ETV Bharat / sports

Ranji Trophy: ರೈಲ್ವೇಸ್​ ವಿರುದ್ಧ 83 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ ಮನೀಶ್ ಪಾಂಡೆ

author img

By

Published : Feb 17, 2022, 4:24 PM IST

110 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡ ಸಂದರ್ಭದಲ್ಲಿ ಒಂದಾದ ಕೆ ಸಿದ್ಧಾರ್ಥ್​ ಮತ್ತು ಮನೀಶ್ ಪಾಂಡೆ ದ್ವಿಶತಕದ ಜೊತೆಯಾಟ ನಡೆಸಿದ್ದಾರೆ. ಪ್ರಸ್ತುತ ಕರ್ನಾಟಕ 76 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 343 ರನ್​ಗಳಿಸಿದೆ. ಸಿದ್ಧಾರ್ಥ್​ 177 ಎಸೆತಗಳಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ ಅಜೇಯ 117 ರನ್ ಮತ್ತು ಮನೀಶ್ ಪಾಂಡೆ 106 ಎಸೆತಗಳಲ್ಲಿ 9 ಬೌಂಡರಿ, 10 ಸಿಕ್ಸರ್​ ಸಹಿತ ಅಜೇಯ 137 ರನ್​ಗಳಿಸಿ ಆಡುತ್ತಿದ್ದಾರೆ.

Karnatak captain Manish pandey hit 83 balls century against Railways
ಶತಕ ಸಿಡಿಸಿದ ಮನೀಶ್ ಪಾಂಡೆ

ಚೆನ್ನೈ: 2 ವರ್ಷಗಳ ನಂತರ ರಣಜಿ ಕ್ರಿಕೆಟ್​ ಮರಳಿದ್ದು, ಕರ್ನಾಟಕ ತನ್ನ ಮೊದಲ ಪಂದ್ಯದಲ್ಲೇ ಭರ್ಜರಿ ಆರಂಭ ಪಡೆದುಕೊಂಡಿದೆ. ರೈಲ್ವೇಸ್​ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ನಾಯಕ ಮನೀಶ್ ಪಾಂಡೆ ಮತ್ತು ಕೆ ಸಿದ್ಧಾರ್ಥ್​​ ಅವರ ಭರ್ಜರಿ ಶತಕದಿಂದ ಬೃಹತ್​ ಮೊತ್ತದತ್ತ ದಾಪುಗಾಲಿಟ್ಟಿದೆ.

ಗುರುವಾರದಿಂದ ಆರಂಭವಾಗಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ ಮೊದಲ ಪಂದ್ಯದಲ್ಲಿ ರೈಲ್ವೇಸ್ ತಂಡದ ವಿರುದ್ಧ ಸೆಣಸಾಡುತ್ತಿದೆ. ಟಾಸ್​ ಸೋತು ಬ್ಯಾಟಿಂಗ್ ಇಳಿದಿರುವ ಕರ್ನಾಟಕ ತಂಡ 50 ರನ್​ಗಳಿಸುವಷ್ಟರಲ್ಲಿ ಮಯಾಂಕ್ ಅಗರ್ವಾಲ್​ ಮತ್ತು ದೇವದತ್​ ಪಡಿಕ್ಕಲ್ ವಿಕೆಟ್​ ಕಳೆದುಕೊಂಡಿತ್ತು.

ಆದರೆ, 3ನೇ ವಿಕೆಟ್​ಗೆ ಅನುಭವಿ ಸಮರ್ಥ್​(47) ಮತ್ತು ಸಿದ್ದಾರ್ಥ್​ 3ನೇ ವಿಕೆಟ್​​ಗೆ 60 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. 79 ಎಸೆತಗಳಲ್ಲಿ 8 ಬೌಂಡರಿ ಸಹಿತ 47 ರನ್​​ಗಳಿಸಿ ಸಮರ್ಥ್ ವಿಕೆಟ್​ ಒಪ್ಪಿಸಿದರು.

ಸಿದ್ಧಾರ್ಥ್​-ಮನೀಶ್ ಪಾಂಡೆ ದ್ವಿಶತಕದ ಜೊತೆಯಾಟ:110 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡ ಸಂದರ್ಭದಲ್ಲಿ ಒಂದಾದ ಕೆ ಸಿದ್ಧಾರ್ಥ್​ ಮತ್ತು ಮನೀಶ್ ಪಾಂಡೆ ದ್ವಿಶತಕದ ಜೊತೆಯಾಟ ನಡೆಸಿದ್ದಾರೆ.

ಪ್ರಸ್ತುತ ಕರ್ನಾಟಕ 76 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 343 ರನ್​ಗಳಿಸಿದೆ. ಸಿದ್ಧಾರ್ಥ್​ 177 ಎಸೆತಗಳಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ ಅಜೇಯ 117 ರನ್ ಮತ್ತು ಮನೀಶ್ ಪಾಂಡೆ 106 ಎಸೆತಗಳಲ್ಲಿ 9 ಬೌಂಡರಿ, 10 ಸಿಕ್ಸರ್​ ಸಹಿತ ಅಜೇಯ 137 ರನ್​ಗಳಿಸಿ ಆಡುತ್ತಿದ್ದಾರೆ.

ಮನೀಶ್​ ಪಾಂಡೆ ಐಪಿಎಲ್ ಮೆಗಾ ಹರಾಜಿನಲ್ಲಿ 4.6 ಕೋಟಿ ರೂಪಾಯಿಗೆ ಲಖನೌ ಸೂಪರ್ ಜೈಂಟ್ಸ್​ ಖರೀದಿಸಿದೆ.

ಇದನ್ನೂ ಓದಿ:ರಣಜಿ ಟ್ರೋಫಿ ಪದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ U19 ಸ್ಟಾರ್​ ಯಶ್​ ಧುಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.