ETV Bharat / entertainment

ಶಿವ 143 ಸಿನಿಮಾ ಪ್ರಚಾರ..ಮಾವ ಪುನೀತ್ ಮೆಚ್ಚಿನ ಅಂಜನಾದ್ರಿ ದೇಗುಲಕ್ಕೆ ಅಳಿಯ ಭೇಟಿ

author img

By

Published : Aug 19, 2022, 1:51 PM IST

Updated : Aug 19, 2022, 2:01 PM IST

ಶಿವ 143 ಸಿನಿಮಾ ಪ್ರಚಾರ ಸಲುವಾಗಿ ನಟ ಧೀರನ್ ರಾಮ್​ಕುಮಾರ್ ಕುಟುಂಬ ಮತ್ತು ಚಿತ್ರತಂಡ ಗಂಗಾವತಿಗೆ ಭೇಟಿ ಕೊಟ್ಟಿದೆ. ಇಂದು ಮಾವ ಪುನೀತ್ ಮೆಚ್ಚಿನ ಅಂಜನಾದ್ರಿ ದೇಗುಲಕ್ಕೆ ಅಳಿಯ, ನಟ ಧೀರನ್ ರಾಮ್​ಕುಮಾರ್ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.

Shiva 143 Movie Promotion Dheeran Ramkumar visits Anjanadri temple
ಮಾವ ಪುನೀತ್ ಮೆಚ್ಚಿನ ಅಂಜನಾದ್ರಿ ದೇಗುಲಕ್ಕೆ ಅಳಿಯ ಭೇಟಿ

ಗಂಗಾವತಿ(ಕೊಪ್ಪಳ): ದಿ. ಪುನೀತ್ ರಾಜ್​ಕುಮಾರ್ ಹೊಸಪೇಟೆ - ಗಂಗಾವತಿಗೆ ಭೇಟಿ ನೀಡಿದಾಗಲೆಲ್ಲ ಚಿಕ್ಕರಾಂಪುರದ ಬಳಿ ಇರುವ ಅಂಜನಾದ್ರಿ ದೇಗುಲಕ್ಕೆ ಭೇಟಿ ನೀಡುತ್ತಿದ್ದರು. ನೆಚ್ಚಿನ ದೈನ ಪವನ ಸುತನ ದರ್ಶನ ಪಡೆದುಕೊಳ್ಳದೇ ಗಂಗಾವತಿಯಿಂದ ಪುನೀತ್ ರಾಜ್​​​ಮಾರ್ ನಿರ್ಗಮಿಸುತ್ತಿರಲಿಲ್ಲ.

ಇದೀಗ ಮಾವನ ನೆಚ್ಚಿನ ದೈವ ಸನ್ನಿಧಿಗೆ ಪುನೀತ್​ ರಾಜ್​ಕುಮಾರ್ ಸಹೋದರಿ ಪೂರ್ಣಿಮಾ, ಪುನೀತ್ ಅಳಿಯ, ನಟ ಧೀರನ್ ರಾಮ್​ಕುಮಾರ್, ಮತ್ತು ಧನ್ಯಾ ರಾಮ್​ಕುಮಾರ್ ಭೇಟಿ ನೀಡಿ ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.

ಅಂಜನಾದ್ರಿ ದೇಗುಲಕ್ಕೆ ಧೀರನ್ ರಾಮ್​ಕುಮಾರ್ ಭೇಟಿ

ಡಾ. ರಾಜ್​​ಕುಮಾರ್ ಪುತ್ರಿ ಪೂರ್ಣಿಮಾ ಅವರು ನಟ ರಾಮ್​​ಕುಮಾರ್​ ಅವರೊಂದಿಗೆ ವಿವಾಹವಾಗಿದ್ದು, ಈ ದಂಪತಿಗೆ ಜನಿಸಿದ ಧೀರನ್ ಮತ್ತು ಧನ್ಯಾ ಎಂಬ ಇಬ್ಬರು ಮಕ್ಕಳೀಗ ಚಿತ್ರರಂಗದಲ್ಲಿ ಭರವಸೆ ಮೂಡಿಸುತ್ತಿದ್ದಾರೆ. ಇದೀಗ ಧೀರನ್ ಅಭಿನಯದ ಶಿವ 143 ಸಿನಿಮಾ ಪ್ರಮೋಷನ್​ಗಾಗಿ ಗಂಗಾವತಿಗೆ ಆಗಮಿಸಿದ್ದಾರೆ. ಅದಕ್ಕೂ ಪೂರ್ವದಲ್ಲಿ ಚಿಕ್ಕರಾಂಪೂರದಲ್ಲಿರುವ ಅಂಜನಾದ್ರಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ವಿಶೇಷ ಎಂದರೆ ಧೀರನ್ ಧರಿಸಿದ್ದ ಅಂಗಿಯ ಮೇಲೆ ಮಾವ ಪುನೀತ್ ನಟನೆಯ ನಾನಾ ಚತ್ರದ ಪೋಸ್ಟರ್​ಗಳಿದ್ದು ಜನರ ಗಮನ ಸೆಳೆಯಿತು.

ಇದನ್ನೂ ಓದಿ: ವೂಟ್​ನಲ್ಲಿ ಬೈರಾಗಿ ಸಿನಿಮಾ ಪ್ರಸಾರ.. ಪ್ರೇಕ್ಷಕರ ಪ್ರತಿಕ್ರಿಯೆಗೆ ಚಿತ್ರತಂಡ ಉತ್ಸುಕ

Last Updated :Aug 19, 2022, 2:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.