ETV Bharat / international

ಜನಾಂಗೀಯ ನಿಂದನೆಗೆ ಸಿಂಗಾಪುರದಲ್ಲಿ ಭಾರತೀಯ ಮೂಲದ ಅಧಿಕಾರಿ ಸಾವು?: ತನಿಖೆಗೆ ಕೇಂದ್ರ ಸರ್ಕಾರ ಆಗ್ರಹ

author img

By

Published : Jul 22, 2023, 12:38 PM IST

ಸಿಂಗಾಪುರದಲ್ಲಿ ಭಾರತೀಯ ಮೂಲದ ಅಧಿಕಾರಿ ಸಾವನ್ನಪ್ಪಿದ್ದು, ಜನಾಂಗೀಯ ನಿಂದನೆ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರ ಕೋರಿದೆ.

ಜನಾಂಗೀಯ ನಿಂದನೆಗೆ ಸಿಂಗಾಪುರದಲ್ಲಿ ಭಾರತೀಯ ಮೂಲದ ಅಧಿಕಾರಿ ಸಾವು
ಜನಾಂಗೀಯ ನಿಂದನೆಗೆ ಸಿಂಗಾಪುರದಲ್ಲಿ ಭಾರತೀಯ ಮೂಲದ ಅಧಿಕಾರಿ ಸಾವು

ಸಿಂಗಾಪುರ: ಸಿಂಗಾಪುರದಲ್ಲಿ ಶುಕ್ರವಾರ ಭಾರತೀಯ ಮೂಲದ ಪೊಲೀಸ್​ ಅಧಿಕಾರಿ ಸಾವನ್ನಪ್ಪಿದ್ದು, ಇದಕ್ಕೆ ಜನಾಂಗೀಯ ನಿಂದನೆ, ಬೆದರಿಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ತನಿಖೆ ನಡೆಸಿ ಎಂದು ಕೇಂದ್ರ ಸರ್ಕಾರವು ಸಿಂಗಾಪುರ ಸರ್ಕಾರಕ್ಕೆ ಆಗ್ರಹಿಸಿದೆ.

ಅಧಿಕಾರಿ ಸಾಯುವ ಮುನ್ನ ಹಲವರ ಮೇಲೆ ಆರೋಪ ಮಾಡಿ ಫೇಸ್​​ಬುಕ್​ನಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಇದಲ್ಲದೇ, ಕೆಲಸದ ಸ್ಥಳದಲ್ಲಿ ಅವರನ್ನು ಜನಾಂಗೀಯವಾಗಿ ನಿಂದಿಸಲಾಗಿತ್ತು ಎಂಬ ಆರೋಪ ಬಂದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕೇಂದ್ರ ಕಾನೂನು ಮತ್ತು ಗೃಹ ವ್ಯವಹಾರಗಳ ಸಚಿವ ಕೆ.ಷಣ್ಮುಗಂ ಅವರು ಸಿಂಗಾಪುರ ಪೊಲೀಸ್ ಪಡೆಗೆ(ಎಸ್​ಪಿಎಫ್​) ಕೇಳಿಕೊಂಡಿದ್ದಾರೆ.

ಸಾವಿಗೂ ಮುನ್ನ ಫೇಸ್​ಬುಕ್​ನಲ್ಲಿ ಪೋಸ್ಟ್​: ಉವರಾಜ ಗೋಪಾಲ್(36) ಸಿಂಗಾಪುರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಯಿಶುನ್ ಹೌಸಿಂಗ್ ಎಸ್ಟೇಟ್‌ನ ಅಪಾರ್ಟ್‌ಮೆಂಟ್ ಬ್ಲಾಕ್‌ವೊಂದರಲ್ಲಿ ಅವರು ಶುಕ್ರವಾರ ಶವವಾಗಿ ಪತ್ತೆಯಾಗಿದ್ದರು. ಆಸ್ಪತ್ರೆಗೆ ದಾಖಲಿಸಿದಾಗ ಅವರು ಮೃತಪಟ್ಟಿರುವುದು ದೃಢಪಟ್ಟಿತ್ತು. ಗೋಪಾಲ್​ ಅವರು ಸಾಯುವ ಮೊದಲು ತಮಗಾದ ಅನ್ಯಾಯ, ಬೆದರಿಕೆಗಳ ಬಗ್ಗೆ ಫೇಸ್​ಬುಕ್​ನಲ್ಲಿ ಸವಿಸ್ತಾರ ಪೋಸ್ಟ್​ ಹಂಚಿಕೊಂಡಿದ್ದರು.

