ETV Bharat / headlines

ಸತ್ಯ ಹೇಳಿದ್ದಕ್ಕೆ ಬಿಜೆಪಿಗರು ನನ್ನ ಮೇಲೆ ಮುಗಿಬೀಳುತ್ತಿದ್ದಾರೆ: ಸಿದ್ದರಾಮಯ್ಯ

author img

By

Published : Oct 20, 2019, 1:19 PM IST

ಕೇವಲ ಹಿಂದೂತ್ವ ಪ್ರತಿಪಾದನೆ ಮೂಲಕ ಕೋಮುವಾದ ಬಿತ್ತುವವರಿಗೆ ಭಾರತ ರತ್ನ ಬೇಡ ಅಂತಾ ಹೇಳಿದ್ದೇನೆ. ಸತ್ಯ ಹೇಳಿದ್ದಕ್ಕೆ ನನ್ನ ಮೇಲೆ ಬಿಜೆಪಿಗರು ಮುಗಿಬೀಳ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ

ಮೈಸೂರು: ಸಾವರ್ಕರ್​ಗೆ ಬಗ್ಗೆ ನಾನು ಹೇಳಿದ ಮಾತು ಸತ್ಯವಾಗಿದೆ. ಆದರಿಂದಲೇ ಬಿಜೆಪಿಯವರು ನನ್ನ ಮೇಲೆ ಮುಗಿ ಬೀಳುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇಲ್ಲಿನ ರಾಮಕೃಷ್ಣ ನಗರದಲ್ಲಿರುವ ನೃಪತುಂಗ ಶಾಲೆಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೂಗಳಿಗೆ ಭಾರತರತ್ನ ಕೊಡಲು ನನ್ನ ವಿರೋಧವಿಲ್ಲ. ಆದ್ರೆ ಹಿಂದುತ್ವವಾದ ಮೂಲಕ ಕೋಮುಭಾವನೆ ಕೆರಳಿಸುವ ವ್ಯಕ್ತಿಗಳಿಗೆ ಕೊಡುವುದು ತಪ್ಪು. ಡಾ. ಶಿವಕುಮಾರ್ ಸ್ವಾಮೀಜಿಗೆ ಭಾರತ ರತ್ನ ಕೊಡಲಿ ಎಂದು ಆಗ್ರಹಿಸಿದರು.

ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಇನ್ನು, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆತ ಯಕಶ್ಚಿತ್ ರಾಜಕಾರಣಿ. ಆತನ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಕುಟುಕಿದರು.

ವಿಧಾನಸಭಾ ಕಲಾಪಗಳಿಗೆ ಮಾಧ್ಯಮಗಳನ್ನು ದೂರ ಮಾಡಿ ಬಿಜೆಪಿ ಅವರು ತಮ್ಮ ಹುಳುಕುಗಳನ್ನು ಮುಚ್ಚಿಕೊಂಡು, ಪಾರದರ್ಶಕ ಆಡಳಿತ ನೀಡದೆ ಮರೆಮಾಚುತ್ತಿದ್ದಾರೆ. ಅವರಿಗೆ ಪಾರದರ್ಶಕ ಆಡಳಿತ ಬೇಕಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಜಾತಿ ಸಮೀಕ್ಷೆ ವರದಿ ರೆಡಿಯಾಗಿದೆ. ಆದರೆ ಬಿಡುಗಡೆಯಾಗಿಲ್ಲ. ವರದಿಯಿಂದ ಎಲ್ಲ ವರ್ಗಗಳಿಗೆ ಅನುಕೂಲವಾಗುತ್ತದೆ ಎಂದರು.

ರಾಜ್ಯಕ್ಕೆ 1200 ಕೋಟಿ ನೆರೆ ಪರಿಹಾರ ಸಾಲುವುದಿಲ್ಲ. ಅದರ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರದಿಂದ ಕೇಳಬೇಕು. ನೆರೆ ಹಣ ಪಡೆಯಲು ಬೋಗಸ್ ದಾಖಲೆ ಸೃಷ್ಟಿಸುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.

