ETV Bharat / sports

IND vs WI: ವೆಸ್ಟ್​ ಇಂಡೀಸ್​ ಪ್ರವಾಸದಿಂದ ಪೂಜಾರಗೆ ಕೊಕ್​.. ಮೊದಲಿನಿಂದ ಮತ್ತೆ ಆರಂಭಕ್ಕೆ ಚೇತೇಶ್ವರ ಅಣಿ

author img

By

Published : Jun 24, 2023, 8:24 PM IST

ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ಆಯ್ಕೆ ಆದ ತಂಡದಲ್ಲಿ ಚೇತೇಶ್ವರ ಪೂಜಾರ ಅವರನ್ನು ಕೈಬಿಡಲಾಗಿದ್ದು, ಇದಕ್ಕೆ ಅನುಭವಿ ಬ್ಯಾಟರ್​ ಮತ್ತೆ ತಮ್ಮ ಜರ್ನಿಯನ್ನು ಆರಂಭದಿಂದ ಕಂಡುಕೊಳ್ಳಲು ಹೊರಟಿದ್ದಾರೆ.

IND vs WI
ಪೂಜಾರಗೆ ಕೊಕ್

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ 2023-25ರ ಆ ವೃತ್ತಿಯ ಮೊದಲ ಸರಣಿಯನ್ನು ಭಾರತ ವೆಸ್ಟ್​ ಇಂಡೀಸ್​ ಜೊತೆಗೆ ಪ್ರಾರಂಭಿಸಲಿದೆ. ಈ ಪ್ರವಾಸಕ್ಕೆ ತಂಡದ ಆಯ್ಕೆಯಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಲಿದೆ ಎಂಬುದರ ಬಗ್ಗೆ ಭಾರಿ ಚರ್ಚೆಗಳಾದವು. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಬಗ್ಗೆಯೂ ಹೇಳಲಾಗಿತ್ತು. ಪ್ರಕಟಿಸಿದ ತಂಡದಲ್ಲಿ ಅನುಭವಿ ಚೇತೇಶ್ವರ ಪೂಜಾರ ಅವರಿಗೆ ಮಾತ್ರ ಅವಕಾಶ ಸಿಕ್ಕಿಲ್ಲ. ಮತ್ತೆ ಉಳಿದಂತೆ ವಿಶ್ವ ಟೆಸ್ಟ್​​​ ಚಾಂಪಿಯನ್​ಶಿಪ್​ ಫೈನಲ್​ ಆಡಿದ ಎಲ್ಲಾ ಬ್ಯಾಟರ್​ಗಳಿಗೂ ಅವಕಾಶ ನೀಡಲಾಗಿದೆ. ಅಲ್ಲದೇ ಚಾಂಪಿಯನ್​​ಶಿಪ್​ನ ಮೀಸಲು ಆಟಗಾರರಾಗಿ ಆಯ್ಕೆ ಆಗಿದ್ದ ಯಶಸ್ವಿ ಜೈಸ್ವಾಲ್​ ಮತ್ತು ರುತುರಾಜ್​ ಗಾಯಕ್ವಾಡ್​ಗೆ ತಂಡದಲ್ಲಿ ಸ್ಥಾನ ದೊರೆತಿದೆ.

ಆದರೆ ಹಿರಿಯ ಅನುಭವಿ ಆಟಗಾರ ಪುಜಾರ ಅವರಿಗೆ ಕೊಕ್​ ನೀಡಲು ಕಾರಣ ಏನು ಎಂಬುದನ್ನು ಆಯ್ಕೆ ಸಮಿತಿ ತಿಳಿಸಿಲ್ಲ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಉತ್ತಮ ಪ್ರದರ್ಶನ ನೀಡದಿರುವುದೇ ಅವರನ್ನು ತಂಡದಿಂದ ಹೊರಗಿಡಲು ಕಾರಣ ಆಗಿದೆಯಾ ಎಂಬ ಪ್ರಶ್ನೆಗಳೂ ಉದ್ಭವವಾಗುತ್ತಿವೆ. ಈ ಬಗ್ಗೆ ಭಾರತ ತಂಡದ ಮಾಜಿ ನಾಯಕ ಸುನಿಲ್​ ಗವಾಸ್ಕರ್​ ಸಹ ಪ್ರಶ್ನೆ ಮಾಡಿದ್ದಾರೆ.

