ETV Bharat / sitara

LIVE UPDATE: ಅಭಿಮಾನಿಗಳಿಗೆ ಅನ್ನ ಸಂತರ್ಪಣೆ.. ಫ್ಯಾನ್ಸ್​ಗೆ ಊಟ ಬಡಿಸಿದ ಅಪ್ಪು ಪತ್ನಿ ಅಶ್ವಿನಿ, ಶಿವಣ್ಣ

author img

By

Published : Nov 9, 2021, 10:57 AM IST

Updated : Nov 9, 2021, 3:04 PM IST

Puneeth Rajkumar
ಪುನೀತ್ ರಾಜ್​ಕುಮಾರ್

15:01 November 09

ಫೀಲ್ಡಿಗಿಳಿದ ಡಿಸಿಪಿ

  • 3 ಗಂಟೆ ಆಗುತ್ತಾ ಬಂದರೂ ಅನ್ನಸಂತರ್ಪಣೆಗೆ ಆಗಮಿಸುತ್ತಿರುವ ಅಭಿಮಾನಿಗಳು
  • ಗೇಟ್ ಮುಚ್ಚಿ ಸಾರ್ವಜನಿಕರನ್ನು ಪ್ಯಾಲೇಸ್ ಗ್ರೌಂಡ್ ಒಳಗೆ ಬಿಡಲು ನಿರಾಕರಣೆ
  • ಕಾಂಪೌಂಡ್ ಹತ್ತಿ ಪೊಲೀಸರ ಕಣ್ಣು ತಪ್ಪಿಸಿ ಒಳ ನುಗ್ಗುತ್ತಿರುವ ಜನರು
  • ಜನರನ್ನು ನಿಯಂತ್ರಿಸಲು ಫೀಲ್ಡ್​​ಗೆ ಇಳಿದ ಡಿಸಿಪಿ ಅನುಚೇತ್
  • ಸ್ಥಳದಲ್ಲಿಯೇ ಬಿಗುವಿನ ವಾತಾವರಣ, ಮಾತಿನ ಚಕಮಕಿ

14:20 November 09

ಅರಮನೆ ಮೈದಾನದಲ್ಲಿ ಕುಸಿದು ಬಿದ್ದು ಕರ್ತವ್ಯ ನಿರತ ಪಿಎಸ್​​​ಐ

  • ಅತಿಯಾದ ಒತ್ತಡದಿಂದ ಮೂರ್ಛೆ ಹೋದ ಕರ್ತವ್ಯ ನಿರತ ಪಿಎಸ್​​​ಐ
  • ಅರಮನೆ ಮೈದಾನದಲ್ಲಿ ಕರ್ತವ್ಯದಲ್ಲಿದ್ದ ಪಿಎಸ್​​​ಐ
  • ಬಂದೋಬಸ್ತ್ ವೇಳೆ ಕುಸಿದು ಬಿದ್ದ ಪಿಎಸ್​ಐ
  • ಕೆಆರ್​​ಪುರ‌ ಠಾಣೆಯ ಪಿಎಸ್​​​ಐ ವೆಂಕಟರಮಣ
  • ಪೊಲೀಸ್ ವಾಹನದಲ್ಲಿಯೇ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

12:27 November 09

ಅಪ್ಪು ದೂರಾದ ಮೇಲೆ ಅವನು ಮಾಡಿರೋ ಸೇವೆಗಳು ಹೊರಬರ್ತಿವೆ: ನಟ ಶಿವ ರಾಜ್​​ಕುಮಾರ್

  • ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ಕೆ ಚಾಲನೆ ನೀಡಿದ ಶಿವಣ್ಣ
  • ಅಪ್ಪುವಿನ ಅನ್ನ ಸಂತರ್ಪಣಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ
  • ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ
  • ಯಾವುದೆ ಗೊಂದಲವಾಗಬಾರದು, ಅಭಿಮಾನಿಗಳು ಶಾಂತರೀತಿಯಲ್ಲಿ ಬನ್ನಿ
  • ಅರಮನೆ ಮೈದಾನದಲ್ಲಿ ನಟ ಶಿವ ರಾಜ್​​ಕುಮಾರ್ ಪ್ರತಿಕ್ರಿಯೆ
  • ಅಪ್ಪು ಮಾಡಿದ ಸಾಮಾಜಿಕ ಕಾರ್ಯಗಳು ನಮಗೇ ತಿಳಿದಿರಲಿಲ್ಲ
  • ಅದು ನಮ್ಮ ಕುಟುಂಬದ ಯಾರಿಗೂ ತಿಳಿದಿರಲಿಲ್ಲ
  • ಅಪ್ಪು ನಮ್ಮಿಂದ ದೂರ ಆದಮೇಲೆ ಅವನು ಮಾಡಿರೋ ಸೇವೆಗಳು ಹೊರಗಡೆ ಬರುತ್ತಿವೆ
  • ನಮ್ಮೆಲ್ಲರಿಗೂ ಆಶ್ಚರ್ಯ ಆಗುತ್ತಿದೆ, ಅದು ಅಪ್ಪಾಜಿಯಿಂದ ಬಂದಿರುವ ಗುಣ
  • ಅಷ್ಟು ಸೇವೆ ಮಾಡಿದ್ದಕ್ಕೆ ಅಪಾರ ಅಭಿಮಾನಿಗಳು ಹರಿದು ಬರ್ತಿದ್ದಾರೆ
  • ಅರಮನೆ ಮೈದಾನದಲ್ಲಿ ನಟ ಶಿವ ರಾಜ್​​ಕುಮಾರ್ ಹೇಳಿಕೆ

