ETV Bharat / entertainment

ದೀಪಿಕಾ-ರಣ್​ವೀರ್​ ಟ್ರೋಲ್​ ಮಾಡಿದವರ ವಿರುದ್ಧ ಕಾಂಗ್ರೆಸ್​ ನಾಯಕಿ ಸುಪ್ರಿಯಾ ಶ್ರೀನೆಟ್ ಗರಂ

author img

By ETV Bharat Karnataka Team

Published : Oct 31, 2023, 5:16 PM IST

ದೀಪಿಕಾ ಪಡುಕೋಣೆ ಮತ್ತು ರಣ್​ವೀರ್​ ಸಿಂಗ್​ ಕುರಿತು ಟ್ರೋಲ್​ ಮಾಡುವವರ ವಿರುದ್ಧ ಕಾಂಗ್ರೆಸ್​ ನಾಯಕಿ ಸುಪ್ರಿಯಾ ಶ್ರೀನೆಟ್​ ಗರಂ ಆಗಿದ್ದಾರೆ.

Politician Supriya Shrinate slams trolls for 'vulgar memes' and 'character assassination' of Deepika Padukone
ದೀಪಿಕಾ-ರಣ್​ವೀರ್​ ಟ್ರೋಲ್​ ಮಾಡಿದವರ ವಿರುದ್ಧ ಕಾಂಗ್ರೆಸ್​ ನಾಯಕಿ ಸುಪ್ರಿಯಾ ಶ್ರೀನೆಟ್ ಗರಂ

ಬಾಲಿವುಡ್​ ನಿರ್ದೇಶಕ ಕರಣ್​ ಜೋಹರ್​ ನಡೆಸಿಕೊಡುವ ಪ್ರಸಿದ್ಧ ಟಾಕ್​ ಶೋ 'ಕಾಫಿ ವಿತ್​ ಕರಣ್​'. ಸೀಸನ್​ 8ರ ಮೊದಲ ಅತಿಥಿಗಳಾಗಿ ತಾರಾ ದಂಪತಿ ದೀಪಿಕಾ ಪಡುಕೋಣೆ ಹಾಗೂ ರಣ್​ವೀರ್ ಸಿಂಗ್​ ಆಗಮಿಸಿದ್ದರು. ಈ ಶೋನಲ್ಲಿ ತಮ್ಮಿಬ್ಬರ ಪ್ರೇಮಕಥೆ ಯಾವಾಗ, ಎಲ್ಲಿಂದ ಶುರುವಾಯಿತು ಎಂಬುದನ್ನು ಹಂಚಿಕೊಂಡಿದ್ದರು. ಆದರೆ, ದೀಪಿಕಾ ಪಡುಕೋಣೆ ಮದುವೆಗೂ ಹಿಂದಿನ ಸಂಬಂಧಗಳ ಬಗ್ಗೆ ಮಾತನಾಡಿದ್ದರು. ಈ ವಿಚಾರಗಳು ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಸೋಷಿಯಲ್​ ಮೀಡಿಯಾಗಳಲ್ಲಿ ದೀಪಿಕಾ ಪಡುಕೋಣೆ ಟ್ರೋಲ್​ ಆಗುತ್ತಿದ್ದಾರೆ. ರಣ್​ವೀರ್​ ಸಿಂಗ್ ಜೊತೆಗಿನ ವಿವಾಹಕ್ಕೂ ಮುಂಚಿನ ಸಂಬಂಧಗಳ ಬಗ್ಗೆ ಮಾತನಾಡಿರುವುದು ಅವರ ಮೇಲೆ ಕೆಟ್ಟ ಅಭಿಪ್ರಾಯ ಮೂಡಲು ಕಾರಣವಾಗಿದೆ. ಮತ್ತೊಂದೆಡೆ, ನೆಟ್ಟಿಗರು ರಣ್​ವೀರ್​ ಸಿಂಗ್​ ಅವರನ್ನು ಮೋಸಹೋದ ವ್ಯಕ್ತಿ ಎಂದು ಬಿಂಬಿಸುತ್ತಿದ್ದಾರೆ. ಸದ್ಯ ಕಾಫಿ ವಿತ್​ ಕರಣ್​ ಸಾಮಾಜಿಕ ಜಾಲತಾಣಗಳಲ್ಲಿ ‘ಕಲೇಶ್ ವಿತ್ ಕರಣ್’ ಎಂಬ ಹ್ಯಾಷ್​ಟ್ಯಾಗ್​ನಲ್ಲಿ ವೈರಲ್​ ಆಗುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್​ ನಾಯಕಿ ಸುಪ್ರಿಯಾ ಶ್ರೀನೆಟ್​ 'ದೀಪ್​ವೀರ್'​ ಜೋಡಿಯನ್ನು ಬೆಂಬಲಿಸಿ ಮಾತನಾಡಿದ್ದಾರೆ.