ಕೆಲಸದೊತ್ತಡ, ಇತರ ಕಾರಣಗಳಲ್ಲದೇ ಗೋಪಾಲ್​ ಅವರು ವರ್ಣ ನಿಂದನೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಆ ಕೋನದಲ್ಲಿ ತನಿಖೆ ನಡೆಸುವಂತೆ ಭಾರತ ಸರ್ಕಾರ ಕೋರಿದೆ. ಈ ನಡುವೆ ಗೋಪಾಲ್​ ಅವರು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದ ಪೋಸ್ಟ್​ ಅಳಿಸಲಾಗಿದೆ. ಅದರ ಸ್ಕ್ರೀನ್​ಶಾಟ್​ಗಳು ಮಾತ್ರ ಲಭ್ಯವಿವೆ.

ಜನಾಂಗೀಯ ತಾರತಮ್ಯ ನಿಜವೇ?: ಕೇಂದ್ರ ಸಚಿವ ಷಣ್ಮುಗಂ ಅವರು ಗೋಪಾಲ್ ಅವರ ಸಾವಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಸಾವಿಗೆ ಮುನ್ನ ಅಧಿಕಾರಿ ಮಾಡಿದ ಆರೋಪಗಳನ್ನು ಪರಿಶೀಲಿಸುವಂತೆ ಪೊಲೀಸರನ್ನು ಕೋರಿದ್ದಾಗಿ ಹೇಳಿದರು. ಸಾವಿಗೂ ಮೊದಲು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಇತರ ವಿಷಯಗಳ ಜೊತೆಗೆ, ಜನಾಂಗೀಯ ತಾರತಮ್ಯವನ್ನು ಎದುರಿಸಿದ್ದರು. ಇತರ ಆರೋಪಗಳು ಕೂಡ ಗಂಭೀರವಾಗಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ತನಿಖೆಗೆ ಎಸ್​​ಪಿಎಸ್​ ಸಮ್ಮತಿ: ಇದಕ್ಕೆ ಸ್ಪಂದಿಸಿರುವ ಸಿಂಗಾಪುರ ಪೊಲೀಸ್​ ಪಡೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದಿದೆ. ಅಧಿಕಾರಿ ಹಂಚಿಕೊಂಡ ಪೋಸ್ಟ್​ ಮತ್ತು ಅದರ ಸ್ಕ್ರೀನ್​ಶಾಟ್​​ಗಳನ್ನು ಪರಿಶೀಲಿಸಲಾಗುವುದು. ಅವರ ಸಾವಿನ ನಿಖರ ಕಾರಣವನ್ನು ಪತ್ತೆ ಮಾಡಲಾಗುವುದು ಎಂದು ಅಧಿಕಾರಿ ಗೋಪಾಲ್​ ಕುಟುಂಬಸ್ಥರಿಗೆ ಪೊಲೀಸರು ಅಭಯ ನೀಡಿದ್ದಾರೆ.

ಇದನ್ನೂ ಓದಿ: ಪ್ರತಿಭಟನೆ ವೇಳೆ ಗೋರಖ್​​ಪುರ ವಿವಿ ಕುಲಪತಿ, ರಿಜಿಸ್ಟ್ರಾರ್​ ಮೇಲೆ ಎಬಿವಿಪಿ ಪ್ರತಿಭಟನಾಕಾರರಿಂದ ತೀವ್ರ ಹಲ್ಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.