ETV Bharat / sports

ಬ್ಯಾಟಿಂಗ್ ಕಡೆಗೆ ಗಮನ ಹರಿಸಲು ಕೊಹ್ಲಿ Odi ನಾಯಕತ್ವವನ್ನು ತ್ಯಜಿಸಬಹುದು: ರವಿಶಾಸ್ತ್ರಿ

author img

By

Published : Nov 13, 2021, 2:54 AM IST

ದುಬೈನಿಂದ ಆಗಮಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿರುವ ಶಾಸ್ತ್ರಿ, ಕಳೆದ ನಾಲ್ಕೈದು ವರ್ಷಗಳಿಂದ ಭಾರತ ತಂಡವನ್ನು ಅದ್ಭುತವಾಗಿ ಮುನ್ನಡೆಸಿರುವ ಕೊಹ್ಲಿ ಬ್ಯಾಟಿಂಗ್ ಕಡೆಗೆ ಗಮನ ಮತ್ತು ಒತ್ತಡವನ್ನು ನಿವಾರಿಸಿಕೊಳ್ಳುವುದಕ್ಕಾಗಿ 50 ಓವರ್​ಗಳ ನಾಯಕತ್ವವನ್ನು ತ್ಯಜಿಸುವ ಸಾಧ್ಯತೆಯಿದೆ ಎಂದಿದ್ದಾರೆ.

Virat kohli future
ರವಿ ಶಾಸ್ತ್ರಿ ವಿರಾಟ್​ ಕೊಹ್ಲಿ

ನವದೆಹಲಿ: ಟಿ20 ತಂಡದ ನಾಯಕತ್ವ ತ್ಯಜಿಸಿ ತನ್ನ ಮೇಲಿನ ಸ್ವಲ್ಪ ಬಾರವನ್ನು ಕಡಿಮೆ ಮಾಡಿಕೊಂಡಿರುವ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಬ್ಯಾಟಿಂಗ್ ಕಡೆಗೆ ಹೆಚ್ಚು ಗಮನ ನೀಡುವಿದಕ್ಕಾಗಿ ಉಳಿದ ಸ್ವರೂಪದ ನಾಯಕತ್ವವನ್ನು ತ್ಯಜಿಸಬಹುದು ಎಂದು ಟೀಮ್ ಇಂಡಿಯಾ ಮಾಜಿ ಕೋಚ್​​ ರವಿ ಶಾಸ್ತ್ರಿ ಹೇಳಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಭಾರತ ತಂಡದ ಮುಖ್ಯ ಕೋಚ್​ ಅಗಿದ್ದ ರವಿಶಾಸ್ತ್ರಿ ಅವರ ಅವಧಿ ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ ಅಂತ್ಯವಾಗಿದ್ದು, ಕನ್ನಡಿಗ ರಾಹುಲ್ ದ್ರಾವಿಡ್​ ಭಾರತ ತಂಡ ಮುಖ್ಯ ಕೋಚ್ ಸ್ಥಾನಕ್ಕೇರಿದ್ದಾರೆ.

ದುಬೈನಿಂದ ಆಗಮಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿರುವ ಶಾಸ್ತ್ರಿ, ಕಳೆದ ನಾಲ್ಕೈದು ವರ್ಷಗಳಿಂದ ಭಾರತ ತಂಡವನ್ನು ಅದ್ಭುತವಾಗಿ ಮುನ್ನಡೆಸಿರುವ ಕೊಹ್ಲಿ ಬ್ಯಾಟಿಂಗ್ ಕಡೆಗೆ ಗಮನ ಮತ್ತು ಒತ್ತಡವನ್ನು ನಿವಾರಿಸಿಕೊಳ್ಳುವುದಕ್ಕಾಗಿ 50 ಓವರ್​ಗಳ ನಾಯಕತ್ವವನ್ನು ತ್ಯಜಿಸುವ ಸಾಧ್ಯತೆಯಿದೆ ಎಂದಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತ ತಂಡ ಕೊಹ್ಲಿ ನಾಯಕತ್ವದಲ್ಲಿ ಕಳೆದ 5 ವರ್ಷಗಳಿಂದ ಅಗ್ರಸ್ಥಾನದಲ್ಲಿದೆ. ಆದಾಗ್ಯೂ, ಭವಿಷ್ಯದಲ್ಲಿ ಬ್ಯಾಟಿಂಗ್‌ನತ್ತ ಗಮನ ಹರಿಸಲು ಅವರು ನಾಯಕತ್ವವನ್ನು ತ್ಯಜಿಸಬಹುದು. ಇದು ತಕ್ಷಣವೇ ಆಗುವುದಿಲ್ಲ, ಆದರೆ ಮಾನಸಿಕವಾಗಿ ದಣಿದಿರುವ ಅವರು ಖಂಡಿತ ನಾಯಕತ್ವವನ್ನು ತ್ಯಜಿಸಬಹುದು. ವೈಟ್​ಬಾಲ್​ ಕ್ರಿಕೆಟ್‌ನಲ್ಲೂ ಅದೇ ಸಂಭವಿಸಬಹುದು. ಪ್ರಸ್ತುತ ಅವರು ಕೇವಲ ಟೆಸ್ಟ್ ನಾಯಕತ್ವದ ಮೇಲೆ ಕೇಂದ್ರೀಕರಿಸಲು ಬಯಸುತ್ತಾರೆ ಎಂದು ಅವರು ಶಾಸ್ತ್ರಿ ಹೇಳಿದ್ದಾರೆ.

ಈ ರೀತಿ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಅವರೇ ಮೊದಲಿಗರಲ್ಲ. ಈ ಹಿಂದೆ ಸಾಕಷ್ಟು ಯಶಸ್ಸು ಗಳಿಸಿದ್ದ ಕ್ರಿಕೆಟಿಗರು ತಮ್ಮ ಬ್ಯಾಟಿಂಗ್ ಕಡೆಗೆ ಗಮನ ನೀಡುವುದಕ್ಕಾಗಿ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಅವರು ಕೊಹ್ಲಿ ಮನದಲ್ಲಿರುವ ಆಲೋಚನೆಯನ್ನು ಬಹಿರಂಗಪಡಿಸಿದ್ದಾರೆ.

ಇದನ್ನು ಓದಿ:ನ್ಯೂಜಿಲೆಂಡ್ ವಿರುದ್ಧದ T20 ಸರಣಿಗೆ ಟೀಂ​ ಇಂಡಿಯಾ ಆಯ್ಕೆ: ರೋಹಿತ್​ ಕ್ಯಾಪ್ಟನ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.