ETV Bharat / entertainment

ಯಶ್​​ ಕುರಿತು ಟಾಲಿವುಡ್‌ ನಟ ರವಿತೇಜ ಹೇಳಿಕೆಗೆ ಅಭಿಮಾನಿಗಳ ಅಸಮಾಧಾನ

author img

By ETV Bharat Karnataka Team

Published : Oct 11, 2023, 6:48 PM IST

Ravi Teja statement on Yash: ನಟ ಯಶ್​ ಕುರಿತ ಪ್ರಶ್ನೆಗೆ ರವಿತೇಜ ಉತ್ತರಿಸಿದ ರೀತಿ ಕೆಲವು ಅಭಿಮಾನಿಗಳಿಗೆ ಇಷ್ಟವಾಗಿಲ್ಲ.

Ravi Teja on Yash
ಯಶ್ ಬಗ್ಗೆ ರವಿತೇಜ ಸ್ಟೇಟ್​ಮೆಂಟ್ಸ್

ಸ್ಯಾಂಡಲ್​ವುಡ್​​ ರಾಕಿಂಗ್ ಸ್ಟಾರ್ ಯಶ್ ಇದೀಗ ಪ್ಯಾನ್ ಇಂಡಿಯಾ ನಟ. ಹಾಗಾಗಿ, ವಿಶೇಷ ಪರಿಚಯ ಬೇಕೆನಿಸದು. ಕೆಜಿಎಫ್​ ಎಂಬ ಒಂದೆಸರು ಸಾಕಲ್ಲವೇ ಇದಕ್ಕೆ. ಕಳೆದ ಐದು ವರ್ಷಗಳಲ್ಲಿ ಇವರು ಮಾಡಿದ್ದು ಎರಡೇ ಸಿನಿಮಾ. ಆದ್ರೆ ಅಮೋಘ ಅಭಿನಯ ನಟನ ಜನಪ್ರಿಯತೆಯನ್ನು ನೂರ್ಮಡಿಸಿದೆ. ದೇಶ, ವಿದೇಶಗಳಲ್ಲೂ ತಮ್ಮದೇ ಆದ ಸ್ಟಾರ್‌ಡಮ್​ ಸೃಷ್ಟಿಸಿದ್ದಾರೆ​. ಅಭಿಮಾನಿಗಳ ಬಾಯಲ್ಲಿ ರಾಕಿ ಭಾಯ್​ ಎಂದೇ ಫೇಮಸ್ ಆಗಿದ್ದಾರೆ​. ಆದರೆ ಯಶ್ ಕುರಿತು 'ಟಾಲಿವುಡ್ ಮಾಸ್ ಮಹಾರಾಜ' ರವಿತೇಜ ಕೊಟ್ಟಿರುವ ಸ್ಟೇಟ್​ಮೆಂಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

'ಟೈಗರ್​ ನಾಗೇಶ್ವರ್​ ರಾವ್' ಸಿನಿಮಾ ಪ್ರಮೋಶನ್​: ರವಿತೇಜ ಅಭಿನಯದ ಮುಂದಿನ ಸಿನಿಮಾ 'ಟೈಗರ್​ ನಾಗೇಶ್ವರ್​ ರಾವ್​'​. ರವಿತೇಜ ಸದ್ಯ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ದಕ್ಷಿಣದಿಂದ ಹಿಡಿದು ಉತ್ತರದವರೆಗೂ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಏಕೆಂದರೆ, ಇದು ಅವರ ವೃತ್ತಿ ಜೀವನದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ, ಬಾಲಿವುಡ್​ ಕೋಟೆಯಲ್ಲಿ ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ.

ಟಾಲಿವುಡ್ ಸ್ಟಾರ್ಸ್ ಗುಣಗಾನ: ಇತ್ತೀಚೆಗೆ ಬಾಲಿವುಡ್ ಮಾಧ್ಯಮವೊಂದರ ಸಂದರ್ಶನದಲ್ಲಿ ದಕ್ಷಿಣದ ಕೆಲ ಸೂಪರ್ ಸ್ಟಾರ್​ಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರತಿ ಪ್ರಶ್ನೆಗಳಿಗೂ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಆರ್​ಆರ್​ಆರ್​ ಮೂಲಕ ವಿಶ್ವಾದ್ಯಂತ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ರಾಮ್ ಚರಣ್ ಬಗ್ಗೆ ಪ್ರಶ್ನೆ ಎದುರಾದಾಗ, ಅವರ ನೃತ್ಯವನ್ನು ಇಷ್ಟಪಡುತ್ತೇನೆ. ಉತ್ತಮ ಡ್ಯಾನ್ಸರ್ ಎಂದರು. ಪ್ರಭಾಸ್ ಹಾಗೂ ರಾಜಮೌಳಿ ವಿಷನರಿಗಳು (ದೂರದೃಷ್ಟಿ) ಎಂದರು.

ಯಶ್ ಬಗ್ಗೆ ಹೇಳಿದ್ದೇನು?: ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ಯಶ್​ ಬಗ್ಗೆ ರವಿತೇಜ ಅವರಿಗೆ ಪ್ರಶ್ನೆ ಎದುರಾಯಿತು. ''ಯಶ್​​, ನಾನು ಕೇವಲ ಅವರ ಕೆಜಿಎಫ್​ ನೋಡಿದ್ದೇನಷ್ಟೇ. ಕೆಜಿಎಫ್​​ನಂತಹ ಸಿನಿಮಾ ಸಿಕ್ಕಿದ್ದು ಅವರ ಅದೃಷ್ಟ'' ಎಂದು ತಿಳಿಸಿದರು. ಯಶ್ ಕುರಿತ ರವಿತೇಜರ ಈ ಸ್ಟೇಟ್​ಮೆಂಟ್‌ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಬಹುತೇಕ ಅಭಿಮಾನಿಗಳು ಈ ಕಾಮೆಂಟ್‌ಗಳನ್ನು ಇಷ್ಟಪಟ್ಟಿಲ್ಲ. ಒಂದಿಷ್ಟು ಸಂಖ್ಯೆಯ ಯಶ್ ಅಭಿಮಾನಿಗಳು ರವಿತೇಜ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಲಯಾಳಂ ನಟಿಗೆ ವಿಮಾನದಲ್ಲಿ ಸಹ ಪ್ರಯಾಣಿಕನಿಂದ ಕಿರುಕುಳ, ಪೊಲೀಸರಿಗೆ ದೂರು

ವಂಶಿ ನಿರ್ದೇಶನದ 'ಟೈಗರ್​ ನಾಗೇಶ್ವರ್ ರಾವ್'​ ಅನ್ನು ಅಭಿಷೇಕ್​ ಅಗರ್ವಾಲ್​ ಆರ್ಟ್ಸ್​​ನಡಿ, ಅಭಿಷೇಕ್​ ಅಗರ್ವಾಲ್​ ನಿರ್ಮಾಣ ಮಾಡಿದ್ದಾರೆ. ನೂಪುರ್​ ಸನೋನ್​ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ.​ ಅಕ್ಟೋಬರ್​ 20ಕ್ಕೆ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ​ ತೆರೆಗಪ್ಪಳಿಸಲಿದೆ.

ಇದನ್ನೂ ಓದಿ: ಅಮಿತಾಭ್​​ ಬಚ್ಚನ್ ಬರ್ತ್​​ಡೇ: ಕಲ್ಕಿ2898ಎಡಿ ಪೋಸ್ಟರ್ ರಿಲೀಸ್;​ ಪ್ರಭಾಸ್​ ಸ್ಪೆಷಲ್​ ವಿಶ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.