ETV Bharat / sports

ಗ್ಲೌಸ್​ಗೆ ಚೆಂಡು ತಾಗಿದರೂ ಔಟ್​ ನೀಡದ 3ನೇ ಅಂಪೈರ್​ : ಹುದ್ದೆಯಿಂದ ಕಿತ್ತು ಬಿಸಾಕಿ ಎಂದು ನೆಟ್ಟಿಗರ ಆಕ್ರೋಶ

author img

By

Published : Oct 4, 2021, 2:27 PM IST

ಆರ್​ಸಿಬಿ ಇನ್ನಿಂಗ್ಸ್ ವೇಳೆ ರವಿ ಬಿಷ್ಣೋಯ್​ ಎಸೆದ 7ನೇ ಓವರ್​ನ 3ನೇ ಎಸೆತ ವಿಕೆಟ್​ ಕೀಪರ್​ ರಾಹುಲ್ ಕೈಸೇರಿತು. ಬ್ಯಾಟ್​ಗೆ ತಾಗಿದ ಶಬ್ಧ ಕೇಳಿ ಬಂದಿದ್ದರಿಂದ ರಾಹುಲ್ ಆತ್ಮವಿಶ್ವಾಸದಿಂದ ಮೈದಾನದ ಅಂಪೈರ್ ಔಟ್ ನೀಡದಿದ್ದರೂ ರಿವ್ಯೂವ್ ತೆಗೆದುಕೊಂಡರು..

ಮೂರನೇ ಅಂಪೈರ್ ಪ್ರಮಾದ
ಮೂರನೇ ಅಂಪೈರ್ ಪ್ರಮಾದ

ಶಾರ್ಜಾ : ಐಪಿಎಲ್​ನಲ್ಲಿ ಕಳಪೆ ಅಂಪೈರಿಂಗ್ ವಿರುದ್ಧ ಟೀಕೆ ಮುಂದುವರಿದಿದ್ದು ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟರ್​ ದೇವದತ್​ ಪಡಿಕ್ಕಲ್​​ ಅವರ ಗ್ಲೌಸ್​ಗೆ ಚೆಂಡು ತಾಗಿದರೂ 3ನೇ ಅಂಪೈರ್ ನಾಟೌಟ್​ ತೀರ್ಪು ನೀಡಿದ್ದು ಕ್ರಿಕೆಟ್​ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಆರ್​ಸಿಬಿ ಇನ್ನಿಂಗ್ಸ್ ವೇಳೆ ರವಿ ಬಿಷ್ಣೋಯ್​ ಎಸೆದ 7ನೇ ಓವರ್​ನ 3ನೇ ಎಸೆತ ವಿಕೆಟ್​ ಕೀಪರ್​ ರಾಹುಲ್ ಕೈಸೇರಿತು. ಬ್ಯಾಟ್​ಗೆ ತಾಗಿದ ಶಬ್ಧ ಕೇಳಿ ಬಂದಿದ್ದರಿಂದ ರಾಹುಲ್ ಆತ್ಮವಿಶ್ವಾಸದಿಂದ ಮೈದಾನದ ಅಂಪೈರ್ ಔಟ್ ನೀಡದಿದ್ದರೂ ರಿವ್ಯೂವ್ ತೆಗೆದುಕೊಂಡರು.

ಟಿವಿ ರಿಪ್ಲೇಯಲ್ಲಿ ಚೆಂಡು ದೇವದತ್​ ಪಡಿಕ್ಕಲ್ ಗ್ಲೌಸ್​ಗೆ ತಾಗಿರುವುದು ಅಲ್ಟ್ರಾಎಡ್ಜ್​ನಲ್ಲಿ ಖಚಿತವಾಗಿ ಕಂಡು ಬಂದಿತು. ಆದರೆ, 3ನೇ ಅಂಪೈರ್​ ಕೆ ಶ್ರೀನಿವಾಸನ್​ ಚೆಂಡು ಬ್ಯಾಟ್​ಗೆ ತಾಗಿಲ್ಲ ಎಂದು ನಾಟೌಟ್​ ತೀರ್ಪು ನೀಡಿದರು. ಈ ತೀರ್ಪಿನಿಂದ ರಾಹುಲ್​ ದಿಗ್ಭ್ರಾಂತರಾದರು. ಮೈದಾನದ ಅಂಪೈರ್​ ಜೊತೆಗೆ ಮತ್ತೊಮ್ಮೆ ಮಾತುಕತೆಗೆ ಮುಂದಾದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಪಡಿಕ್ಕಲ್​ 40 ರನ್​ಗಳಿಸಿ ಔಟಾದರು.

ಈ ಪಂದ್ಯದಲ್ಲಿ 165 ರನ್​ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 158ರನ್​ಗಳಿಸಿ 6 ರನ್​ಗಳಿಂದ ಸೋಲು ಕಂಡಿತು. ಒಂದು ವೇಳೆ ಪಡಿಕ್ಕಲ್​ ಔಟಾಗಿದ್ದರೆ ಪಂದ್ಯದ ಫಲಿತಾಂಶ ಬೇರೆಯಾಗುವ ಅವಕಾಶ ಕೂಡ ಇತ್ತು.

ಅಂಪೈರ್​​ರನ್ನು ತಕ್ಷಣವೇ ಹುದ್ದೆಯಿಂದ ಕಿತ್ತು ಬಿಸಾಕಿ

ಟಿವಿ ರಿಪ್ಲೇಯಲ್ಲಿ ಚೆಂಡು ಪಡಿಕ್ಕಲ್ ಗ್ಲೌಸ್​ಗೆ ತಾಗಿರುವುದು ಅಲ್ಟ್ರಾಎಡ್ಜ್​ನಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದರು ನಾಟೌಟ್ ತೀರ್ಪು ನೀಡಿದ 3ನೇ ಅಂಪೈರ್ ಕೆ.ಶ್ರೀನಿವಾಸನ್​ ಅವರ ವಿರುದ್ಧ ಮಾಜಿ ಕ್ರಿಕೆಟಿಗರು ಸೇರಿದಂತೆ ಕ್ರಿಕೆಟ್​ ಅಭಿಮಾನಿಗಳು ಅಂಪೈರ್​ ಹುದ್ದೆಯಿಂದ ಕಿತ್ತು ಬಿಸಾಕಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನು ಓದಿ:IPL 2021: ಪಂಜಾಬ್​ ಕಿಂಗ್ಸ್​ ಮಣಿಸಿ 3ನೇ ತಂಡವಾಗಿ ಪ್ಲೇ ಆಫ್ ತಲುಪಿದ RCB

ETV Bharat Logo

Copyright © 2024 Ushodaya Enterprises Pvt. Ltd., All Rights Reserved.