ETV Bharat / sports

'ನಮ್ಮಲ್ಲಿ ಅಸೂಯೆ ಜಾಸ್ತಿ, ಕೋಚ್​ ಆದಾಗ ವೈಫಲ್ಯ ಅನುಭವಿಸಲೆಂದು ಸಾಕಷ್ಟು ಜನ ಬಯಸಿದ್ದರು'

author img

By

Published : Apr 26, 2022, 5:08 PM IST

ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ಸುದೀರ್ಘ ಅವಧಿಯ ಬಗ್ಗೆ ಬ್ರಿಟಿಷ್​ ಪತ್ರಿಕೆಯೊಂದು ನಡೆಸಿರುವ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿರುವ ರವಿಶಾಸ್ತ್ರಿ, ತಾವು ಯಾವುದೇ ಕೋಚಿಂಗ್​ ಬ್ಯಾಡ್ಜ್​ ಇಲ್ಲದೇ ರಾಷ್ಟ್ರೀಯ ತಂಡದ ಜವಾಬ್ದಾರಿ ತೆಗೆದುಕೊಂಡಿದ್ದರಿಂದ ತುಂಬಾ ಜನರು ನನ್ನ ಬಗ್ಗೆ ಅಸೂಯೆ ವ್ಯಕ್ತಪಡಿಸಿದ್ದರು ಎಂದು ಹೇಳಿದರು.

Former Indian chief coach Ravi Shastri
ರವಿಶಾಸ್ತ್ರಿ , ಭಾರತ ತಂಡದ ಮುಖ್ಯಕೋಚ್

ಮುಂಬೈ: ಭಾರತ ತಂಡದ ಮುಖ್ಯ ಕೋಚ್​ ಆಗಿ ಜವಾಬ್ದಾರಿ ವಹಿಸಿಕೊಂಡಾಗ ಅಸೂಯೆಯಿಂದ ಕೆಲವು ಗುಂಪು ನಾನು ವಿಫಲನಾಗಬೇಕೆಂದು ಎದುರು ನೋಡುತ್ತಿತ್ತು. ಆದರೆ ಇಂತಹವುಗಳನ್ನು ನಿಭಾಯಿಸಲು ಡ್ಯೂಕ್​ ಬಾಲ್​ಗಳ ಚರ್ಮಕ್ಕಿಂತ ಅಗತ್ಯವಾದ ಸಾಮರ್ಥ್ಯ ಹೊಂದಿದ್ದೇನೆ ಎಂಬುದು ನಂಗೊತ್ತಿತ್ತು ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಶಾಸ್ತ್ರಿ 2021ರ ಟಿ20 ವಿಶ್ವಕಪ್​ ಬಳಿಕ ಭಾರತ ತಂಡದ ಮುಖ್ಯ ಕೋಚ್​ ಹುದ್ದೆಯಿಂದ ಕೆಳಗಿಳಿದಿದ್ದರು. 2014ರಿಂದ 2016 ರವರೆಗೆ ಭಾರತದ ಡೈರೆಕ್ಟರ್​ ಆಗಿದ್ದ ಅವರು ಮತ್ತೆ 2017ರಿಂದ 2021ರ ವರೆಗೆ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ಸುದೀರ್ಘ ಅವಧಿಯ ಬಗ್ಗೆ ಬ್ರಿಟಿಷ್​ ಪತ್ರಿಕೆ ನಡೆಸಿರುವ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿರುವ ಶಾಸ್ತ್ರಿ, ತಾವು ಯಾವುದೇ ಕೋಚಿಂಗ್​ ಬ್ಯಾಡ್ಜ್​ ಇಲ್ಲದೆ ರಾಷ್ಟ್ರೀಯ ತಂಡದ ಜವಾಬ್ದಾರಿ ತೆಗೆದುಕೊಂಡಿದ್ದರಿಂದ ತುಂಬಾ ಜನ ನನ್ನ ಬಗ್ಗೆ ಅಸೂಯೆ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.

ನನ್ನಲ್ಲಿ ಲೆವೆಲ್ ಒನ್​? ಅಥವಾ ಲೆವೆಲ್​ 2? ಅಂತಹ ಯಾವುದೇ ಕೋಚಿಂಗ್​ ಬ್ಯಾಡ್ಜ್​ಗಳಿರಲಿಲ್ಲ. ಅದರ ಅಗತ್ಯವೂ ಇರಲಿಲ್ಲ. ಆದರೆ ಭಾರತದಂತಹ ದೇಶದಲ್ಲಿ, ಯಾವಾಗಲೂ ಆಸೂಯೆ ಅಥವಾ ನಿಮ್ಮ ವೈಫಲ್ಯವನ್ನು ಬಯಸುವ ಒಂದು ಗುಂಪು ಇರುತ್ತದೆ. ನಾನು ಡ್ಯೂಕ್​ ಚೆಂಡಿಗಿಂತಲೂ ದಪ್ಪ ಚರ್ಮವನ್ನು ಹೊಂದಿದ್ದಿರಂದ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಲಿಲ್ಲ ಎಂದರು.

