ETV Bharat / sports

IND vs SL: ಟಾಸ್​ ಗೆದ್ದ ರೋಹಿತ್​ ಬ್ಯಾಟಿಂಗ್ ಆಯ್ಕೆ.. ಅಖಾಡದಲ್ಲಿ​ ತ್ರಿವಳಿ ಸ್ಪಿನ್ನರ್​ಗಳು

author img

By ETV Bharat Karnataka Team

Published : Sep 12, 2023, 2:46 PM IST

Updated : Sep 12, 2023, 3:12 PM IST

ಏಷ್ಯಾಕಪ್​ನ ಸೂಪರ್​ ಫೋರ್​ ಹಂತದ 4ನೇ ಪಂದ್ಯದಲ್ಲಿ ಭಾರತ - ಶ್ರೀಲಂಕಾ ಮುಖಾಮುಖಿ ಆಗುತ್ತಿದ್ದು, ಟಾಸ್​ ಗೆದ್ದ ಭಾರತ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ.

ಏಷ್ಯಾಕಪ್​
ಏಷ್ಯಾಕಪ್

ಕೊಲಂಬೊ (ಶ್ರೀಲಂಕಾ): ನಿನ್ನೆ ಪಾಕಿಸ್ತಾನದ ವಿರುದ್ಧ ಜಯಭೇರಿ ಬಾರಿಸಿದ ಭಾರತಕ್ಕೆ ಇಂದು ಆತಿಥೇಯ ಶ್ರೀಲಂಕಾ ಸವಾಲು ಒಡ್ಡುತ್ತಿದೆ. ಲಂಕಾ ವಿರುದ್ಧ ಟಾಸ್​ ಗೆದ್ದ ರೋಹಿತ್​ ಶರ್ಮಾ ಮೊದಲು ಬ್ಯಾಟಿಂಗ್​ ಮಾಡುವ ನಿರ್ಧಾರ ಮಾಡಿದ್ದಾರೆ. ಭಾರತ ತಂಡದಲ್ಲಿ ಒಂದು ಆಗಿದ್ದು, ಮಧ್ಯಮ ವೇಗಿ ಶಾರ್ದೂಲ್​ ಠಾಕೂರ್​​ ಅವರನ್ನು ಕೈಬಿಟ್ಟು ಅವರ ಬದಲಿಯಾಗಿ ಸ್ಪಿನ್ನರ್​ ಅಕ್ಷರ್​ ಪಟೇಲ್​ಗೆ ಸ್ಥಾನ ಕೊಡಲಾಗಿದೆ.

ಪಾಕಿಸ್ತಾನದ ವಿರುದ್ಧ ಮೀಸಲು ದಿನವಾದ ನಿನ್ನೆ (ಸೋಮವಾರ) ಭಾರತ ಉತ್ತಮ ಬ್ಯಾಟಿಂಗ್​ ಮತ್ತು ಬೌಲಿಂಗ್​ ಪ್ರದರ್ಶನ ನೀಡಿತ್ತು. ಭಾರತ ನೀಡಿದ್ದ 357 ರನ್​ ಗುರಿ ಬೆನ್ನು ಹತ್ತಿದ್ದ ಪಾಕಿಸ್ತಾನ 128 ರನ್​ಗಳಿಗೆ ಸರ್ವ ಪತನ ಕಂಡಿತ್ತು. ಇದರಿಂದ ಭಾರತ 228 ರನ್​ನ ಬೃಹತ್​ ಗೆಲುವನ್ನು ಪಾಕಿಸ್ತಾನದ ವಿರುದ್ಧ ಸಾಧಿಸಿತ್ತು. ಈ ಪಂದ್ಯದಲ್ಲಿ ಕುಲದೀಪ್​ ಯಾದವ್​ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದ್ದು, 5 ವಿಕೆಟ್​ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದರು .

ಏಷ್ಯಾಕಪ್​ನ ಲೀಗ್ ಮತ್ತು ಸೂಪರ್​ ಫೋರ್​ ಹಂತದಲ್ಲಿ ಮೂರು ಪಂದ್ಯಗಳನ್ನು ಆಡಿರುವ ಶ್ರೀಲಂಕಾ ಎಲ್ಲವನ್ನೂ ಗೆದ್ದುಕೊಂಡಿದೆ. ಅದಲ್ಲದೇ ಲಂಕಾಗೆ ತವರು ಮೈದಾನ ಎಂಬ ಪ್ಲೆಸ್​ ಅಂಶವೂ ಇದೆ. ಈ ಎಲ್ಲ ಧನಾತ್ಮಕ ಅಂಶಗಳೊಂದಿಗೆ ಲಂಕಾ ಇಂದು ಭಾರತವನ್ನು ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಲೆಕ್ಕಾಚಾರದಲ್ಲಿದೆ.

ಮತ್ತೆ ಗಾಯಕ್ಕೆ ತುತ್ತಾದ ಅಯ್ಯರ್​​: ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು, ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ (ಎನ್​ಸಿಎ)ಯಲ್ಲಿ ಚೇತರಿಸಿಕೊಂಡ ನಂತರ ಏಷ್ಯಾಕಪ್​ ಆಯ್ಕೆ ಆಗಿದ್ದ ಶ್ರೇಯಸ್​ ಅಯ್ಯರ್​ ಮತ್ತೆ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. "ಶ್ರೇಯಸ್ ಅಯ್ಯರ್ ಅವರು ಉತ್ತಮವಾಗಿದ್ದಾರೆ. ಆದರೆ, ಬೆನ್ನು ಸೆಳೆತದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರಿಗೆ ಬಿಸಿಸಿಐ ವೈದ್ಯಕೀಯ ತಂಡವು ವಿಶ್ರಾಂತಿಗೆ ಸಲಹೆ ನೀಡಿದೆ. ತಂಡದೊಂದಿಗೆ ಇಂದು ಶ್ರೀಲಂಕಾ ವಿರುದ್ಧ ಭಾರತದ ಸೂಪರ್ 4 ಪಂದ್ಯಕ್ಕೆ ಪ್ರಯಾಣಿಸಿಲ್ಲ" ಎಂದು ಬಿಸಿಸಿಯ ಸ್ಪಷ್ಟನೆ ನೀಡಿದೆ.

ತಂಡಗಳು ಇಂತಿವೆ..: ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್​ ಕೀಪರ್​), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಿಕೆಟ್​ ಕೀಪರ್​), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷ್ಣ, ಕಸುನ್ ರಜಿತ, ಮತೀಶ ಪತಿರಣ

ಇದನ್ನೂ ಓದಿ: ಕೊನೆ ಘಳಿಗೆಯಲ್ಲಿ ತಂಡ ಸೇರಿ 'ವಿರಾಟ್' ಪ್ರದರ್ಶನ ನೀಡಿದ ಕೆ.ಎಲ್‌.ರಾಹುಲ್; ರೋಹಿತ್ ಶರ್ಮಾ ಮೆಚ್ಚುಗೆ

Last Updated : Sep 12, 2023, 3:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.