ತಮ್ಮ ಸಿನಿಮಾಗಳ ಹೊಸ ಪೋಸ್ಟರ್​ ಬಿಡುಗಡೆ ಮಾಡಿ ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿದ ಉಪೇಂದ್ರ, ಗಣೇಶ್

author img

By

Published : Jan 14, 2022, 12:19 PM IST

release-new-posters

ಕವಲುದಾರಿ ಚಿತ್ರದ ಮೂಲಕ ಗಮನ‌ ಸೆಳೆದ ರಿಷಿ ಅಭಿನಯದ 'ಅಲ್ಲೇ ಡ್ರಾ ಅಲ್ಲೇ ಬಹುಮಾನ' ಎಂಬ ಹೊಸ ಚಿತ್ರವನ್ನು ಘೋಷಿಸಲಾಗಿದೆ. ಇದರಲ್ಲಿ ಸಂಕ್ರಾಂತಿ ಹಬ್ಬಕ್ಕೆ ಶುಭಾಶಯಗಳನ್ನ ಹೇಳಿದ್ದಾರೆ..

ಹೊಸ ವರ್ಷದ ಮೊದಲನೇ ಹಬ್ಬ ಮಕರ ಸಂಕ್ರಾಂತಿ. ಈ ಹಬ್ಬವನ್ನು ರಾಜ್ಯದೆಲ್ಲೆಡೆ ಬಹಳ ಸಡಗರದಿಂದ ಆಚರಿಸಲಾಗುತ್ತಿದೆ. ಸ್ಯಾಂಡಲ್​ವುಡ್‌ನಲ್ಲೂ ಹಬ್ಬದ ಕಳೆಕಟ್ಟಿದೆ.

ಹೀಗಾಗಿ, ರಿಯಲ್ ಸ್ಟಾರ್ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ನಟ ರಿಷಿ ಹಾಗೂ ಯುವ ನಟ ಝೈದ್ ಖಾನ್ ತಮ್ಮ ಸಿನಿಮಾಗಳ ಪೋಸ್ಟರ್‌ಗಳನ್ನ ಬಿಡುಗಡೆ ಮಾಡಿ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನ ಕೋರಿದ್ದಾರೆ.

ಉಪೇಂದ್ರರ ಹೋಮ್​ ಮಿನಿಸ್ಟರ್​ ಪೋಸ್ಟರ್​
ಉಪೇಂದ್ರರ ಹೋಮ್​ ಮಿನಿಸ್ಟರ್​ ಪೋಸ್ಟರ್​

ಉಪೇಂದ್ರ ಹಾಗೂ ವೇದಿಕಾ ಅಭಿನಯದ ಹೋಮ್‌ ಮಿನಿಸ್ಟರ್ ಚಿತ್ರದ ಪೋಸ್ಟರ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಸಂಕ್ರಾಂತಿ ಹಬ್ಬದ ಶುಭಾಶಯವನ್ನ ಕೋರಲಾಗಿದೆ.

ಇನ್ನು ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ ಗಣೇಶ್, ದಿಗಂತ್, ಪವನ್ ಕುಮಾರ್ ಅಭಿನಯದ ಗಾಳಿಪಟ-2 ಚಿತ್ರದ ಹೊಸ ಪೋಸ್ಟರ್ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಎಂ.ರಮೇಶ್ ರೆಡ್ಡಿ ಗಾಳಿಪಟ-2 ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ರಿಷಿ ಅಭಿನಯದ ಅಲ್ಲೇ ಡ್ರಾ ಅಲ್ಲೇ ಬಹುಮಾನ ಪೋಸ್ಟರ್​
ರಿಷಿ ಅಭಿನಯದ ಅಲ್ಲೇ ಡ್ರಾ ಅಲ್ಲೇ ಬಹುಮಾನ ಪೋಸ್ಟರ್​

ಇದರ ಜೊತೆಗೆ ಕವಲುದಾರಿ ಚಿತ್ರದ ಮೂಲಕ ಗಮನ‌ ಸೆಳೆದ ರಿಷಿ ಅಭಿನಯದ 'ಅಲ್ಲೇ ಡ್ರಾ ಅಲ್ಲೇ ಬಹುಮಾನ' ಎಂಬ ಹೊಸ ಚಿತ್ರವನ್ನು ಘೋಷಿಸಲಾಗಿದೆ. ಇದರಲ್ಲೂ ಚಿತ್ರತಂಡ ಸಂಕ್ರಾಂತಿ ಹಬ್ಬಕ್ಕೆ ಶುಭಾಶಯ ಹೇಳಿದೆ.

ಝೈದ್ ಖಾನ್​ರ ಬನಾರಸ್​ ಸಿನಿಮಾದ ಪೋಸ್ಟರ್​
ಝೈದ್ ಖಾನ್​ರ ಬನಾರಸ್​ ಸಿನಿಮಾದ ಪೋಸ್ಟರ್​

ಈ ಸ್ಟಾರ್​ಗಳ ಮಧ್ಯೆ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಹಾಗೂ ಸೋನಾಲ್ ಮಾಂಟೆರೊ ಅಭಿನಯಿಸಿರುವ, ನಿರ್ದೇಶಕ ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಸಿನಿರಸಿಕರಿಗೆ‌ ಮಕರ ಸಂಕ್ರಮಣ ಹಬ್ಬದ ಶುಭಾಶಯ ಕೋರಲಾಗಿದೆ.

ಇದನ್ನೂ ಓದಿ: ಪವಿತ್ರ ಗಂಗಾನದಿಯಲ್ಲಿ ಮಿಂದೇಳುತ್ತಿರುವ ಭಕ್ತರು: ಪೊಂಗಲ್ ಆಚರಿಸಿದ ಪುದುಚೇರಿ ಲೆಫ್ಟಿನೆಂಟ್ ಗವರ್ನರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.