ETV Bharat / sports

ಆಟಗಾರರಿಗೆ ಜನಾಂಗೀಯ ನಿಂದನೆ ಸ್ವೀಕಾರಾರ್ಹವಲ್ಲ; ಕ್ಯಾಪ್ಟನ್​ ರಹಾನೆ

author img

By

Published : Jan 11, 2021, 4:44 PM IST

ಸಿಡ್ನಿ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್​ ಪಂದ್ಯದ ವೇಳೆ ಟೀಂ ಇಂಡಿಯಾದ ಇಬ್ಬರು ಪ್ಲೇಯರ್ಸ್​ಗಳೊಂದಿಗೆ ಜನಾಂಗೀಯ ನಿಂದನೆ ನಡೆದಿದ್ದು, ಇದೇ ವಿಚಾರವಾಗಿ ರಹಾನೆ ಮಾತನಾಡಿದ್ದಾರೆ.

Rahane
Rahane

ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದ ವೇಳೆ ಟೀಂ ಇಂಡಿಯಾ ಪ್ಲೇಯರ್ಸ್​ಗೆ ಜನಾಂಗೀಯ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಇದಕ್ಕೆ ಈಗಾಗಲೇ ಕ್ರಿಕೆಟ್​ ಆಸ್ಟ್ರೇಲಿಯಾ ಕ್ಷಮೆಯಾಚನೆ ಮಾಡಿದೆ. ಇದೀಗ ಟೀಂ ಇಂಡಿಯಾ ಟೆಸ್ಟ್​ ತಂಡದ ಕ್ಯಾಪ್ಟನ್​ ರಹಾನೆ ಪ್ರಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾ ವೇಗಿಗಳಾದ ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್​ ಸಿರಾಜ್​ ಅವರ ವಿರುದ್ಧ ಜನಾಂಗೀಯ ನಿಂದನೆ ನಡೆದಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಈಗಾಗಲೇ ದೂರು ದಾಖಲು ಮಾಡಿದೆ.

ಓದಿ: 'ಆಸೀಸ್ ವಿರುದ್ಧ ಭಾರತ ಡ್ರಾ ಮಾಡ್ಕೊಂಡಿಲ್ಲ ಗೆದ್ದಿದೆ' ಎಂದ ಮಹೀಂದ್ರಾ,: 'ಇದು ನವ ಭಾರತ'ಎಂದ ಕೇಂದ್ರ ಸಚಿವ

ಟೆಸ್ಟ್​ ಪಂದ್ಯದ ವೇಳೆ ನಮ್ಮ ಆಟಗಾರರೊಂದಿಗೆ ನಡೆದಿರುವ ಘಟನೆ ಸ್ವೀಕಾರಾರ್ಹವಲ್ಲ. ವಿಶ್ವದ ಯಾವುದೇ ತಂಡದ ವಿರುದ್ಧ ಈ ರೀತಿಯಾಗಿ ನಡೆಯಬಾರದು ಎಂದು ರಹಾನೆ ತಿಳಿಸಿದ್ದಾರೆ. ಪ್ರೇಕ್ಷಕರ ವರ್ತನೆಯಿಂದ ತಂಡ ಅಸಮಾಧಾನಗೊಂಡಿದೆ ಎಂದಿರುವ ಅವರು, ನಾವು ದೂರು ನೀಡಿದ್ದೇವೆ. ಅಧಿಕಾರಿಗಳು ಪ್ರಕರಣ ಪರಿಶೀಲಿಸುತ್ತಿದ್ದಾರೆ. ಮೈದಾನದಲ್ಲಿ ಏನಾದರೂ ಸಂಭವಿಸಿದರೂ ಅದು ಸ್ವೀಕಾರಾರ್ಹವಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬೌಂಡರಿ ಲೈನ್​ನಲ್ಲಿ ಸಿರಾಜ್ ಫೀಲ್ಡಿಂಗ್​ ಮಾಡ್ತಿದ್ದ ವೇಳೆ ಪ್ರೇಕ್ಷಕರು ಅವರ ವಿರುದ್ಧ ಮಾತನಾಡಿರುವ ಕೆಲವೊಂದು ದೃಶ್ಯಗಳು ಲಭ್ಯವಾಗಿವೆ ಎಂದಿದ್ದಾರೆ. ಸಿಡ್ನಿ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ನಾಲ್ಕನೇ ಟೆಸ್ಟ್​ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿದ್ದು, ಟೀಂ ಇಂಡಿಯಾ ಆಟಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.