ETV Bharat / sports

WI Tests Series.. ದುಲೀಪ್ ಟ್ರೋಫಿಯಿಂದ ಹಿಂದೆ ಸರಿದ ಇಶಾನ್ ಕಿಶನ್, ಟೆಸ್ಟ್ ಪದಾರ್ಪಣೆ ಕಷ್ಟ-ಕಷ್ಟ!!

author img

By

Published : Jun 15, 2023, 8:05 AM IST

WI Tests series: ಇಶಾನ್ ಕಿಶನ್ ಟೆಸ್ಟ್ ಪದಾರ್ಪಣೆ ಕಷ್ಟವಾಗಿ ಪರಿಣಮಿಸುತ್ತಿದೆ.

Ishan Kishan out of Duleep Trophy  Ishan Kishan Test cricket  Ishan Kishan controversy  Duleep Trophy selection  WI Tests series  Ishan Kishan opts out of Duleep Trophy  ದುಲೀಪ್ ಟ್ರೋಫಿಯಿಂದ ಹಿಂದೆ ಸರಿದ ಇಶಾನ್ ಕಿಶನ್  ಟೆಸ್ಟ್ ಪದಾರ್ಪಣೆ ಕಷ್ಟ  ಇಶಾನ್ ಕಿಶನ್ ಟೆಸ್ಟ್ ಪದಾರ್ಪಣೆ ಕಷ್ಟ  ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌  ಕ್ರಿಕೆಟ್ ತಂಡದ ಆಟಗಾರರು ವಿಶ್ರಾಂತಿ  ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಮೂರು ಮಾದರಿಯ ಸರಣಿ  ದುಲೀಪ್ ಟ್ರೋಫಿಯಿಂದ ಹಿಂದೆ ಸರಿಯುವ ಮೂಲಕ ಇಶಾನ್
ದುಲೀಪ್ ಟ್ರೋಫಿಯಿಂದ ಹಿಂದೆ ಸರಿದ ಇಶಾನ್ ಕಿಶನ್

ನವದೆಹಲಿ: ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ನಂತರ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಈಗ ವೆಸ್ಟ್ ಇಂಡೀಸ್‌ನಲ್ಲಿ ಸರಣಿ (WI Tests series) ಆಡಲು ಟೀಮ್ ಇಂಡಿಯಾ ಹೋಗಬೇಕಾಗಿದೆ. ಈ ಪ್ರವಾಸಕ್ಕೆ ಹೊರಡುವ ಮೊದಲು ಭಾರತ ತಂಡದ ಹಲವು ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ಲಯವನ್ನು ಕಂಡಕೊಳ್ಳಲು ಆಡುತ್ತಿದ್ದಾರೆ. ಆದರೆ ಇಶಾನ್ ಕಿಶನ್ ವಿಚಾರದಲ್ಲಿ ಇದು ತದ್ವಿರುದ್ಧವಾಗಿದೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ನಂತರ ಟೀಂ ಇಂಡಿಯಾ ಆಟಗಾರರು ಸುಮಾರು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದಿದ್ದಾರೆ. ಇದೀಗ ಭಾರತ ತಂಡ ಮುಂದಿನ ತಿಂಗಳು ಜುಲೈ 12 ರಂದು ಕಣಕ್ಕಿಳಿಯಲಿದೆ. ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಮೂರು ಮಾದರಿಯ ಸರಣಿಗಳನ್ನು ಆಡಬೇಕಾಗಿದೆ. ಈ ಮಧ್ಯೆ ಹಲವು ಆಟಗಾರರು ದೇಶೀಯ ಕ್ರಿಕೆಟ್‌ನತ್ತ ಮುಖ ಮಾಡಿದ್ರೆ, ಇನ್ನು ಕೆಲವರು ಬಂದ ಅವಕಾಶವನ್ನು ಕಳೆದುಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ತಂಡ 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿಗಳನ್ನು ಆಡಲಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ ಜುಲೈ 12 ರಂದು ಮೊದಲ ಪಂದ್ಯವನ್ನು ಆಡಬೇಕಿದೆ. ಟೆಸ್ಟ್ ಸರಣಿಯೊಂದಿಗೆ ಪ್ರವಾಸ ಆರಂಭವಾಗಲಿದೆ. ಈ ಪ್ರವಾಸದ ಮೊದಲು ಆರ್ ಅಶ್ವಿನ್ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಆಡಲು ನಿರ್ಧರಿಸಿದ್ದಾರೆ. ಇನ್ನು ಕೆಎಸ್ ಭರತ್ ದುಲೀಪ್ ಟ್ರೋಫಿಯಲ್ಲಿ ಆಡಲಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸ ಇನ್ನು ಒಂದು ತಿಂಗಳು ಬಾಕಿಯಿದೆ. ಆದರೆ, ಇಶಾನ್ ಕಿಶನ್ ದುಲೀಪ್ ಟ್ರೋಫಿಗಾಗಿ ಪೂರ್ವ ವಲಯ ತಂಡದಿಂದ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ. ಹೀಗಾಗಿ ಭಾರತ ಎ ತಂಡದ ಆಟಗಾರ ಅಭಿಮನ್ಯು ಈಶ್ವರನ್ ತಂಡದ ನಾಯಕನಾಗಿದ್ದು, ಭಾರತದ ಮಾಜಿ ಸ್ಪಿನ್ನರ್ ಶಹಬಾಜ್ ನದೀಮ್ ಉಪನಾಯಕ ಆಗಿದ್ದಾರೆ.

