ETV Bharat / sports

ಪಂತ್ ಮೊದ್ಲು​ ಭಯರಹಿತ ಹಾಗು ನಿರ್ಲಕ್ಷ್ಯ ಕ್ರಿಕೆಟ್​ ವ್ಯತ್ಯಾಸ ತಿಳಿಯಬೇಕು: ಕೋಚ್ ಬುದ್ದಿಮಾತು

author img

By

Published : Sep 17, 2019, 9:24 PM IST

ಮಾಜಿ ಆಟಗಾರ ಗೌತಮ್‌ ಗಂಭೀರ್​, ಪಂತ್​ಗೆ ಎಚ್ಚರಿಕೆ ನೀಡಿದ್ದು, ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರೆ ಯುವ ಆಟಗಾರರಾದ ಇಶಾನ್​ ಕಿಶನ್​, ಸಂಜು ಸಾಮ್ಸನ್​ ಅವರಿಗೆ ಅವಕಾಶ ನೀಡಲು ಬಿಸಿಸಿಐಗೆ ತಿಳಿಸಿದ್ದಾರೆ. ಇದೀಗ ಬ್ಯಾಟಿಂಗ್​ ಕೋಚ್​ ವಿಕ್ರಮ್​ ರಾಥೋರ್​ ಕೂಡಾ ಪಂತ್​ಗೆ ಶಿಸ್ತಿನ ಆಟ ಪ್ರದರ್ಶಿಸುವಂತೆ ತಿಳಿಸಿದ್ದಾರೆ.

Rishabh Pant

ಮೊಹಾಲಿ: ನೂತನ ಬ್ಯಾಟಿಂಗ್​ ತರಬೇತುದಾರ​ ವಿಕ್ರಮ್​ ರಾಥೋರ್,​ ಕೋಚ್​ ಜವಾಬ್ದಾರಿ ವಹಿಸಿಕೊಂಡ ನಂತರ ಮೊದಲ ಕ್ರಿಕೆಟ್‌ ಸರಣಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಯುವ ವಿಕೆಟ್​ ಕೀಪರ್​ ರಿಷಭ್ ಪಂತ್​ ಅವರನ್ನು ಎಚ್ಚರಿಸಿದ್ದಾರೆ.

ವೆಸ್ಟ್​ ಇಂಡೀಸ್​ ಸರಣಿ ವೇಳೆ ಕಳಪೆ ಪ್ರದರ್ಶನ ತೋರಿದ ರಿಷಭ್​ ಪಂತ್​ ಪ್ರಸ್ತುತ ಸರಣಿಯಲ್ಲೂ ಬ್ಯಾಟಿಂಗ್​ ವೈಫಲ್ಯತೆ ಅನುಭವಿಸಿದ್ರೆ ಹೊಸ ವಿಕೆಟ್​ ಕೀಪರ್​ ಹುಡುಕಬೇಕಾಗುತ್ತದೆ ಎಂದು ಮುಖ್ಯ ಕೋಚ್​ ರವಿಶಾಸ್ತ್ರಿ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ, ಬ್ಯಾಟಿಂಗ್​ ಕೋಚ್​ ರಾಥೋರ್ ಕೂಡ ಪಂತ್​ ಮೊದಲು ಭಯರಹಿತ ಕ್ರಿಕೆಟ್​ ಹಾಗೂ ನಿರ್ಲಕ್ಷ್ಯ ಕ್ರಿಕೆಟ್​ ನಡುವಿನ ವ್ಯತ್ಯಾಸ ತಿಳಿದುಕೊಳ್ಳಬೇಕು ಎಂದು ಬುದ್ದಿವಾದ ಹೇಳಿದ್ದಾರೆ.

ಪಂತ್​ ಸಂದರ್ಭಕ್ಕೆ ತಕ್ಕಂತೆ ಬ್ಯಾಟಿಂಗ್​ ನಡೆಸುವ ಬದಲು ಯಾವಾಗಲೂ ಆಕ್ರಮಣಾತ್ಮಕ ಆಟಕ್ಕೆ ಮುಂದಾಗಿ ವಿಕೆಟ್​ ಕೈ ಚೆಲ್ಲುತ್ತಿದ್ದಾರೆ. ಇದರ ಪರಿಣಾಮ ತಂಡದ ಮೇಲಾಗುತ್ತಿದೆ. ಹೀಗಾಗಿ ಪಂತ್​ ಪ್ರದರ್ಶನದ ಮೇಲೆ ತಂಡದ ಮಂಡಳಿಗೆ ತೃಪ್ತಿಯಿಲ್ಲ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ ವಿಫಲರಾದರೆ ಮುಂದೆ ತಂಡದಿಂದ ಕೈಬಿಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.

ಆದರೆ ಪಂತ್​ ತಮ್ಮ ನೈಜ ಆಟದಲ್ಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿಲ್ಲ. ಅವರು ತಮ್ಮ ಆಟದಲ್ಲೇ ಶಿಸ್ತು ಕಾಪಾಡಿಕೊಳ್ಳಬೇಕಿದೆ ಎಂದು ರಾಥೋರ್ ಅಭಿಪ್ರಾಯ ಪಟ್ಟರು.​

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.