ಇಂದು ಇನ್​ಸ್ಟಾಗ್ರಾಮ್​ನಲ್ಲಿ ದೀಪಿಕಾ ಮತ್ತು ರಣ್​ವೀರ್​ ದಂಪತಿಯ ಫೋಟೋವನ್ನು ಹಂಚಿಕೊಂಡಿರುವ ಸುಪ್ರಿಯಾ ಅವರನ್ನು ಟ್ರೋಲ್​ ಮಾಡುವವರ ವಿರುದ್ಧ ಗರಂ ಆಗಿದ್ದಾರೆ. "ನಾವು ಏನಾಗಿದ್ದೇವೆ? ದಂಪತಿ ಟಾಕ್​ ಶೋನಲ್ಲಿ ಒಟ್ಟಿಗೆ ಕುಳಿತು ತಮ್ಮ ಸಂಬಂಧ, ಮದುವೆ ಮತ್ತು ಪ್ರಣಯದ ಬಗ್ಗೆ ಮಾತನಾಡುತ್ತಾರೆ. ಸೂಪರ್​ ಸಾಧಕಿಯಾಗಿರುವ ಮಹಿಳೆಯೊಬ್ಬರು ಮಾನಸಿಕವಾಗಿ ನೊಂದಿದ್ದ ಸಮಯದಲ್ಲಿ ಅದರಿಂದ ಹೊರಬರಲು ಪಟ್ಟ ಕಷ್ಟದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಆಕೆಯೊಂದಿಗೆ ಗೆಳೆಯನಾಗಿ ಹೇಗೆ ಜೊತೆಯಾಗಿ ನಿಂತಿದ್ದೆ ಎಂಬುದನ್ನು ರಣ್​ವೀರ್​ ಹೇಳಿಕೊಂಡಿದ್ದಾರೆ" ಎಂದಿದ್ದಾರೆ.

ಇದನ್ನೂ ಓದಿ: 'ಕಾಫಿ ವಿತ್​ ಕರಣ್​' ಸೀಸನ್​ 8ರ ಮೊದಲ ಅತಿಥಿಗಳಾಗಿ 'ದೀಪ್​ವೀರ್'​ ದಂಪತಿ

"ಇವರಿಬ್ಬರು ಯಾವುದೇ ಮುಜುಗರವಿಲ್ಲದೇ ತಮ್ಮಿಬ್ಬರ ಜೀವನದ ಸಮಸ್ಯೆಗಳನ್ನು ತೆರೆದಿಟ್ಟಿದ್ದಾರೆ. ಅವರ ಆ ಧೈರ್ಯವನ್ನು ಶ್ಲಾಘಿಸುವ ಬದಲು, ವಿಶೇಷವಾಗಿ ದೀಪಿಕಾರನ್ನು ಅಷ್ಟೊಂದು ಟ್ರೋಲ್​ ಮಾಡಿ, ಅಸಭ್ಯವಾಗಿ ತೋರಿಸುವ ವಿಷಯವೇನಿತ್ತು? ಜನರು ಯಾಕೆ ವಾಸ್ತವವನ್ನು ಒಪ್ಪಿಕೊಳ್ಳುವುದಿಲ್ಲ. ನಿಮ್ಮ ಈ ರೀತಿಯ ವರ್ತನೆಗಳು ಅವರನ್ನು ಯಾಕೆ ಮುಜುಗರಪಡಿಸಬೇಕು. ಎಲ್ಲವನ್ನೂ ಯಾಕೆ ಕ್ಯಾಂಡಿ ಫ್ಲೋಸ್​ ಮಾಡಬೇಕು. ಜನರ ಮನಸ್ಸು ಯಾಕೆ ಇಷ್ಟೊಂದು ದ್ವೇಷ, ಕೋಪದಿಂದ ತುಂಬಿದೆ. ಅಮಾನವೀಯ ತೀರ್ಪು ಯಾಕಾಗಿ?" ಎಂದು ಪ್ರಶ್ನಿಸಿದ್ದಾರೆ.

"ಆದರೆ, ವಾಸ್ತವವೇನೆಂದರೆ ನೀವು ಯಾರ ವಿರುದ್ಧ ಇಷ್ಟೆಲ್ಲಾ ದ್ವೇಷ ಕಾರುತ್ತಿದ್ದೀರೋ, ಅವರಿಗೆ ಇದು ಯಾವುದೇ ರೀತಿಯಾಗಿ ಪರಿಣಾಮ ಬೀರುವುದಿಲ್ಲ. ಅದರಲ್ಲೂ ವಿಶೇಷವೆಂದರೆ ಈ ಟ್ರೋಲಿಗರು ಇದೇ ಸ್ಟಾರ್​ ನಟರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹಂಬಲಿಸುತ್ತಾರೆ. ಈ ಜನರಿಗೆ ನಿಜವಾಗಿಯೂ ಪ್ರೀತಿಯ ಅಗತ್ಯವಿರುತ್ತದೆ. ಅವರಿಗೂ ಪ್ರೀತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಏಕೆಂದರೆ ಪ್ರೀತಿಯು ನಿಮ್ಮ ಜಗತ್ತನ್ನು ಹಾಳು ಮಾಡುವುದಿಲ್ಲ. ಬದಲಿಗೆ ನಿಮ್ಮನ್ನು ಒಳ್ಳೆಯ ವ್ಯಕ್ತಿಯನ್ನಾಗಿ ಮಾಡುತ್ತದೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಟ್ರೋಲ್ಸ್​ಗೆ ಡೋಂಟ್​ ಕೇರ್: ಟ್ರೋಲರ್​ಗಳನ್ನೇ ಟ್ರೋಲ್ ಮಾಡಿದ ದೀಪಿಕಾ ಪಡುಕೋಣೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.