Smith
ಸ್ಟೀವ್​ ಸ್ಮಿತ್​​

ಲಂಡನ್: ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬಂದು ಬಾರ್ಡರ್ ಗವಾಸ್ಕರ್​ ಟ್ರೋಫಿಯನ್ನು ಆಡುವಾಗಲು ಅವರಿಗಿದ್ದ ಏಕೈಕ ಭಯ ಎಂದರೆ ಭಾರತೀಯ ಸ್ಪಿನ್ನರ್​ಗಳು. ಅದರಂತೆ ಕಳೆದ ವರ್ಷ ನವೆಂಬರ್​ ಡಿಸೆಂಬರ್​ನಲ್ಲಿ ಕಾಂಗರೂ ಪಡೆ ಭಾರತಕ್ಕೆ ಬಂದಿದ್ದಾಗ ಜಡೇಜಾ ಮತ್ತು ಅಶ್ವಿನ್ ಕಾಡಿದ್ದರು. ಇಂಗ್ಲೆಂಡ್​ನ ಸ್ಪೀಡ್​ ಪಿಚ್​ನಲ್ಲೂ ಆಸಿಸ್​ ಬ್ಯಾಟರ್​ಗಳಿಗೆ ಈ ಸ್ಪಿನ್​ ಜೋಡಿಯ ಭಯ ಕಾಡುತ್ತಿದೆ. ಈ ಬಗ್ಗೆ ಸ್ಟೀವ್​ ಸ್ಮಿತ್​ ಹೇಳಿಕೊಂಡಿದ್ದಾರೆ.

ಆದರೆ, ಆಸಿಸ್​ಗೆ ಇರುವ ಒಂದು ಧೈರ್ಯ ಎಂದರೆ ಅವರಿಗೆ ಆ ಪಿಚ್​ನಲ್ಲಿ ಆಡಿರುವ ಅನುಭವ ಹೆಚ್ಚು ಎಂಬುದು. ಹೀಗಾಗಿ ಭಾರತವನ್ನು ಓವಲ್​ನಲ್ಲಿ ಮಣಿಸಿ ವಿಶ್ವ ಟೆಸ್ಟ್​ನ ಚಾಂಪಿಯನ್​ ಆಗಬೇಕು ಎಂದು ಕಮಿನ್ಸ್​ ಪಡೆ ಚಿಂತಿಸುತ್ತಿದೆ. ಇದರ ಜೊತೆಗೆ ಭಾರತದಲ್ಲಿ ಮುಖಾಮುಖಿಯಾಗಿದ್ದಾಗ ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ 1-2 ರಿಂದ ಸೋಲು ಕಂಡಿರುವುದನ್ನು ಆಸಿಸ್​ ಮರೆತಿಲ್ಲ. ಈ ಬಗ್ಗೆ ಆಸಿಸ್​ ಬ್ಯಾಟರ್​ ಸ್ಮಿತ್​ ಮಾತನಾಡಿದ್ದಾರೆ.

