ದುಬೈ: ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ.ನಟರಾಜನ್ಗೆ ಕೋವಿಡ್ ದೃಢಪಟ್ಟಿದ್ದರಿಂದ ಅವರು ನಿನ್ನೆಯ ಪಂದ್ಯದಲ್ಲಿ ಆಡಿಲ್ಲ. ಅವರ ಅನುಪಸ್ಥಿತಿ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ತಂಡದ ಮುಖ್ಯ ತರಬೇತುದಾರ ಟ್ರೆವರ್ ಬೇಲಿಸ್ (Trevor Bayliss ) ಪ್ರತಿಪಾದಿಸಿದ್ದಾರೆ.
ನಟರಾಜನ್ ಅನುಪಸ್ಥಿತಿ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಸನ್ರೈಸರ್ಸ್ ತಂಡ ಚೆನ್ನಾಗಿಯೇ ಆಡಿತು. ಆದರೂ ಸೋತಿದ್ದಕ್ಕೆ ಸ್ವಲ್ಪ ಅಸಮಾಧಾನವಿದೆ ಎಂದು ಬೇಲಿಸ್ ಹೇಳಿದ್ದಾರೆ.
ದೆಹಲಿ ಕ್ಯಾಪಿಟಲ್ಸ್ನ ವೇಗಿಗಳು ವಿಕೆಟ್ ಅತ್ಯುತ್ತಮವಾಗಿ ಪಡೆದಿದ್ದಾರೆ. ಉತ್ತಮವಾಗಿ ಆಡಿ ನಮ್ಮ ತಂಡವನ್ನು ಸೋಲಿಸುವ ಮೂಲಕ ಗೆಲುವಿಗೆ ಅವರು ಅರ್ಹರಾಗಿದ್ದಾರೆ ಎಂದು ಬೇಲಿಸ್ ಶ್ಲಾಘಿಸಿದ್ದಾರೆ.
ನಿನ್ನೆ ನಡೆದ ಸನ್ರೈಸರ್ಸ್ ಹಾಗೂ ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ರಿಷಬ್ ಟೀಂ 8 ವಿಕೆಟ್ಗಳ ಅಂತರದಿಂದ ಮಣಿಸಿತು. ಹೈದರಾಬಾದ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಪತನಕ್ಕೆ 134 ರನ್ಗಳನ್ನು ಕಲೆ ಹಾಕಿತು. ದೆಹಲಿ ತಂಡ 2 ಓವರ್ಗಳು ಬಾಕಿಯಿರುವಾಗಲೇ, 135 ರನ್ ಗಳಿಸಿ ಜಯ ಪಡೆದುಕೊಂಡಿತ್ತು.
ಇದನ್ನೂ ಓದಿ: ನಮ್ಮ ಬೌಲರ್ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ: ರಿಷಭ್ ಪಂತ್ ಸಂತಸ
ಡೆಲ್ಲಿ ತಂಡದ ಬೌಲರ್ಗಳು ಆರಂಭದಿಂದಲೇ ಉತ್ತಮವಾಗಿ ಬೌಲಿಂಗ್ ಮಾಡಿದರು. ನಮ್ಮ ತಂಡದಲ್ಲಿ ನಟರಾಜನ್ ಬದಲಿಗೆ ಎಡಗೈ ವೇಗಿ ಖಲೀಲ್ ಅಹ್ಮದ್ ಮತ್ತು ಸ್ಪೀಡ್ಸ್ಟರ್ ಸಂದೀಪ್ ಶರ್ಮಾ ಅವರ ಆಟವನ್ನು ಆಡಬೇಕಾಯಿತು ಎಂದರು.