ETV Bharat / entertainment

ಮಗದೊಂದು ಪ್ಯಾನ್ ಚಿತ್ರಕ್ಕಾಗಿ ಮತ್ತೆ ಒಂದಾದ ತ್ರಿವಿಕ್ರಮ್ ಶ್ರೀನಿವಾಸ್-ಅಲ್ಲು ಅರ್ಜುನ್!

author img

By

Published : May 25, 2023, 6:19 PM IST

ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಕಾಂಬಿನೇಷನ್​ನಲ್ಲಿ ಮಗದೊಂದು ಚಿತ್ರ ಸಿದ್ಧಗೊಳ್ಳುತ್ತಿದೆ. ಇವರ ಕಾಂಬಿನೇಷನ್​ನಲ್ಲಿ ಈಗಾಗಲೇ ಮೂರು ಚಿತ್ರಗಳು ತೆರೆಕಂಡಿವೆ. ಇದೀಗ ನಾಲ್ಕನೆ ಚಿತ್ರ ಸಿದ್ಧಗೊಳ್ಳುತ್ತಿದೆ. ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುವ ಮಾತುಕತೆ ನಡೆಯುತ್ತಿದೆ. ಆದರೆ, ಚಿತ್ರದ ನಿರ್ಮಾಪಕರು ಯಾರು ಅನ್ನೋದು ಅಧಿಕೃತ ಘೋಷಣೆಯಾಗಿಲ್ಲ.

Trivikram Srinivas and Allu Arjun to come together for the largest pan-India film, deets inside
ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಸೂಪರ್‌ಸ್ಟಾರ್ ಅಲ್ಲು ಅರ್ಜುನ್

ಹೈದರಾಬಾದ್: ಟಾಲಿವುಡ್​ ಸಿನಿಮಾ ರಂಗದಲ್ಲಿ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ನಟ ಅಲ್ಲು ಅರ್ಜುನ್ ಕಾಂಬಿನೇಷನ್​ ಹೇಳಿ ಮಾಡಿಸಿದ ಜೋಡಿ. ಮೂರು ಸೂಪರ್​ ಹಿಟ್​ ಚಿತ್ರಗಳನ್ನು ನೀಡಿರುವ ಈ ಜೋಡಿ, ಇದೀಗ ನಾಲ್ಕನೇ ಚಿತ್ರಕ್ಕೆ ಅಡಿ ಇಟ್ಟಿದೆ. ನಾಲ್ಕನೇ ಚಿತ್ರವು ಪ್ಯಾನ್-ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದ್ದು, ಅದಕ್ಕೆ ಬೇಕಾದ ಎಲ್ಲ ತಯಾರಿ ಕೂಡ ಮಾಡಿಕೊಳ್ಳಲಾಗುತ್ತಿದೆ. ಬಲ್ಲ ಮಾಹಿತಿ ಪ್ರಕಾರ ತ್ರಿವಿಕ್ರಮ್ ಅವರು ಈಗಾಗಲೇ ನಟ ಅಲ್ಲು ಅರ್ಜುನ್ ಅವರಿಗೆ ಚಿತ್ರ ಕಥೆಯನ್ನು ಹೇಳಿದ್ದು ಅವರು ಮೌಖಿಕವಾಗಿ ಒಪ್ಪಿಗೆ ಕೂಡ ಸೂಚಿಸಿದ್ದಾರೆ ಎಂಬ ಮಾಹಿತಿ ಇದೆ. ಸ್ಕ್ರಿಪ್ಟ್‌ ಕೂಡ ಬರೆದಿದ್ದು ಡಿಸೆಂಬರ್ 2023ರ ವೇಳೆಗೆ ಚಿತ್ರದ ಚಿತ್ರೀಕರಣ ಕೂಡ ಆರಂಭ ಮಾಡಲಿದ್ದಾರಂತೆ.