"ಓವಲ್ ಕೆಲವೊಮ್ಮೆ ಸ್ಪಿನ್‌ನೊಂದಿಗೆ ಉತ್ತಮವಾಗಿ ವರ್ತಿಸುತ್ತದೆ. ಕೆಲವು ಬೌಲರ್​ಗಳು ಈ ಪಿಚ್​ಗಳನ್ನು ಉತ್ತಮವಾಗಿ ಬಳಸಿಕೊಳ್ಳುತ್ತಾರೆ. ಎದುರಾಳಿಯಾಗಿ ನಾವು ಭಾರತವನ್ನು ಹೋಂದಿದ್ದೇವೆ. ಹೀಗಾಗಿ ಅವರ ಸ್ಪಿನ್​ ಬೌಲಿಂಗ್​ ಬಗ್ಗೆ ವಿಶೇಷ ಗಮನ ಇಡಬೇಕಾಗುತ್ತದೆ. ಓವೆಲ್​ ಒಂದು ಉತ್ತಮ ಮೈದಾನ. ಇದರ ಔಟ್​ ಫೀಲ್ಡ್​ ತುಂಬಾ ವೇಗ ಇದೆ ಹೀಗಾಗಿ ಬೌಂಡರಿಗಳು ಸುಲಭವಾಗಿ ಗಳಿಸಬಹುದು. ಇಂಗ್ಲೆಂಡ್​ನ ಪಿಚ್​ಗಳು ಹೆಚ್ಚು ಬೌನ್ಸ್ ಅನ್ನು ಹೊಂದಿರುತ್ತದೆ" ಎಂದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾದ ನಡುವೆ ಜೂನ್​ 7ರಿಂದ 11 ರ ವರೆಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ನಡೆಯಲಿದೆ. ಭಾರತದಲ್ಲಿ ನಡೆದ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಫಲಿತಾಂಶದಿಂದ ಎರಡೂ ತಂಡಗಳು ಫೈನಲ್​ಗೆ ಕ್ವಾಲಿಫೈಯರ್​ ಆದವು. 2019 -21 ರ ಮೊದಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲೂ ಭಾರತ ಆಡಿತ್ತು ಆದರೆ ನ್ಯೂಜಿಲೆಂಡ್​ ಮೀಸಲು ದಿನದಲ್ಲಿ ಪಂದ್ಯ ಗೆದ್ದುಕೊಂಡಿತ್ತು. ಇಂಗ್ಲೆಂಡ್​ನಲ್ಲಿ ಅಕಾಲಿಕ ಮಳೆಯ ಮುನ್ಸೂಚನೆ ಇರುವುದರಿಂದ ಜೂನ್​ ​12ನೇ ತಾರೀಖನ್ನು ಮೀಸಲು ದಿನವಾಗಿ ಇಡಲಾಗಿದೆ.

ಆಸ್ಟ್ರೇಲಿಯ ಇತ್ತೀಚೆಗೆ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿತು, ಆದರೆ ಸರಣಿಯು ಕೊನೆಯಲ್ಲಿ ಸ್ಪಿನ್ನರ್​ಗಳ ಮೇಲೆ ಆಸಿಸ್​ ನಿಯಂತ್ರಣ ಕಂಡುಕೊಂಡು ಕ್ಲೀನ್ ಸ್ವೀಪ್​ ಆಗುವುದರಿಂದ ತಪ್ಪಿಸಿಕೊಂಡಿದ್ದರು. ಕಮಿನ್ಸ್​ ತಾಯಿಯ ಅನಾರೋಗ್ಯದ ಕಾರಣ ತವರಿಗೆ ಮರಳಿದ್ದಕ್ಕೆ ಸ್ಮಿತ್​ ನಾಯಕತ್ವದಲ್ಲಿಕೊನೆಯ ಪಂದ್ಯ ನಡೆದಿತ್ತು. ಅದನ್ನು ಕಾಂಗರೂ ಪಡೆ ಗೆಲುವು ಸಾಧಿಸಿತ್ತು. ಇದೇ ಭರವಸೆಯಲ್ಲಿ ಆಸ್ಟ್ರೇಲಿಯಾ ತಂಡ ಕಣಕ್ಕಿಳಿಯುತ್ತಿದೆ.

"ಓವೆಲ್​ನಲ್ಲಿ ಸಾಕಷ್ಟು ಅಭಿಮಾನಿಗಳು ಇರುತ್ತಾರೆ ಎಂದು ನನಗೆ ಖಾತ್ರಿಯಿದೆ, ಬಹುಶಃ ಆಸ್ಟ್ರೇಲಿಯನ್ನರಿಗಿಂತ ಹೆಚ್ಚು ಭಾರತೀಯರು ಇರುತ್ತಾರೆ ಆದರೆ ಇದು ತುಂಬಾ ಖುಷಿಯಾಗುತ್ತದೆ. ಎಲ್ಲಾ ಆಟಗಾರರು ಫೈನಲ್​ ಪಂದ್ಯಕ್ಕಾಗಿ ಉತ್ಸುಕರಾಗಿದ್ದಾರೆ" ಎಂದು ಸ್ಮಿತ್​ ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ತೆರಳಿರುವ ಐಸಿಸಿ ಮುಖ್ಯಸ್ಥರು: ವಿಶ್ವಕಪ್​ಗೆ ಪಾಕ್​ ತಂಡ ಭಾರತಕ್ಕೆ ಬರುವ ಬಗ್ಗೆ ಚರ್ಚೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.