ನಾನು ಮುಖ್ಯಮಂತ್ರಿಯಾಗಬೇಕೆಂದು ಜನ ನಿರ್ಧರಿಸಿದರೆ ಆಗುವೆ. ಇಲ್ಲವಾದರೆ ಹೀಗೆ ಇರುತ್ತೇನೆ. ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

Intro:ಸಿದ್ದರಾಮಯ್ಯ ಬೈಟ್


Body:ಸಿದ್ದರಾಮಯ್ಯ ಬೈಟ್


Conclusion:ಸತ್ಯ ಹೇಳಿದ್ದಕ್ಕೆ ಬಿಜೆಪಿ ಅವರು ನನ್ನ ಮೇಲೆ ಮುಗಿ ಬೀಳುತ್ತಿದ್ದಾರೆ: ಸಿದ್ದರಾಮಯ್ಯ
ಮೈಸೂರು: ಸವರ್ಕರ್ ಗೆ ಬಗ್ಗೆ ನಾನು ಹೇಳಿದ ಮಾತು ಸತ್ಯವಾಗಿದೆ.ಆದರಿಂದಲ್ಲೇ ಬಿಜೆಪಿಯವರು ನನ್ನ ಮೇಲೆ ಮುಗಿ ಬೀಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಮೈಸೂರಿನ ರಾಮಕೃಷ್ಣನಗರದಲ್ಲಿರುವ ನೃಪತುಂಗ ಶಾಲೆ ಭೇಟಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದುಗಳಿಗೆ ಭಾರತರತ್ನ ಕೊಡಲು ನನ್ನ ವಿರುದ್ಧವಿಲ್ಲ. ಆದರೆ ಹಿಂದುತ್ವವಾದ ಮೂಲಕ ಕೋಮುಭಾವನೆ ಕೆರಳಿಸುವ ವ್ಯಕ್ತಿಗಳಿಗೆ ಕೊಡುವುದು ತಪ್ಪು, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ಕೊಡಲಿ ಎಂದು ಆಗ್ರಹಿಸುತ್ತೀನಿ ಎಂದರು.
ಸಿದ್ದರಾಮಯ್ಯ ಲಾಯರ್ ಅನಾಯಲಕ್ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿಕೆಗೆ ಉತ್ತರಿಸಿದ ಸಿದ್ದರಾಮಯ್ಯ, ಆತ ಯಕಶ್ಚಿತ್ ಆತನ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಕುಟುಕಿದರು.
ವಿಧಾನಸಭಾ ಕಲಾಪಗಳಿಗೆ ಮಾಧ್ಯಮಗಳನ್ನು ದೂರ ಮಾಡಿ ಬಿಜೆಪಿ ಅವರು ತಮ್ಮ ಹುಳುಕುಗಳನ್ನು ಮುಚ್ಚಿಕೊಂಡು, ಪಾರದರ್ಶಕ ಆಡಳಿತ ನೀಡದೆ ಮರೆಮಾಚುತ್ತಿದ್ದಾರೆ.ಅವರಿಗೆ ಪಾರದರ್ಶಕ ಆಡಳಿತ ಅವರಿಗೆ ಬೇಕಿಲ್ಲ ಎಂದರು.
ಜಾತಿ ಸಮೀಕ್ಷೆ ವರದಿ ರೆಡಿಯಾಗಿದೆ.ಆದರೆ ಬಿಡುಯಾಗಿಲ್ಲ‌‌.ವರದಿಯಿಂದ ಎಲ್ಲ ವರ್ಗಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ರಾಜ್ಯ ನೆರೆಗೆ 1200 ಕೋಟಿ ಸಾಲುವುದಿಲ್ಲ‌.ಅದರ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರ ಹೆಚ್ಚಿನ ಅನುದಾನ ಕೇಂದ್ರ ಸರ್ಕಾರವನ್ನು ಕೇಳಬೇಕು.ನೆರೆ ಹಣ ಪಡೆಯಲು ಬೋಗಸ್ ಸೃಷ್ಟಿ ಮಾಡುವವರ ಮೇಲೆ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.
ನಾನು ಮುಖ್ಯಮಂತ್ರಿಯಾಗಬೇಕೆಂದು ಜನ ನಿರ್ಧರಿಸಿದ್ದಾರೆ ಆಗುತ್ತೀನಿ, ಇಲ್ಲವಾದರೆ ಹೀಗೆ ಇರುತ್ತೀನಿ. ಉಪಚುನಾವಣೆ ಎಲ್ಲ ಕ್ಷೇತ್ರ ಗೆಲುತ್ತೀವಿ ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.