ETV Bharat / sports

ಕೊರೊನಾದಿಂದ ಗುಣಮುಖ: ದುಬೈನಲ್ಲಿ ಭಾರತ ತಂಡ ಸೇರಿದ ಕೋಚ್​ ರಾಹುಲ್​ ದ್ರಾವಿಡ್​

author img

By

Published : Aug 28, 2022, 10:22 AM IST

ಏಷ್ಯಾ ಕಪ್​ ಆರಂಭಕ್ಕೂ ಮೊದಲು ಕೊರೊನಾಗೆ ತುತ್ತಾಗಿದ್ದ ಭಾರತ ತಂಡದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಅವರು ಇದೀಗ ಸೋಂಕಿನಿಂದ ಚೇತರಿಸಿಕೊಂಡು ದುಬೈಗೆ ಮರಳಿ ತಂಡ ಸೇರಿಕೊಂಡಿದ್ದಾರೆ.

team-india-head-coach-rahul-dravid
ಭಾರತ ತಂಡ ಸೇರಿದ ಕೋಚ್​ ರಾಹುಲ್​ ದ್ರಾವಿಡ್​

ದುಬೈ: ಏಷ್ಯಾ ಕಪ್​ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಕೊರೊನಾಗೆ ತುತ್ತಾಗಿದ್ದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಇದೀಗ ಚೇತರಿಸಿಕೊಂಡಿದ್ದು, ದುಬೈಗೆ ಬಂದಿಳಿದು ತಂಡ ಸೇರಿಕೊಂಡಿದ್ದಾರೆ.

ಏಷ್ಯಾ ಕಪ್​ ಆರಂಭಕ್ಕೂ ಮೊದಲು ಸೋಂಕಿಗೀಡಾಗಿದ್ದ ದ್ರಾವಿಡ್​ ಕೆಲ ದಿನಗಳಿಂದ ಕ್ವಾರಂಟೈನ್​ ಆಗಿದ್ದರು. ಅವರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್​ ಬಂದಿದೆ. ಹೀಗಾಗಿ ನಿನ್ನೆಯೇ ದುಬೈಗೆ ಹಾರಿ ತಂಡವನ್ನು ಸೇರಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಅವರಿಗೆ ಕೊರೊನಾ ಕಾಣಿಸಿಕೊಂಡ ಕಾರಣ ಜಿಂಬಾಬ್ವೆ ಸರಣಿಗೆ ಹಂಗಾಮಿ ಕೋಚ್​ ಆಗಿ ಕೆಲಸ ಮಾಡಿದ್ದ ವಿವಿಎಸ್​ ಲಕ್ಷ್ಮಣ್​ ಅವರು ಏಷ್ಯಾ ಕಪ್​ಗಾಗಿ ದುಬೈಗೆ ತೆರಳಿದ್ದರು. ತಂಡದ ಅಭ್ಯಾಸದ ವೇಳೆ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ ಮುಖ್ಯಸ್ಥರಾಗಿರುವ ಲಕ್ಷ್ಮಣ್​ ಮುಂದೆ ನಿಂತು ಅಗತ್ಯ ಸಲಹೆ ನೀಡಿದ್ದರು.

ಇದೀಗ ದ್ರಾವಿಡ್​ ಆಗಮಿಸಿದ್ದು ವಿವಿಎಸ್​ ಲಕ್ಷ್ಮಣ್​ ತವರಿಗೆ ಮರಳುವ ಸಾಧ್ಯತೆ ಇದೆ. ಈ ಮೊದಲು ಬಿಸಿಸಿಐ ಕೂಡ ರಾಹುಲ್​ ದ್ರಾವಿಡ್​ ಅವರು ಚೇತರಿಸಿಕೊಳ್ಳುವವಗೆ ವಿವಿಎಸ್​ ಲಕ್ಷ್ಮಣ್​ ಹಂಗಾಮಿ ಕೋಚ್​ ಆಗಿ ಕೆಲಸ ಮಾಡಲಿದ್ದಾರೆ. ದ್ರಾವಿಡ್​ ಚೇತರಿಸಿಕೊಂಡ ಬಳಿಕ ತಂಡ ಸೇರಲಿದ್ದಾರೆ ಎಂದು ತಿಳಿಸಿತ್ತು. ಭಾರತ ಮತ್ತು ಪಾಕಿಸ್ತಾನ ಪಂದ್ಯ ಇಂದು ಸಂಜೆ 7.30 ಕ್ಕೆ ಆರಂಭವಾಗಲಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್​ಗೆ ಕೋವಿಡ್ ದೃಢ: ಬಿಸಿಸಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.