ETV Bharat / sports

ಕೃನಾಲ್ ​ಪಾಂಡ್ಯ ಜೊತೆ ಅಶಿಸ್ತು ವರ್ತನೆ: ದೇಶೀಯ ಕ್ರಿಕೆಟ್​ನಿಂದ ದೀಪಕ್​ ಹೂಡಾ ಅಮಾನತು

author img

By

Published : Jan 22, 2021, 3:22 PM IST

ಕೃನಾಲ್​ ಪಾಂಡ್ಯ ಜೊತೆ ವಾಗ್ವಾದ ನಡೆಸಿದ್ದ ವಿಚಾರವಾಗಿ ದೀಪಕ್​​ ಹೂಡಾ ಅವರನ್ನು ಪ್ರಸಕ್ತ ದೇಶೀಯ ಋತುವಿನಲ್ಲಿ ಬರೋಡಾ ತಂಡವನ್ನು ಪ್ರತಿನಿಧಿಸದಂತೆ ಬರೋಡಾ ಕ್ರಿಕೆಟ್ ಅಸೋಸಿಯೇಷನ್​ ತೀರ್ಮಾನ ಕೈಗೊಂಡಿದೆ.

BCA suspends Hooda for current domestic season
ಕೃನಾಲ್​ ಪಾಂಡ್ಯ ಮತ್ತು ದೀಪಕ್​ ಹೂಡಾ

ನವದೆಹಲಿ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ತಂಡದ ನಾಯಕ ಕೃನಾಲ್​ ಪಾಂಡ್ಯ ಅವರೊಂದಿಗೆ ಅಶಿಸ್ತಿನಿಂದ ವರ್ತಿಸಿದ ಕಾರಣ ಈ ಋತುವಿನ ದೇಶೀಯ ಕ್ರಿಕೆಟ್​ನಿಂದ ಕ್ರಿಕೆಟಿಗ ದೀಪಕ್​ ಹೂಡಾ ಅವರನ್ನು ಬರೋಡಾ ಕ್ರಿಕೆಟ್​ ಅಸೋಸಿಯೇಷನ್​ (ಬಿಸಿಎ) ಅಮಾನತುಗೊಳಿಸಿದೆ.

ಬಿಸಿಎಯ ಕೆಲ ಸದಸ್ಯರ ವಿರೋಧದ ನಡುವೆಯೂ ಗುರುವಾರ (ಜನವರಿ 21) ಸುಪ್ರೀಂ ಕೌನ್ಸಿಲ್ ಈ ನಿರ್ಧಾರ ಕೈಗೊಂಡಿದೆ. ಕೃನಾಲ್ ಪಾಂಡ್ಯ ಅವರೊಂದಿಗೆ ವಾಗ್ವಾದ ನಡೆಸಿದ್ದ ಹೂಡಾ ಜನವರಿ 10ರಂದು ನಡೆದ ಟೂರ್ನಿಯ ಮೊದಲ ಪಂದ್ಯದಿಂದ ಹೊರ ನಡೆದಿದ್ದರು. ಈ ಅತಿರೇಕದ ವರ್ತನೆ ಬಿಸಿಎಗೆ ಕೆಂಗಣ್ಣಿಗೆ ಗುರಿಯಾಗಿತ್ತು.

ತಂಡದ ವ್ಯವಸ್ಥಾಪಕ ಮತ್ತು ತರಬೇತುದಾರರು ನೀಡಿದ ವರದಿಗಳು ಮತ್ತು ಹೂಡಾ ಅವರೊಂದಿಗಿನ ಮಾತುಕತೆ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಸಿಎ ಮಾಧ್ಯಮ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಸತ್ಯಜಿತ್ ಗೇಕ್ವಾಡ್ ಹೇಳಿದರು.

ಇದನ್ನೂ ಓದಿ...ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ: ಪಾಂಡ್ಯ ಜೊತೆ ಜಗಳದಿಂದ ತಂಡ ತೊರೆದ ಹೂಡಾ

ಸದ್ಯ ಜರುಗುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಮೆಂಟ್ ಮತ್ತು ಮುಂಬರುವ ಯಾವುದೇ ದೇಶೀಯ ಸ್ಪರ್ಧೆಯಲ್ಲಿ ಹೂಡಾ ಭಾಗವಹಿಸುವಂತಿಲ್ಲ. 2021-22ರ ಕ್ರೀಡಾ ಋತುವಿನಲ್ಲಿ ಹೂಡಾ ಮತ್ತೆ ಬರೋಡಾ ಪರ ಆಡಬಹುದು ಎಂದು ಗೇಕ್ವಾಡ್ ತಿಳಿಸಿದರು.

ಬಿಸಿಎ ಜಂಟಿ ಕಾರ್ಯದರ್ಶಿ ಪರಾಗ್ ಪಟೇಲ್ ಈ ಕುರಿತು ಹೇಳಿಕೆ ನೀಡಿದ್ದು, ಹೂಡಾ ಅವರು ತಮ್ಮ ಸಮಸ್ಯೆಗಳನ್ನು ಮ್ಯಾನೇಜ್ಮೆಂಟ್​ ಜೊತೆಗೆ ಹಂಚಿಕೊಳ್ಳದೆ ತಂಡದಿಂದ ಹೊರನಡೆಯುವ ಮೂಲಕ ತಪ್ಪು ಮಾಡಿದ್ದಾರೆ. ತನಗೆ ತಾನೇ ನಿರ್ಧಾರ ತೆಗೆದುಕೊಳ್ಳುವುದು ತಪ್ಪು. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದರು.

ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಗೆ ಬರೋಡಾದ ಉಪನಾಯಕನಾಗಿ ನೇಮಕಗೊಂಡಿದ್ದ ಹೂಡಾ, ಜನವರಿ 9ರಂದು ಪಾಂಡ್ಯ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ ನಂತರ ತಂಡವನ್ನು ತ್ಯಜಿಸಿ ಹೋಟೆಲ್ ತೊರೆದಿದ್ದರು. ಮತ್ತು ಅಭ್ಯಾಸದ ಅವಧಿಯಲ್ಲಿ ಪಾಂಡ್ಯ ನಿಂದಿಸಿದ್ದಾರೆ ಎಂದು ಆರೋಪಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.