ETV Bharat / sports

ಅವಕಾಶ ಕೈಚೆಲ್ಲಿದ್ದು ಭಾರಿ ನಿರಾಶೆ ಮೂಡಿಸಿದೆ: ರಾಹುಲ್​ ದ್ರಾವಿಡ್​

author img

By

Published : Jul 6, 2022, 1:08 PM IST

ಭಾರತದ ಬ್ಯಾಟಿಂಗ್​ಗೆ ಅಸಮಾಧಾನ ವ್ಯಕ್ತಪಡಿಸಿದ ಕೋಚ್​ ರಾಹುಲ್​ ದ್ರಾವಿಡ್​, ಪಂದ್ಯವನ್ನು ಕೊನೆಯವರೆಗೂ ಕಾಪಾಡಿಕೊಳ್ಳುವ ಛಾತಿ ಬೆಳೆಸಿಕೊಳ್ಳಬೇಕು ಎಂದಿದ್ದಾರೆ.

ಅವಕಾಶ ಕೈಚೆಲ್ಲಿದ್ದು ಭಾರಿ ನಿರಾಶೆ ಮೂಡಿಸಿದೆ: ರಾಹುಲ್​ ದ್ರಾವಿಡ್​
ಅವಕಾಶ ಕೈಚೆಲ್ಲಿದ್ದು ಭಾರಿ ನಿರಾಶೆ ಮೂಡಿಸಿದೆ: ರಾಹುಲ್​ ದ್ರಾವಿಡ್​

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸೋಲು ಕೋಚ್​ ರಾಹುಲ್​ ದ್ರಾವಿಡ್​ರ ಅಸಮಾಧಾನಕ್ಕೆ ಕಾರಣವಾಗಿದೆ. ಇದು ನಮಗೆ ಭಾರಿ ನಿರಾಶೆ ಉಂಟು ಮಾಡಿದೆ. ಈ ಸೋಲು ಮುಂದಿನ ಸರಣಿಗಳಿಗೆ ಪಾಠವಾಗಬೇಕು. ಇಂಗ್ಲೆಂಡ್​ ವಿರುದ್ಧವೇ ನಡೆಯುವ ಏಕದಿನ, ಟಿ20, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ತಂಡದ ಆಟ ಸುಧಾರಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಏಕೈಕ ಟೆಸ್ಟ್ ಪಂದ್ಯದಲ್ಲಿ 3 ದಿನ ಪಾರಮ್ಯ ಮೆರೆದಿದ್ದ ಭಾರತ ನಾಲ್ಕನೇ ದಿನದಲ್ಲಿ ದಿಢೀರ್​ ಕುಸಿದು ಪಂದ್ಯವನ್ನೇ ಕೈಚೆಲ್ಲಿತು. ಇದು ಕೋಚ್​ ದ್ರಾವಿಡ್​ರಿಗೆ ಭಾರಿ ನಿರಾಶೆ ಮೂಡಿಸಿದೆ. ಪಂದ್ಯವನ್ನು ಕೊನೆಯ ದಿನದವರೆಗೂ ನಿಯಂತ್ರಿಸುವ ಛಾತಿ ತಂಡ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

2 ವರ್ಷಗಳಿಂದ ತಂಡ ಟೆಸ್ಟ್​ನಲ್ಲಿ ಉತ್ತಮ ಸಾಧನೆ ಮಾಡಿದೆ. ಆದರೆ, ಕಳೆದ ಕೆಲ ತಿಂಗಳಿನಿಂದ ಅದು ಸಾಧ್ಯವಾಗುತ್ತಿಲ್ಲ. ಪಂದ್ಯದಲ್ಲಿ ಉತ್ತಮ ಆರಂಭದ ಹೊರತಾಗಿಯೂ ಕೊನೆಯಲ್ಲಿ ಹಿಡಿತ ಕಳೆದುಕೊಂಡ ಕಾರಣ ಸೋಲು ಕಾಣಬೇಕಾಯಿತು. ಈ ಮನಸ್ಥಿತಿ ಬದಲಾಗಬೇಕು. ಆಟವನ್ನು ಅಂತ್ಯದವರೆಗೂ ತೆಗೆದುಕೊಂಡು ಹೋಗುವ ಸಾಮರ್ಥ್ಯವನ್ನು ಇನ್ನಷ್ಟು ಬೆಳೆಸಿಕೊಳ್ಳಬೇಕಿದೆ ಎಂದರು.

2ನೇ ಇನಿಂಗ್ಸ್​ಗೆ ಆಕ್ಷೇಪ: 132 ರನ್​ಗಳ ಉತ್ತಮ ಮುನ್ನಡೆ ಪಡೆದ ತಂಡ 2ನೇ ಇನಿಂಗ್ಸ್​ನಲ್ಲಿ ಕೇವಲ 254 ರನ್​ಗಳಿಗೆ ಔಟಾಗಿ ಬೇಸರ ಮೂಡಿಸಿತು. ಬ್ಯಾಟಿಂಗ್​ ಸಂಪೂರ್ಣ ಕೈಕೊಟ್ಟಿತು. ಆಟಗಾರರು ಬ್ಯಾಟಿಂಗ್​ ಕಡೆ ಹೆಚ್ಚು ಗಮನ ಹರಿಸಬೇಕಿದೆ ಎಂದು ದ್ರಾವಿಡ್‌ ಹೇಳಿದ್ದಾರೆ.

ಪಂದ್ಯದಲ್ಲಿ ಭಾರತ ಮೊದಲ ಇನಿಂಗ್ಸ್​ನಲ್ಲಿ ರಿಷಬ್​ ಪಂತ್​ ಮತ್ತು ರವೀಂದ್ರ ಜಡೇಜಾರ ಶತಕದ ನೆರವಿನಿಂದ 416 ರನ್​ ಗಳಿಸಿತ್ತು. ಇಂಗ್ಲೆಂಡ್​ ಜಾನಿ ಬೈರ್​ಸ್ಟೋವ್​ ಶತಕದೊಂದಿಗೆ 284 ರನ್​ಗಳಿಗೆ ಆಲೌಟ್​ ಆಗಿ, ಭಾರತಕ್ಕೆ 132 ರನ್​ ಮುನ್ನಡೆ ಬಿಟ್ಟುಕೊಟ್ಟಿತ್ತು. 2ನೇ ಇನಿಂಗ್ಸ್​ನಲ್ಲಿ ಭಾರತ ಕೇಲ 245 ರನ್​​ಗೆ ಕುಸಿದು 378 ರನ್​ಗಳ ಟಾರ್ಗೆಟ್​ ನೀಡಿತ್ತು. ಮತ್ತೊಮ್ಮೆ ಗುಡುಗಿದ ಜಾನಿ ಬೈರ್​ಸ್ಟೋವ್​ ಮತ್ತು ಜೋ ರೂಟ್​ರ ಭರ್ಜರಿ ಶತಕದಾಟ ಇಂಗ್ಲೆಂಡ್‌ ತಂಡವನ್ನು ಗೆಲುವಿನ ಗಡಿ ತಲುಪಿಸಿತು.

ಇದನ್ನೂ ಓದಿ: ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಗೂ ರೋಹಿತ್​, ವಿರಾಟ್​, ಪಂತ್ ಸೇರಿ ಹಿರಿಯ ಪ್ಲೇಯರ್ಸ್​​ಗೆ ವಿಶ್ರಾಂತಿ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.