ETV Bharat / international

ರಷ್ಯಾ-ಉಕ್ರೇನ್​ ಮಧ್ಯೆ ಬೆಲಾರಸ್​ನಲ್ಲಿ ಶಾಂತಿ ಮಾತುಕತೆ.. ಕದನ ವಿರಾಮ ಘೋಷಣೆಗೆ ಉಕ್ರೇನ್​ ಒತ್ತಾಯ

author img

By

Published : Feb 28, 2022, 4:35 PM IST

ಉಕ್ರೇನ್​ ವಿರುದ್ಧ ರಷ್ಯಾ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ ಇದೀಗ ತಾರಕ್ಕೇರಿದ್ದು, ಇದರ ಮಧ್ಯೆ ಉಭಯ ದೇಶಗಳ ಮಧ್ಯೆ ಬೆಲಾರಸ್​​ನಲ್ಲಿ ಶಾಂತಿ ಮಾತುಕತೆ ಆರಂಭಗೊಂಡಿದೆ.

Ukrainian delegation
Ukrainian delegation

ಬೆಲಾರಸ್​​: ಕಳೆದ ಐದು ದಿನಗಳಿಂದ ರಷ್ಯಾ-ಉಕ್ರೇನ್​ ಮಧ್ಯೆ ಯುದ್ಧ ನಡೆಯುತ್ತಿದ್ದು, ಇದರ ಮಧ್ಯೆ ಇಂದು ಉಭಯ ದೇಶಗಳ ಮಧ್ಯೆ ಬೆಲಾರಸ್​​ನಲ್ಲಿ ಮಹತ್ವದ ಶಾಂತಿ ಮಾತುಕತೆ ಆರಂಭಗೊಂಡಿದೆ. ಇದರಲ್ಲಿ ಖುದ್ದಾಗಿ ಉಕ್ರೇನ್​ ದೇಶದ ರಕ್ಷಣಾ ಸಚಿವರು ಭಾಗಿಯಾಗಿದ್ದಾರೆ. ನಿನ್ನೆ ಕೂಡ ಗೋಮೆಲ್ ಪ್ರದೇಶದಲ್ಲಿ ಉಭಯ ದೇಶಗಳ ಮಧ್ಯೆ ಶಾಂತಿ ಮಾತುಕತೆ ನಡೆದಿತ್ತು.

ಬೆಲಾರಸ್​​ನಲ್ಲಿ ರಷ್ಯಾ- ಉಕ್ರೇನ್​ ನಿಯೋಗದ ಮಧ್ಯೆ ಮಹತ್ವದ ಶಾಂತಿ ಮಾತುಕತೆ ಆರಂಭಗೊಂಡಿದ್ದು, ಯುದ್ಧ ಆರಂಭದ ಬಳಿಕ ನಡೆಯುತ್ತಿರುವ ಎರಡನೇ ಸುತ್ತಿನ ಮಾತುಕತೆ ಇದಾಗಿದೆ. ಇದರ ಬೆನ್ನಲ್ಲೇ ಕದನ ವಿರಾಮ ಘೋಷಣೆ ಮಾಡುವಂತೆ ಉಕ್ರೇನ್​ ಒತ್ತಾಯ ಮಾಡಿದ್ದಾಗಿ ತಿಳಿದು ಬಂದಿದೆ.

  • #UkraineRussiaCrisis "Russia-Ukraine talks begin in Belarus, between high-level delegations from the two countries; aimed at ending hostilities between the two countries," reports Russia's RT

    — ANI (@ANI) February 28, 2022 " class="align-text-top noRightClick twitterSection" data=" ">

5 ಸಾವಿರ ರಷ್ಯಾ ಯೋಧರ ಹತ್ಯೆ?: ಕಳೆದ ಐದು ದಿನಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ರಷ್ಯಾದ 5 ಸಾವಿರ ಯೋಧರು ಸಾವನ್ನಪ್ಪಿದ್ದಾರೆಂದು ಉಕ್ರೇನ್ ಮಾಹಿತಿ ನೀಡಿದ್ದಾಗಿ ಬಿಬಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ. ಜೊತೆಗೆ 191 ಟ್ಯಾಂಕರ್​, 29 ಫೈಟರ್ ಜೆಟ್​, 29 ಹೆಲಿಕಾಪ್ಟರ್​​​​ ಹೊಡೆದುರುಳಿಸಿರುವುದಾಗಿ ತಿಳಿಸಿದೆ.

ಸೇನಾ ಅನುಭವ ಇರುವ ಕೈದಿಗಳ ಬಿಡುಗಡೆ ಉಕ್ರೇನ್ ನಿರ್ಧಾರ: ರಷ್ಯಾ ವಿರುದ್ಧ ಭೀಕರ ಯುದ್ಧ ಆರಂಭಗೊಂಡಿರುವ ಕಾರಣ ಇದೀಗ ಉಕ್ರೇನ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹೋರಾಟದಲ್ಲಿ ಭಾಗಿಯಾಗಲು ಸೇನಾ ಅನುಭವ ಹೊಂದಿರುವ ಕೈದಿಗಳನ್ನ ರಿಲೀಸ್ ಮಾಡಲಾಗುವುದು ಎಂದು ಅಲ್ಲಿನ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್​ಸ್ಕಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿರಿ: ಮುಂದಿನ 24 ಗಂಟೆ ನಮಗೆ ನಿರ್ಣಾಯಕ: ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.