ಅಲ್ಲು ಅರ್ಜುನ್ ಅವರು ಸದ್ಯ ಪುಷ್ಪ: ದಿ ರೈಸ್ ಚಿತ್ರದಲ್ಲಿ ತಲ್ಲೀನರಾಗಿದ್ದಾರೆ. ಚಿತ್ರವು ಕೊನೆಯ ಹಂತದ ಶೂಟಿಂಗ್​ನಲ್ಲಿದ್ದು, ಬಿಡುಗಡೆ ದಿನಾಂಕ ಘೋಷಣೆಯಾಗಿಲ್ಲ. ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಬಳಿಕವೇ ಅಲ್ಲು ಅರ್ಜುನ್ ಹೊಸ ಸಿನಿಮಾಗಳ ಸ್ಕ್ರಿಪ್ಟ್​ನತ್ತ ಗಮನ ಕೊಡಲಿದ್ದಾರೆ ಎಂಬ ಮಾತು ಕೂಡ ಇದೆ. ಈಗಾಗಲೇ ಅಲ್ಲು ಅರ್ಜುನ್ ಅವರನ್ನು ಹುಡುಕಿಕೊಂಡು ಹಲವು ಆಫರ್‌ಗಳು ಬರುತ್ತಿವೆ. ಆದರೆ, ಅವರೀಗ ಪುಷ್ಪ 2 ಚಿತ್ರದಲ್ಲಿ ಬ್ಯುಸಿ ಆಗಿದ್ದರಿಂದ ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದಿತ್ಯ ಧರ್ ಅವರ 'ದಿ ಇಮ್ಮಾರ್ಟಲ್ ಅಶ್ವತ್ಥಾಮ' ಚಿತ್ರದಲ್ಲಿಯೂ ಅಲ್ಲು ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೂಡ ಇದೆ. ಆದರೆ, ಅದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಬಲ್ಲ ಮೂಲಗಳ ಪ್ರಕಾರ, ಅಲ್ಲು ಅರ್ಜುನ್ ಸ್ಕ್ರಿಪ್ಟ್‌ ಆಯ್ಕೆ ವಿಚಾರದಲ್ಲಿ ತುಸು ಜಾಗರೂಕತೆ ವಹಿಸಿಕೊಳ್ಳಲಿದ್ದು, ಯಾವ ಸಿನಿಮಾಗೆ ಅಧಿಕೃತ ಒಪ್ಪಿಗೆ ಸೂಚಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕು.

ತ್ರಿವಿಕ್ರಮ್ ಶ್ರೀನಿವಾಸ್ ಅವರು ಸದ್ಯ ಮಹೇಶ್ ಬಾಬುಗೆ ಆ್ಯಕ್ಷನ್​ ಕಟ್​ ಹೇಳಿದ್ದು, ಚಿತ್ರಕ್ಕೆ SSMB28 ಎಂಬ ತಾತ್ಕಾಲಿಕ ಹೆಸರು ಕೂಡ ಇಟ್ಟಿದ್ದಾರೆ. ಈ ಚಿತ್ರವು 13 ಜನವರಿ 2024 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಅಲ್ಲು ಅರ್ಜುನ್​ಗೆ ಆ್ಯಕ್ಷನ್​ ಕಟ್ ಹೇಳುವುದರಲ್ಲಿ ಅನುಮಾನವಿಲ್ಲ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಈ ಸುದ್ದಿ ಅವರ ಅಭಿಮಾನಿಗಳ ಕಿವಿಗೆ ಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಕಾಮೆಂಟ್​ ಮಾಡುವ ಮೂಲಕ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ರಿವಿಕ್ರಮ್ ಶ್ರೀನಿವಾಸ್ ಮತ್ತು ನಟ ಅಲ್ಲು ಅರ್ಜುನ್ ಕಾಂಬಿನೇಷನ್​ನಲ್ಲಿ 'ಅಲಾ ವೈಕುಂಠಪುರಮುಲೂ', 'ಜೂಲಾಯಿ' ಮತ್ತು 'S/O ಸತ್ಯಮೂರ್ತಿ' ಅಂತ ಮೂರು ಚಿತ್ರಗಳು ತೆರೆಕಂಡಿವೆ. ಈ ಮೂಲಕ ಸೂಪರ್ ಹಿಟ್​ ಚಿತ್ರ ಕೊಟ್ಟ ಈ ಜೋಡಿ ಇದೀಗ ನಾಲ್ಕನೇ ಚಿತ್ರಕ್ಕೆ ಕಾಲಿಡುತ್ತಿದೆ. ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಭಾರೀ ಸುದ್ದು ಮಾಡಲಿದೆ ಎಂಬ ಮಾತು ಕೂಡ ಇದೆ.

ಇದನ್ನೂ ಓದಿ: ಬಾಲಿವುಡ್​​ ಚೆಂದುಳ್ಳಿ ಚೆಲುವೆಗೆ ಸೂರ್ಯ ಮುತ್ತಿಕ್ಕಿದಾಗ: ನಟಿ ದೀಪಿಕಾ ಸೆಲ್ಫಿಗೆ ಅಭಿಮಾನಿಗಳು ಫಿದಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.