ETV Bharat / sports

ಏಕಾಗ್ರತೆ ಕೊರತೆಯಿಂದ ಕೊಹ್ಲಿ ವಿಕೆಟ್​ ಒಪ್ಪಿಸಿದರು: ವಿಕ್ರಮ್ ರಾಥೋರ್​

author img

By

Published : Aug 16, 2021, 10:26 PM IST

ಕೊಹ್ಲಿ ಬ್ಯಾಟಿಂಗ್​ನಲ್ಲಿ ಸಮಸ್ಯೆಯಿದೆ ಎಂದು ನಾನು ಭಾವಿಸುವುದಿಲ್ಲ. 2ನೇ ಇನ್ನಿಂಗ್ಸ್​ನಲ್ಲಿ ಔಟಾಗಿದ್ದು ಕೇವಲ ಏಕಾಗ್ರತೆಯ ಕೊರತೆಯಿಂದ ಅಷ್ಟೇ. ಅವರು ಆ ಚೆಂಡನ್ನು ಆಡಬಾರದಿತ್ತು, ಆದರೂ ಆಡಿದರು. ಇದರಲ್ಲಿ ಬೇರೇನೂ ಇಲ್ಲ ಎಂದು ರಾಥೋರ್​ ಹೇಳಿದ್ದಾರೆ.

India vs England live
ವಿರಾಟ್​ ಕೊಹ್ಲಿ

ಲಂಡನ್: ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್​ ವೇಳೆ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಕೇವಲ 20 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. ಕೊಹ್ಲಿ ಔಟಾದ ರೀತಿಗೆ ದಿಗ್ಗಜ ಸುನೀಲ್ ಗವಾಸ್ಕರ್ ಸೇರಿದಂತೆ ಕೆಲವು ಮಾಜಿ ಕ್ರಿಕೆಟಿಗರು ಹಾಗೂ ವಿಶ್ಲೇಷಕರು ತಂತ್ರಗಾರಿಕೆ ವೈಫಲ್ಯ ಎಂದಿದ್ದರು. ಆದರೆ, ಬ್ಯಾಟಿಂಗ್ ಕೋಚ್​ ವಿಕ್ರಮ್ ರಾಥೋರ್​ ಏಕಾಗ್ರತೆಯ ಕೊರತೆಯಿಂದ ಟೀಮ್ ಇಂಡಿಯಾ ನಾಯಕ ವಿಕೆಟ್​ ಒಪ್ಪಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್​ ಕೊಹ್ಲಿ ಭಾನುವಾರ 20 ರನ್​​ಗಳಿಸಿ ಸ್ಯಾಮ್ ಕರ್ರನ್​ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದ್ದರು. 20120ರಿಂದ ಶತಕದ ಬರ ಎದುರಿಸುತ್ತಿರುವ ಕೊಹ್ಲಿ ಈ ಪಂದ್ಯದಲ್ಲಿ ಪಡೆದ ಆರಂಭ ನೋಡಿ ಅಭಿಮಾನಿಗಳು ಶತಕದ ಬರ ನೀಗಬಹುದು ಎಂದು ಆಲೋಚಿಸಿದ್ದರು. ಆದರೆ, ಕೊಹ್ಲಿ ಆಟ 20 ರನ್​ಗಳಿಗೆ ಮೀಸಲಾಯಿತು. ರಾಥೋರ್​ ಪ್ರಕಾರ ಕೊಹ್ಲಿ ಆಟದಲ್ಲಿ ಯಾವುದೇ ಸಮಸ್ಯೆಯಿಲ್ಲ, ಆದರೆ, ಅವರು ಏಕಾಗ್ರತೆ ಕೊರತೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕೊಹ್ಲಿ ಬ್ಯಾಟಿಂಗ್​ನಲ್ಲಿ ಸಮಸ್ಯೆಯಿದೆ ಎಂದು ನಾನು ಭಾವಿಸುವುದಿಲ್ಲ. 2ನೇ ಇನ್ನಿಂಗ್ಸ್​ನಲ್ಲಿ ಔಟಾಗಿದ್ದು, ಕೇವಲ ಏಕಾಗ್ರತೆಯ ಕೊರತೆಯಿಂದ ಅಷ್ಟೆ. ಅವರು ಆ ಚೆಂಡನ್ನು ಆಡಬಾರದಿತ್ತು, ಆದರೂ ಆಡಿದರು. ಇದರಲ್ಲಿ ಬೇರೇನೂ ಇಲ್ಲ ಎಂದು ರಾಥೋರ್​ ಹೇಳಿದ್ದಾರೆ.

ಒಂದು ರೀತಿ ರಾಥೋರ್​ ಹೇಳಿಕೆಯಲ್ಲೂ ಅರ್ಥವಿದೆ. ಏಕೆಂದರೆ ಕೊಹ್ಲಿ ಔಟಾಗುವ ಹಿಂದಿನ ಓವರ್​, ವೇಗಿ ಜೇಮ್ಸ್​ ಆ್ಯಂಡರ್ಸನ್​ ಭಾರತೀಯ ನಾಯಕನನ್ನು ಕೆಣಕಿದ್ದರು. ಇದರಿಂದ ಕುಪಿತಗೊಂಡಿದ್ದ ಕೊಹ್ಲಿ ಅದೇ ಭಾಷೆಯಲ್ಲಿ ಆ್ಯಂಡರ್ಸನ್​ಗೆ ತಿರುಗೇಟು ನೀಡಿದ್ದರು. ಆದರೆ, ಸ್ಯಾಮ್​ ಕರ್ರನ್​ ಎಸೆದ ನಂತರದ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ಇದರಲ್ಲಿ ಇಂಗ್ಲೀಷ್​ ಕ್ರಿಕೆಟಿಗರ ತಂತ್ರಗಾರಿಕೆ ಕೆಲಸ ಮಾಡಿತ್ತು.

ಇದನ್ನು ಓದಿ:ಕೊಹ್ಲಿ ಸರಿಯಾಗಿ ಆಡಲಿಲ್ಲ, ಅವರ ಬ್ಯಾಟಿಂಗ್ ವಿಧಾನ ದೋಷಪೂರಿತವಾಗಿತ್ತು: ಗವಾಸ್ಕರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.