ETV Bharat / sports

ಭಾರತ-ಶ್ರೀಲಂಕಾ ಅಹರ್ನಿಶಿ ಟೆಸ್ಟ್: ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಕೆಎಸ್‌ಸಿಎ

author img

By

Published : Mar 10, 2022, 10:25 PM IST

ಕೊವಿಡ್​ 19 ಕಾರಣ ಕೆಲವು ರಾಜ್ಯಗಳು ಶೆ.25 ಇಲ್ಲವೇ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುತ್ತಿವೆ. ಆದರೆ 2 ವರ್ಷಗಳ ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದು, ಸ್ಟೇಡಿಯಂನಲ್ಲಿ ಶೇಕಡಾ 100ರಷ್ಟು ವೀಕ್ಷಕರಿಗೆ ಅನುಮತಿ ನೀಡಲಿದ್ದೇವೆ ಎಂದು ಗುರುವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

kSCA decided to allow 100% fans to the stadium
ಚಿನ್ನಸ್ವಾಮಿ ಡೇ ಅಂಡ್ ನೈಟ್ ಟೆಸ್ಟ್

ಬೆಂಗಳೂರು: ಭಾರತ - ಶ್ರೀಲಂಕಾ ನಡುವೆ ಶನಿವಾರದಿಂದ ಆರಂಭವಾಗಲಿರುವ ದ್ವಿತೀಯ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿರುವ ಕರ್ನಾಟಕ ಕ್ರಿಕೆಟ್ ಸಂಸ್ಥೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ.

ಕೋವಿಡ್​ 19 ಕಾರಣ ಕೆಲವು ರಾಜ್ಯಗಳು ಶೆ.25 ಇಲ್ಲವೇ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುತ್ತಿವೆ. ಆದರೆ 2 ವರ್ಷಗಳ ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದ್ದು, ಸ್ಟೇಡಿಯಂನ ಶೇಕಡಾ 100ರಷ್ಟು ವೀಕ್ಷಕರಿಗೆ ಅನುಮತಿ ನೀಡಲಿದ್ದೇವೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

KSCA decided to allow 100% fans to the stadium
KSCA ಪ್ರಕಟಣೆ

ವಾರದ ಹಿಂದೆ ಮಾರ್ಚ್ 12ರಿಂದ 16ರವರೆಗೆ ನಡೆಯಲಿರುವ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ 50% ವೀಕ್ಷಕರಿಗೆ ಮೈದಾನದೊಳಗೆ ಪಂದ್ಯ ಅನುಮತಿ ನೀಡಲಾಗಿತ್ತು. ಸೀಮಿತ ಟಿಕೆಟ್ ಲಭ್ಯವಾಗಿದ್ದರಿಂದ ಎಲ್ಲಾ ಟಿಕೆಟ್​ಗಳು ಮಾರಾಟವಾಗಿದ್ದವು. ಆದರೆ ರಾಜ್ಯದಲ್ಲಿ ವಿಧಿಸಲಾಗಿದ್ದ ಕೋವಿಡ್ ನಿರ್ಬಂಧ ತೆರವಾಗಿರುವ ಕಾರಣ ಸಂಸ್ಥೆ 100% ವೀಕ್ಷಕರಿಗೆ ಅನುಮತಿ ನೀಡಲಾಗುವುದು ಎಂದು ತಿಳಿಸಿದೆ.

ಶುಕ್ರವಾರ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಹೆಚ್ಚುವರಿಯಾಗಿ ಘೋಷಣೆ ಮಾಡಿರುವ ಟಿಕೆಟ್​ಗಳು ಲಭ್ಯವಾಗಲಿವೆ. 100, 500, 750 ಮತ್ತು 1,250 ದರಗಳಲ್ಲಿ ಟಿಕೆಟ್​ಗಳು ದೊರೆಯಲಿವೆ.

ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ ತಂಡ ಇನ್ನಿಂಗ್ಸ್​ ಮತ್ತು 222 ರನ್​ಗಳಿಂದ ಗೆದ್ದು ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: ಐಪಿಎಲ್ ಅನ್​ಸೋಲ್ಡ್​ ಪೂಜಾರಾಗೆ ಡಬಲ್ ಧಮಾಕ: ಇಂಗ್ಲೆಂಡ್ ದೇಶಿ ಟೂರ್ನಿಗಳಲ್ಲಿ ಆಡುವ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.