ವೆಸ್ಟ್​​ ಇಂಡೀಸ್​ ಪ್ರವಾಸಕ್ಕೆ ಆಯ್ಕೆ ಆಗದಿರುವ ಬಗ್ಗೆ ಚೇತೇಶ್ವರ ಪೂಜಾರ ಮೌನ ಮುರಿದಿದ್ದಾರೆ. ಅವರು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಕಚ್ಚಾ ಮೈದಾನಲ್ಲಿ ಅಭ್ಯಾಸದಲ್ಲಿ ತೊಡಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಪೂಜಾರ ಅವರು ಕಠಿಣ ಪರಿಶ್ರಮವನ್ನು ಮುಂದುವರಿಸಲು ಸಿದ್ಧರಿರುವುದಾಗಿ ಸಂದೇಶ ನೀಡಿದ್ದಾರೆ. ಮತ್ತೆ ಕಠಿಣ ಅಭ್ಯಾಸದ ಮೂಲಕ ಫಾರ್ಮ್​ಗೆ ಮರಳಿ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಮರಳಿ ಪಡೆಯಲು ತಾವು ಸಿದ್ಧರಿರುವುದಾಗಿ ಸೂಚಿಸಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸದ ತಂಡದಿಂದ ಪೂಜಾರ ಅವರನ್ನು ಹೊರಗಿಟ್ಟ ನಂತರ ಅವರು ಸೂರ್ಯಕುಮಾರ್ ಯಾದವ್ ಜೊತೆಗೆ ವೆಸ್ಟ್ ಝೋನ್‌ ಟೀಮ್​ನಲ್ಲಿ 2023 ರ ದುಲೀಪ್ ಟ್ರೋಫಿಗಾಗಿ ಆಡಲಿದ್ದಾರೆ. 35 ವರ್ಷದ ಅವರು ದುಲೀಪ್ ಟ್ರೋಫಿಗೆ ತಯಾರಿ ನಡೆಸುತ್ತಿರುವಾಗ ತಮ್ಮ ಬ್ಯಾಟಿಂಗ್ ಸೆಷನ್‌ನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೂಜಾರ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ)ಗೂ ಮೊದಲು ಇಂಗ್ಲೆಂಡ್​ನಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ಆಡಿದ್ದರು. ಅವರು ತಮ್ಮ ಫಾರ್ಮ್​ಗಾಗಿ ಮತ್ತೆ ಆಡಲಿದ್ದಾರೆ ಎನ್ನಲಾಗ್ತಿದೆ.

ಚೇತೇಶ್ವರ ಪೂಜಾರ ಜಾಗದಲ್ಲಿ ಇಬ್ಬರು ಆರಂಭಿಕ ಬ್ಯಾಟರ್​ಗಳಾದ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್​ರ​ನ್ನು ತಂಡಕ್ಕೆ ರಿಪ್ಲೇಸ್​ ಮಾಡಲಾಗಿದೆ. ಎರಡು ಟೆಸ್ಟ್​ ಪಂದ್ಯವನ್ನು ಭಾರತ ಆಡಲಿದ್ದು, ಯಾರಿಗೆ ಯಾವ ಸ್ಥಾನದಲ್ಲಿ ಅವಕಾಶ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವೆಸ್ಟ್ ಇಂಡೀಸ್ ವಿರುದ್ಧ ಜುಲೈ 12 ರಿಂದ ಎರಡು ಟೆಸ್ಟ್ ಸರಣಿ ಆರಂಭವಾಗಲಿದೆ. ಪ್ರಕಟಿಸಿದ ತಂಡಲ್ಲಿ ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಸ್ಥಾನ ಪಡೆದುಕೊಂಡಿಲ್ಲ. ಅವರ ಬದಲಿಯಾಗಿ ಮುಖೇಶ್ ಕುಮಾರ್ ಮತ್ತು ನವದೀಪ್ ಸೈನಿ ತಂಡಕ್ಕೆ ಸೇರಿಕೊಂಡಿದ್ದಾರೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್​ ಕೀಪರ್​), ಇಶಾನ್ ಕಿಶನ್ (ವಿಕೆಟ್​ ಕೀಪರ್​), ಆರ್ ಅಶ್ವಿನ್, ಆರ್ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ

ಇದನ್ನೂ ಓದಿ: West Indies tour: ಐವರು ವೇಗಿಗಳಿಗೆ ಸ್ಥಾನ: ಸೈನಿ, ಮುಕೇಶ್​, ಜಯದೇವ್​​ರಲ್ಲಿ ಪ್ಲೇಯಿಂಗ್​ 11 ಸೇರೋರ್ಯಾರು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.