ಈ ಬಗ್ಗೆ ಪೂರ್ವ ವಲಯದ ಆಯ್ಕೆ ಸಮಿತಿಯ ಸದಸ್ಯರೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಇಶಾನ್​ ಅವರು ಡಬ್ಲ್ಯುಟಿಸಿ ಫೈನಲ್‌ನಲ್ಲಿ ಭಾರತ ತಂಡದಲ್ಲಿದ್ದರು. ಆದರೆ ಕೆಎಸ್ ಭರತ್ ಆಡುವ 11ರ ಬಳಗದಲ್ಲಿ ಆಯ್ಕೆಯಾಗಿದ್ದರು. ಆದ್ದರಿಂದ ನಾವು ಇಶಾನ್ ಅವರನ್ನು ಆಯ್ಕೆ ಮಾಡಬಹುದೇ ಎಂದು ಪ್ರಾದೇಶಿಕ ಆಯ್ಕೆ ಸಮಿತಿಯ ಸಂಯೋಜಕ ದೇಬಾಶಿಶ್ ಚಕ್ರವರ್ತಿ ಅವರನ್ನು ಕೇಳಿದ್ದೆವು.

ಇಶಾನ್​ ಅವರು ಸೀಮಿತ ಓವರ್‌ಗಳಲ್ಲಿ ಭಾರತಕ್ಕಾಗಿ ನಿರಂತರವಾಗಿ ಆಡುತ್ತಿದ್ದಾರೆ. ಅವರಿಗೆ ನಾಯಕತ್ವ ಸಿಗಬೇಕಿತ್ತು. ನಾವು ಫೋನ್​ ಮೂಲಕ ಇಶಾನ್​ರನ್ನು ಸಂಪರ್ಕಿಸಿದಾಗ ಅವರು ದುಲೀಪ್ ಟ್ರೋಫಿ ಆಡಲು ಬಯಸುವುದಿಲ್ಲ ಎಂದು ಹೇಳಿದರು. ಅವರು ಗಾಯಗೊಂಡಿದ್ದಾರೆಯೇ ಅಥವಾ ಇಲ್ಲವೇ ಎಂದು ನಮಗೆ ತಿಳಿಸಲಾಗಿಲ್ಲ. ಅವರಿಗೆ ಆಟವಾಡಲು ಇಷ್ಟವಿಲ್ಲ ಎಂದು ಹೇಳಲಾಯಿತು.

ಸದ್ಯ ಟೆಸ್ಟ್ ತಂಡದಲ್ಲಿ ಇಶಾನ್ ಕಿಶನ್ ಅವರು ಕೆಎಸ್ ಭರತ್ ಜೊತೆ ನೇರ ಪೈಪೋಟಿಯಲ್ಲಿದ್ದಾರೆ. ಆಟವಾಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ. ಆದರೆ ದುಲೀಪ್ ಟ್ರೋಫಿಯಿಂದ ಹಿಂದೆ ಸರಿಯುವ ಮೂಲಕ ಇಶಾನ್ ತಮ್ಮ ಏಳಿಗೆಯ ಕಲ್ಲು ಹಾಕಿಕೊಂಡಿದ್ದಾರೆ. KL ಭರತ್ ಈಗಾಗಲೇ ಆಡುವ 11ರ ಬಳಗದಲ್ಲಿದ್ದಾರೆ. ಈಗ ಅವರು ದುಲೀಪ್ ಟ್ರೋಫಿಯಲ್ಲಿ ಕಳೆದುಹೋದ ಲಯವನ್ನು ಮರಳಿ ಪಡೆಯುವ ಮೂಲಕ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಬಹುದಾಗಿದೆ.

ಓದಿ: Ashes series: ಇಂಗ್ಲೆಂಡ್​ನ ಗೆಲುವಿನ ಓಟ ವಿಶ್ವ ಟೆಸ್ಟ್​ ಚಾಂಪಿಯನ್ಸ್​​​​​ಗಳ ಮೇಲೂ ಮುಂದುವರೆಯುತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.