ETV Bharat / sports

ರೋಹಿತ್​ ಶರ್ಮಾ‌ಗೆ ಒಲಿದ 'ರಾಜೀವ್​ ಗಾಂಧಿ ಖೇಲ್​ ರತ್ನ' ಪ್ರಶಸ್ತಿ

author img

By

Published : Aug 21, 2020, 5:38 PM IST

Updated : Aug 21, 2020, 6:58 PM IST

ಭಾರತೀಯ ಕ್ರೀಡಾಲೋಕದ ಅತ್ಯುನ್ನತ 'ರಾಜೀವ್​ ಗಾಂಧಿ ಖೇಲ್​ ರತ್ನ' ಪ್ರಶಸ್ತಿಗೆ ಕ್ರಿಕೆಟಿಗ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಈ ಪ್ರಶಸ್ತಿ ಪಡೆದ ದೇಶದ ನಾಲ್ಕನೇ ಕ್ರಿಕೆಟಿಗ ಎಂಬ ಶ್ರೇಯ ಅವರದ್ದಾಗಿದೆ.

Rohit Sharma
Rohit Sharma

ನವದೆಹಲಿ: ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಐವರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ 'ರಾಜೀವ್​ ಗಾಂಧಿ ಖೇಲ್​ ರತ್ನ' ಪ್ರಶಸ್ತಿ ಲಭಿಸಿದೆ. ಕೇಂದ್ರ ಕ್ರೀಡಾ ಸಚಿವಾಲಯ ಪ್ರಶಸ್ತಿಗೆ ಅರ್ಹರಾದ ಕ್ರೀಡಾಳುಗಳ ಹೆಸರುಗಳನ್ನು ಪ್ರಕಟಿಸಿದೆ.

ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್​​ಮನ್​ ರೋಹಿತ್​ ಶರ್ಮಾ, ಪ್ಯಾರಾ ಅಥ್ಲೀಟ್​​​ ಮರಿಯಪ್ಪ.ಟಿ, ಟೇಬಲ್​ ಟೆನ್ನಿಸ್​​ ಆಟಗಾರ್ತಿ ಮನಿಕಾ ಬತ್ರಿ, ಕುಸ್ತಿಪಟು ವಿನೇಶ್ ಪೋಗಾಟ್​​ ಹಾಗೂ ಹಾಕಿ ಆಟಗಾರ್ತಿ ರಾಣಿಗೆ ಈ ಗೌರವ ಸಂದಿದೆ.

ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರು:

ಬಿಲ್ಲುವಿದ್ಯೆ ಕೋಚ್​ ಧರ್ಮೆಂದ್ರ ತಿವಾರಿ, ಅಥ್ಲೆಟಿಕ್​​​​ ಕೋಚ್​ ಪುರುಷೋತ್ತಮ ರಾಯ್​, ಬಾಕ್ಸಿಂಗ್​​ ಕೋಚ್​​ ಶಿವ ಸಿಂಗ್​, ಹಾಕಿ ಕೋಚ್​​ ಕೃಷ್ಣಕುಮಾರ್​ ಹೂಡಾ, ಪವರ್​ ಲಿಫ್ಟಿಂಗ್​​​ ಕೋಚ್​ ವಿಜಯ್​ ಬಾಲಚಂದ್ರ ಮುನೀಶ್ವರ್​, ಟೆನ್ನಿಸ್​ ಕೋಚ್​​​ ನರೇಶ್​ ಕುಮಾರ್​ ಹಾಗೂ ಕುಸ್ತಿ ಕೋಚ್​ ಓಂಪ್ರಕಾಶ್ ದಯಾ ಅವರಿಗೆ ದ್ರೋಣಾಚಾರ್ಯ ಗೌರವ ಸಂದಿದೆ.

  • Cricketers Ishant Sharma and Deepti Sharma, athlete Dutee Chand, shooter Manu Bhaker among 27 sportspersons to be conferred with Arjuna Award. https://t.co/X2d7SNSc7j

    — ANI (@ANI) August 21, 2020 " class="align-text-top noRightClick twitterSection" data=" ">

ಕ್ರೀಡಾ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ವಿಶ್ವಕಪ್​ನಲ್ಲಿ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ತೋರಿ 5 ಶತಕ ಬಾರಿಸಿದ್ದ ರೋಹಿತ್ ಶರ್ಮಾ, ಕುಸ್ತಿಪಟು ವಿನೇಶ್ ಪೋಗಟ್​, ಟೇಬಲ್ ಟೆನ್ನಿಸ್​ ಆಟಗಾರ್ತಿ ಮಾನಿಕ ಬಾತ್ರಾ ಹಾಗೂ 2016ರ ಪ್ಯಾರಾಲಿಂಪಿಕ್ಸ್​ ಚಿನ್ನದ ಪದಕ ವಿಜೇತ ಮರಿಯಪ್ಪನ್​ ತಂಗವೇಲು ಅವರ ಹೆಸರನ್ನು ವಿಶೇಷ ಆಯ್ಕೆ ಸಮಿತಿ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು.

ರೋಹಿತ್‌ ಶರ್ಮಾ ಖೇಲ್‌ ರತ್ನ ಪ್ರಶಸ್ತಿ ಪಡೆದ ನಾಲ್ಕನೇ ಕ್ರಿಕೆಟಿಗರಾಗಿದ್ದಾರೆ. ಇವರಿಗೂ ಮೊದಲು ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ಅರ್ಜುನ ಪ್ರಶಸ್ತಿ ಪುರಸ್ಕೃತರು:

ದ್ಯುತಿ ಚಾಂದ್​, ಇಶಾಂತ್​ ಶರ್ಮಾ, ದೀಪ್ತಿ ಶರ್ಮಾ, ಆಕಾಶ್​ ದೀಪ್​ ಸಿಂಗ್​​ ಸೇರಿದಂತೆ 27 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ​ ನೀಡಲಾಗಿದೆ.

ಧ್ಯಾನ್‌ಚಂದ್‌ ಪ್ರಶಸ್ತಿ:

ಕುಲ್ದೀಪ್​​​ ಸಿಂಗ್​ ಬುಲ್ಲಾರ್​, ಎನ್.ಉಷಾ, ಪ್ರದೀಪ್​​ ಶ್ರೀಕೃಷ್ಣ ಗಾಡ್ಲೆ ಸೇರಿ ಐವರಿಗೆ ಧ್ಯಾನ್‌ಚಂದ್​ ಅವಾರ್ಡ್​ ಘೋಷಣೆಯಾಗಿದೆ.

Last Updated : Aug 21, 2020, 6:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.