ETV Bharat / sports

ಈ ಸೋಲು ನಮಗೆ 19 ಓವರ್​ಗಳಲ್ಲಿ ಪಂದ್ಯ ಮುಗಿಸಬೇಕೆಂಬ ಪಾಠ ಕಲಿಸಿದೆ : ಅನಿಲ್‌ ಕುಂಬ್ಳೆ

author img

By

Published : Sep 22, 2021, 5:20 PM IST

ಲೆಜೆಂಡರಿ ಸ್ಪಿನ್ನರ್​ ಕೊನೆಯ ಓವರ್​ ಬೌಲಿಂಗ್ ಮಾಡಿದ ಕಾರ್ತಿಕ್ ತ್ಯಾಗಿ ಅವರಿಗೆ ಕ್ರೆಡಿಟ್​ ನೀಡಿದ್ದಾರೆ. "ಕೊನೆಯ ಓವರ್​ ಬೌಲಿಂಗ್​ ಮಾಡಿದ ತ್ಯಾಗಿಗೆ ಕ್ರೆಡಿಟ್ ಸಲ್ಲಬೇಕು. ಅವರು ಆಫ್ ಸ್ಟಂಪ್‌ನ ಹೊರಗೆ ವೈಡ್​ ಬೌಲಿಂಗ್ ಮಾಡಲು ಹೊರಟಿದ್ದರು ಎಂಬುದು ಸ್ಪಷ್ಟವಾಗಿತ್ತು. ಆದರೂ ನಮ್ಮ ಬ್ಯಾಟರ್‌ಗಳು ಸರಿಯಾದ ಆಯ್ಕೆ ಮಾಡುವಲ್ಲಿ ವಿಫಲರಾದರು..

Losing IPL games narrowly has become a pattern for Punjab Kings
ಅನಿಲ್ ಕುಂಬ್ಳೆ

ದುಬೈ : ಐಪಿಎಲ್​ನಲ್ಲಿ ಕಡಿಮೆ ಅಂತರದಿಂದ ಸೋಲು ಕಾಣುವುದು ಪಂಜಾಬ್​ ಕಿಂಗ್ಸ್​ಗೆ ಆಭರಣವಾಗಿಬಿಟ್ಟಿದೆ. ಈ ಎರಡು ರನ್​ಗಳ ಸೋಲನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಕೋಚ್​ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಪಂಜಾಬ್​ ಮಂಗಳವಾರ ನಡೆದ ಪಂದ್ಯದಲ್ಲಿ ಕಾರ್ತಿಕ್ ತ್ಯಾಗಿ ಎಸೆದ ಕೊನೆಯ ಓವರ್​ನಲ್ಲಿ 4 ರನ್​ಗಳಿಸಿಲಾಗದೇ 2 ರನ್​ಗಳಿಂದ ಸೋಲು ಕಂಡಿತು. ಪೂರನ್​, ಮಾರ್ಕ್ರಮ್, ದೀಪಕ್​ ಹೂಡಾ ಹಾಗೂ ಅಲೆನ್​ ಕೇವಲ 4 ರನ್​ಗಳಿಸುವಲ್ಲಿ ವಿಫಲರಾದರು.

"ಈ ರೀತಿ ಸೋಲು ಕಾಣುವುದು ನಮಗೆ ಆಭರಣವಾಗಿಬಿಟ್ಟಿದೆ. ಅದರಲ್ಲೂ ದುಬೈನಲ್ಲಿ ಅದು ನಮಗೆ ಮತ್ತೊಮ್ಮೆ ತೋರಿಸಿದೆ. ಆದರೆ, ಇದು ನಮಗೆ ಇನ್ಮುಂದೆ ಪಂದ್ಯವನ್ನು ಕೇವಲ 19 ಓವರ್​ಗಳಲ್ಲಿ ಮುಗಿಸುವುದು ಅಗತ್ಯ ಎಂದು ಸ್ಪಷ್ಟವಾದ ಪಾಠವನ್ನು ಕಲಿಸಿದೆ. ಅದೇ ನಮ್ಮ ಮುಂದಿನ ವಿಧಾನ " ಎಂದು ಕುಂಬ್ಳೆ ಪಂದ್ಯ ಮುಗಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

"ದುರದೃಷ್ಟವಶಾತ್, ನಾವು ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋಗುತ್ತೇವೆ. ಕೊನೆಯ ಒಂದೆರಡು ಎಸೆತಗಳಲ್ಲಿ ಅದೃಷ್ಟದೊಂದಿಗೆ ಹೋಗುತ್ತೇವೆ. ಅಲ್ಲದೆ ಈ ಎಸೆತಗಳಲ್ಲಿ ಹೊಸ ಬ್ಯಾಟ್ಸ್‌ಮನ್ಸ್​ಗಳಿಗೆ ಅದೃಷ್ಟದ ಆಯ್ಕೆಯಾಗಿರುತ್ತದೆ " ಎಂದು ಕುಂಬ್ಳೆ ಹೇಳಿದ್ದಾರೆ.

ಲೆಜೆಂಡರಿ ಸ್ಪಿನ್ನರ್​ ಕೊನೆಯ ಓವರ್​ ಬೌಲಿಂಗ್ ಮಾಡಿದ ಕಾರ್ತಿಕ್ ತ್ಯಾಗಿ ಅವರಿಗೆ ಕ್ರೆಡಿಟ್​ ನೀಡಿದ್ದಾರೆ. "ಕೊನೆಯ ಓವರ್​ ಬೌಲಿಂಗ್​ ಮಾಡಿದ ತ್ಯಾಗಿಗೆ ಕ್ರೆಡಿಟ್ ಸಲ್ಲಬೇಕು. ಅವರು ಆಫ್ ಸ್ಟಂಪ್‌ನ ಹೊರಗೆ ವೈಡ್​ ಬೌಲಿಂಗ್ ಮಾಡಲು ಹೊರಟಿದ್ದರು ಎಂಬುದು ಸ್ಪಷ್ಟವಾಗಿತ್ತು. ಆದರೂ ನಮ್ಮ ಬ್ಯಾಟರ್‌ಗಳು ಸರಿಯಾದ ಆಯ್ಕೆ ಮಾಡುವಲ್ಲಿ ವಿಫಲರಾದರು ಎಂದು ತಿಳಿಸಿದರು.

ಇದನ್ನು ಓದಿ: ನಿಧಾನಗತಿ ಬೌಲಿಂಗ್: ರಾಜಸ್ಥಾನ್​ ಕ್ಯಾಪ್ಟನ್‌ ಸ್ಯಾಮ್ಸನ್​​ಗೆ ₹12 ಲಕ್ಷ ದಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.