2014ರಲ್ಲಿ ಭಾರತ ತಂಡ ಇಂಗ್ಲೆಂಡ್​ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಓವೆಲ್​ನಲ್ಲಿ ಕಾಮೆಂಟರಿ ಮಾಡುತ್ತಿದ್ದಾಗ ಬಿಸಿಸಿಐ ನನಗೆ ಟೀಮ್ ಇಂಡಿಯಾದ ಡೈರೆಕ್ಟರ್​ ಆಗಿ ಅಧಿಕಾರ ವಹಿಸಿಕೊಳ್ಳುವಂತೆ ಸೂಚನೆ ನೀಡಿತು. ನನಗೆ ಈ ಕುರಿತಾಗಿ ಯಾವುದೇ ಮುನ್ನೆಚ್ಚರಿಕೆ ನೀಡಿರಲಿಲ್ಲ. ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ನಾನು ಓವೆಲ್​ನಲ್ಲಿ ಕಾಮೆಂಟರಿ ಮಾಡುತ್ತಿದ್ದೆ, ಬಿಡುವಿನ ವೇಳೆ ಮೊಬೈಲ್ ನೋಡಿದಾಗ ಆರೇಳು ಮಿಸ್​ ಕಾಲ್ಸ್ ಇದ್ದವು. 7 ಕರೆಗಳು? ಏನಾಗಿರಬಹುದು? ಎಂದೆನಿಸಿತು. "ನಾಳೆಯಿಂದಲೇ ನೀವು ಅಧಿಕಾರ ವಹಿಸಿಕೊಳ್ಳಬೇಕೆಂದು ಬಯಸುತ್ತೇವೆ" ಎಂದು ಬಿಸಿಸಿಐ ತಿಳಿಸಿತು. ನಾನು ನನ್ನ ಕುಟುಂಬ ಮತ್ತು ಕಮರ್ಸಿಯಲ್ ಪಾರ್ಟ್ನರ್​​ಗಳೊಂದಿಗೆ ಮಾತನಾಡಬೇಕೆಂದು ತಿಳಿಸಿದೆ. ಆದರೆ ಎಲ್ಲವನ್ನೂ ನಾವೇ ನೋಡಿಕೊಳ್ಳುವುದಾಗಿ ಅವರು ತಿಳಿಸಿದರು.

ನಾನು ನೇರವಾಗಿ ಕಾಮೆಂಟರಿ ಬಾಕ್ಸ್​ನಿಂದ ಏಕದಿನ ಸರಣಿಯ ಸಿದ್ಧತೆಯಲ್ಲಿದ್ದ ಭಾರತ ತಂಡ ಸೇರಿಕೊಂಡೆ. ತಕ್ಷಣದಲ್ಲೇ ನನ್ನ ಕೆಲಸ ಬದಲಾಗಿತ್ತು. ಬೇಕಾದರೆ ನೀವು ನಾನು ಆ ಸಂದರ್ಭದಲ್ಲಿ ನಾನು ಜೀನ್ಸ್​ ಮತ್ತು ಲೂಫರ್ಸ್​ನಲ್ಲಿದ್ದುದನ್ನು ಕಾಣಬಹುದು ಎಂದು ತಾವೂ ಭಾರತ ತಂಡಕ್ಕೆ ಸೇರಿದ ಕ್ಷಣಗಳನ್ನು ಸ್ಮರಿಸಿದರು.

ಶಾಸ್ತ್ರಿ ಕೋಚಿಂಗ್ ಅವಧಿಯಲ್ಲಿ ಭಾರತ ತಂಡ ಐಸಿಸಿ ಟ್ರೋಫಿ ಗೆಲ್ಲಲಿಲ್ಲ ಎನ್ನುವುದನ್ನು ಬಿಟ್ಟರೆ, ನಿಜಕ್ಕೂ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಬಹಳ ಬಲಿಷ್ಠವಾಗಿತ್ತು. ಆಸ್ಟ್ರೇಲಿಯಾದಲ್ಲಿ 2 ಟೆಸ್ಟ್​ ಸರಣಿ, ಇಂಗ್ಲೆಂಡ್​ನಲ್ಲಿ ಟೆಸ್ಟ್​ ಸರಣಿ ಜಯ ಮತ್ತು ದೀರ್ಘಕಾಲದವರೆಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಪ್ರಾಬಲ್ಯಯುತ ನಂಬರ್ 1 ತಂಡವಾಗಿ ಗುರುತಿಸಿಕೊಂಡಿತ್ತು.

ಇದನ್ನೂ ಓದಿ:ಈ ಯುವಕ​ ಐಪಿಎಲ್​ನ ಶ್ರೇಷ್ಠ ಡೆತ್​ ಬೌಲರ್: ಕಗಿಸೋ ರಬಾಡ ಮೆಚ್ಚುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.