11:44 November 09

ಅಪ್ಪು ಅಭಿಮಾನಿಗಳಿಗೆ ಊಟ ಬಡಿಸಿದ ರಾಜ್ ಕುಟುಂಬಸ್ಥರು

  • ಅರಮನೆ ಮೈದಾನಕ್ಕೆ ಆಗಮಿಸಿದ ರಾಜ್​ಕುಮಾರ್ ಕುಟುಂಬಸ್ಥರು
  • ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮಕ್ಕಳಾದ ವಿನಯ್, ಯುವ ರಾಜ್​ಕುಮಾರ್ ಆಗಮನ
  • ಮೈದಾನಕ್ಕೆ ನಟ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್​​ಕುಮಾರ್ ಆಗಮನ
  • ಅಭಿಮಾನಿಗಳಿಗೆ ಊಟ ಬಡಿಸಿದ ಪುನೀತ್ ಪತ್ನಿ
  • ಅಭಿಮಾನಿಗಳಿಗೆ ಊಟ ಬಡಿಸಿದ ಶಿವ ರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್

11:17 November 09

ನಾನ್ ವೆಜ್​​ ಮತ್ತು ವೆಜ್​ ಪ್ರಿಯರಿಗೆ ವಿಶೇಷ ಖಾದ್ಯ

  • ನಾನ್​ ವೆಜ್​ ಪ್ರಿಯರಿಗಾಗಿ ವಿಶೇಷ ಊಟದ ವ್ಯವಸ್ಥೆ
  • ಗೀ ರೈಸ್, ಚಿಕನ್ ಚಾಪ್ಸ್, ಚಿಕನ್ ಕಬಾಬ್, ಕೋಳಿ ಮೊಟ್ಟೆ, ಅಕ್ಕಿಪೇಣಿ
  • ಸಸ್ಯಹಾರಿಗಳಿಗೂ ವಿಭಿನ್ನ ಖಾದ್ಯ ತಯಾರಿ
  • ಗೀರೈಸ್ ಮತ್ತು ಕುರ್ಮ, ಆಲು ಕಬಾಬ್, ಬೇಬಿ ಕಾರ್ನ್ ಲಾಲಿ ಪಾಪ್, ಪಾಯಸ, ಮಸಾಲೆ ವಡೆ

10:59 November 09

ಒಂದೇ ಬಾರಿಗೆ 5,000 ಮಂದಿಗೆ ಮಾಂಸದೂಟದ ವ್ಯವಸ್ಥೆ

  • ಟಿವಿ ಟವರ್ ರಸ್ತೆಯ ಗೇಟ್​ ಮೂಲಕವು ಒಳಗೆ ಪ್ರವೇಶ
  • ಎಲ್ಲಾ ಕಡೆ ಬ್ಯಾರಿಕೇಡ್ ಅಳವಡಿಸಿ ವ್ಯವಸ್ಥೆ ಮಾಡಿರುವ ಪೊಲೀಸರು
  • ಅಭಿಮಾನಿಗಳಿಗೆ ವೆಜ್ ಹಾಗೂ ನಾನ್​ವೆಜ್ ಊಟದ ವ್ಯವಸ್ಥೆ
  • ಒಂದೇ ಬಾರಿಗೆ 5,000 ಮಂದಿಗೆ ನಾನ್ ವೆಜ್ ವ್ಯವಸ್ಥೆ
  • ಬಾಳೆ ಎಲೆಯಲ್ಲಿ ಊಟ ಬಡಿಸಲು ಸಿದ್ಧತೆ

10:59 November 09

22 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸುವ ನಿರೀಕ್ಷೆ

  • ಅರಮನೆ ಮೈದಾನದ ಸುತ್ತ ಪೊಲೀಸರ ಬಿಗಿ ಬಂದೋಬಸ್ತ್
  • ಭದ್ರತೆಗೆ 1,500 ಪೊಲೀಸರ ನಿಯೋಜನೆ
  • ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಭದ್ರತೆ
  • ಗೇಟ್ ನಂಬರ್ 2 ಮೂಲಕ ಗಾಯತ್ರಿ ವಿಹಾರ್​​​ನಲ್ಲಿ ಸಾರ್ವಜನಿಕರಿಗೆ ಎಂಟ್ರಿ
  • ವಿಐಪಿ, ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ
  • ಸುಮಾರು 22 ಸಾವಿರಕ್ಕೂ ಅಧಿಕ ಜನರ ನಿರೀಕ್ಷೆ

10:32 November 09

ಪುನೀತ್ ರಾಜ್​​ಕುಮಾರ್ ಅಗಲಿ 12ನೇ ದಿನ ಕಳೆದಿದ್ದು, ಅಭಿಮಾನಿಗಳಿಗೆ ಅನ್ನಸಂತರ್ಪಣೆ

ನಟ ಪುನೀತ್​ ರಾಜ್​ಕುಮಾರ್​ ಅಗಲಿಕೆ ಹಿನ್ನೆಲೆ ನಗರದ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಇಂದು ಅನ್ನಸಂತರ್ಪಣೆ ಕಾರ್ಯ ನಡೆಯುತ್ತಿದೆ. 25 ಸಾವಿರಕ್ಕೂ ಅಧಿಕ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದ್ದು, 1 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜೊತೆಗೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. 

ಅಭಿಮಾನಿಗಳಿಗಾಗಿ ಹತ್ತಾರು ಬಗೆಯ ತಿನಿಸು ತಯಾರಿಸಲಾಗಿದೆ. ಎಲ್ಲಾ ಅಭಿಮಾನಿಗಳಿಗೂ ಬಾಳೆ ಎಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. 

Last Updated : Nov 9, 2021, 3:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.