ETV Bharat / sports

ನೀವೇ ಮುಂದೆ ನಿಂತು ತಂಡವನ್ನು ಮುನ್ನಡೆಸಬೇಕಿತ್ತು: ಧೋನಿ ವಿರುದ್ಧ ಗಂಭೀರ್ ಗರಂ

author img

By

Published : Sep 23, 2020, 11:53 AM IST

Updated : Sep 25, 2020, 5:59 PM IST

ಇಂಡಿಯನ್ ಪ್ರೀಮಿಯರ್​ ಲೀಗ್​ನ ನಾಲ್ಕನೇ ಪಂದ್ಯದಲ್ಲಿ​ ರಾಜಸ್ಥಾನ ವಿರುದ್ಧ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಚೆನ್ನೈ ಸೂಪರ್​ ಕಿಂಗ್ಸ್​ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಗಂಭೀರ್ ಗರಂ ಆಗಿದ್ದಾರೆ.

Gambhir slams Dhoni
ಧೋನಿ ವಿರುದ್ಧ ಗಂಭೀರ್ ಆಕ್ರೋಶ

ಶಾರ್ಜಾ: ರಾಜಸ್ಥಾನ್ ರಾಯಲ್ಸ್ ವಿರುದ್ಧ 217 ರನ್‌ಗಳನ್ನು ಚೇಸ್​ ಮಾಡುವಾಗ ಚೆನ್ನೈ ಪರ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಧೋನಿ ನಿರ್ಧಾರಕ್ಕೆ ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಗರಂ ಆಗಿದ್ದಾರೆ.

ಚೆನ್ನೈ ತಂಡ 14 ಓವರ್​ಗಳಿಗೆ 5 ವಿಕೆಟ್ ಕಳೆದುಕೊಂಡು 114 ರನ್​ ಗಳಿಸಿರುವಾಗ ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಆಗಮಿಸಿದ್ರು. ಆ ಸಮಯದಲ್ಲಿ ಗೆಲುವಿಗೆ ಇನ್ನೂ 103 ರನ್​ಗಳು ಬೇಕಾಗಿದ್ದವು. ಆದರೆ, ಧೋನಿ ಮೊದಲೇ ಬರಬೇಕಿತ್ತು ಎಂದು ಅನೇಕ ಪಂಡಿತರು ಮತ್ತು ತಜ್ಞರು ಹೇಳಿದ್ದಾರೆ. ಸ್ಯಾಮ್ ಕರ್ರನ್, ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್ ಧೋನಿ ಅವರಿಗಿಂತ ಮೊದಲು ಬ್ಯಾಟಿಂಗ್​ಗೆ ಬಂದಿದ್ದರು.

ನನಗೆ ಸ್ವಲ್ಪ ಆಶ್ಚರ್ಯವಾಯಿತು. ಪ್ರಾಮಾಣಿಕವಾಗಿ ಎಂ.ಎಸ್. ಧೋನಿ 7 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆಯೇ? ಗಾಯಕ್ವಾಡ್, ಸ್ಯಾಮ್ ಕರ್ರನ್ ಅವರನ್ನು ತಮಗಿಂತ ಮೊದಲೇ ಬ್ಯಾಟಿಂಗ್​ಗೆ ಕಳುಹಿಸಿದ್ದು ನನಗೆ ಅರ್ಥವಾಗಲಿಲ್ಲ. 217 ರನ್​ ಚೇಸ್​ ಮಾಡುವಾಗ ಏಳನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೀರಾ? ಎಂದು ಗಂಭೀರ್ ಕ್ರೀಡಾ ವೆಬ್‌ಸೈಟ್​ನಲ್ಲಿ ಪ್ರಶ್ನಿಸಿದ್ದಾರೆ.

ಎಂ ಎಸ್ ಧೋನಿ ಮೂರು ಸಿಕ್ಸರ್‌ ಹೊಡೆದಾಗ ಎಲ್ಲರೂ ಕೊನೆಯ ಓವರ್ ಬಗ್ಗೆ ಮಾತನಾಡಬಹುದು. ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಇದು ಕೇವಲ ವೈಯಕ್ತಿಕ ರನ್​ಗಳಾಗಿತ್ತು. ಬೇರೊಬ್ಬ ಆಟಗಾರ ಅಥವಾ ಇನ್ನೊಬ್ಬ ಕ್ಯಾಪ್ಟನ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿದ್ರೆ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಿತ್ತು. ಬಹುಶಃ ಧೋನಿ ಎನ್ನುವ ಕಾರಣಕ್ಕೆ ಅನೇಕರು ಈ ಬಗ್ಗೆ ಮಾತನಾಡುತ್ತಿಲ್ಲ ಎಂದಿದ್ದಾರೆ ಗಂಭೀರ್​.

ನೀವು ಬೇಗನೇ ಔಟ್​ ಆಗಿ ಹೊರಬಂದಿದ್ದರೆ ಯಾವುದೇ ತಪ್ಪಿಲ್ಲ, ಕನಿಷ್ಠ ನೀವೇ ಮುಂದೆ ನಿಂತು ತಂಡವನ್ನು ಮುನ್ನಡೆಸಲು ಪ್ರಾರಂಭಿಸಿ, ತಂಡವನ್ನು ಪ್ರೇರೇಪಿಸಲು ಪ್ರಯತ್ನಿಸುತ್ತೀರಿ. ಕೊನೆಯ ಓವರ್‌ನಲ್ಲಿ ನೀವು ಏನು ಮಾಡಿದ್ದೀರಿ, ಬಹುಶಃ ಅದನ್ನೇ 4ನೇ ಸ್ಥಾನ ಅಥವಾ 5ನೇ ಸ್ಥಾನದಲ್ಲಿ ಡು ಪ್ಲೆಸಿಸ್ ಜೊತೆ ಆಡಿದ್ದರೆ ಉತ್ತಮ ಫಲಿತಾಂಶ ದೊರಕುತಿತ್ತು ಎಂದಿದ್ದಾರೆ.

Last Updated : Sep 25, 2020, 5:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.