ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರನನ್ನು ಬಂಧಿಸಲಾಗಿದ್ದು, 22 ಲಕ್ಷ ರೂ.ಗಳ ಮೌಲ್ಯದ ಬ್ರೆಜಿಲ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಅಪರಾಧಿ ಹಾಗೂ ದಾವೂದ್ ಇಬ್ರಾಹಿಂನ ಬಂಟನಾಗಿರುವ ಅನ್ವರ್ ಠಾಕೂರ್ ಪೆರೋಲ್ ಮೇಲೆ ಹೊರಬಂದಿದ್ದನು. ಮೀರತ್ ಮೂಲದ ಅನ್ವರ್, ದೆಹಲಿಯ ಮಯೂರ್ ವಿಹಾರ್ನ ಪಾಂಡವ್ ನಗರದಲ್ಲಿ ವಾಸಿಸುತ್ತಿದ್ದ. ಆದರೆ ಆತನ ಬಳಿ ಸೆಮಿ ಆಟೋಮ್ಯಾಟಿಕ್ ಬ್ರೆಜಿಲ್ ಪಿಸ್ತೂಲ್ ಸಿಕ್ಕಿದ್ದು, ಮತ್ತೆ ಅರೆಸ್ಟ್ ಮಾಡಲಾಗಿದೆ.
ದೆಹಲಿಯ ಸದರ್ ಬಜಾರ್ ಪೊಲೀಸ್ ಠಾಣೆಯೊಳಗೇ ಪೊಲೀಸ್ ಮಾಹಿತಿದಾರನನ್ನು ಅನ್ವರ್ ಠಾಕೂರ್ ಗುಂಡಿಕ್ಕಿ ಕೊಂದಿದ್ದನು. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಆತ, ಮಾರ್ಚ್ 17 ರಂದು ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದನು.