ETV Bharat / jagte-raho

ಸಂಪತ್ತು ವೃದ್ಧಿಗೆ ಆಮೆ, ಶಂಖ ನೀಡುವುದಾಗಿ ವಂಚನೆ: ಐವರು ಆರೋಪಿಗಳ ಬಂಧನ

author img

By

Published : Oct 11, 2020, 3:43 PM IST

ಯಶೋಧರ ಎಂಬ ಮಹಿಳೆಗೆ ಶಂಖ, ಪುಂಗಿ ಕಾಯಿ, ಕೆಂಪು ಪಾದರಸ ಹಾಗೂ ಆಮೆ ಇವುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಸಂಪತ್ತು ವೃದ್ಧಿಸುವುದಾಗಿ ನಂಬಿಸಿ, ಆರೋಪಿ ರಾಮು 20 ಸಾವಿರ ರೂ. ಪಡೆದು ವಂಚಿಸಿದ್ದಾನೆ.

koratagere-police-arrested-five-people-tortoises-fraud-case
ಸಂಪತ್ತು ವೃದ್ಧಿಗೆ ಆಮೆ, ಶಂಖ ನೀಡುವುದಾಗಿ ವಂಚನೆ: ಐವರು ಆರೋಪಿಗಳ ಬಂಧನ

ತುಮಕೂರು: ಸಂಪತ್ತು ವೃದ್ಧಿಸುವುದಾಗಿ ನಂಬಿಸಿ ಶಂಖ, ಪುಂಗಿ ಕಾಯಿ, ಆಮೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.

ವಿಜಯ್ ಕುಮಾರ್, ಹರೀಶ್ ಕುಮಾರ್, ಈಶ್ವರಯ್ಯ, ವಿನೋದ್ ಕುಮಾರ್, ಮಹದೇವಯ್ಯ ಬಂಧಿತ ಆರೋಪಿಗಳಾಗಿದ್ದು, ರಾಮು ಮತ್ತು ಸುರೇಶ ತಲೆ ಮರೆಸಿಕೊಂಡಿದ್ದಾನೆ.

ಅಕ್ಟೋಬರ್ 6ರಂದು ಕೊರಟಗೆರೆ ತಾಲೂಕು ಹಕ್ಕಿಪಿಕ್ಕಿ ಕಾಲೋನಿ ಸಮೀಪ ಆರೋಪಿ ರಾಮು ಎಂಬಾತ. ಚಿತ್ರದುರ್ಗ ಜಿಲ್ಲೆಯ ಹೊಸಳ್ಳಿಯ ಯಶೋಧರ ಎಂಬುವರಿಗೆ ಶಂಖ, ಪುಂಗಿ ಕಾಯಿ, ಕೆಂಪು ಪಾದರಸ ಹಾಗೂ ಆಮೆ ಇವುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಸಂಪತ್ತು ವೃದ್ಧಿಸುವುದಾಗಿ ನಂಬಿಸಿದ್ದಾನೆ.

ಯಶೋಧರ ಎಂಬುವರಿಂದ ಆರೋಪಿ ರಾಮು 20 ಸಾವಿರ ರೂ. ಪಡೆದು ವಂಚಿಸಿದ್ದಾನೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಯಶೋಧರ ದೂರು ದಾಖಲಿಸಿದ್ದರು.




ETV Bharat Logo

Copyright © 2024 Ushodaya Enterprises Pvt. Ltd., All Rights Reserved.