ETV Bharat / entertainment

ಅಮೆರಿಕದಲ್ಲಿ ಅದ್ಧೂರಿ ಸಮಾರಂಭ ಮುಗಿಸಿ ಭಾರತಕ್ಕೆ ಮರಳಿದ ಆಸ್ಕರ್​​ ವಿಜೇತರು

author img

By

Published : Mar 17, 2023, 2:09 PM IST

ಆಸ್ಕರ್​ 2023 ಸಮಾರಂಭ ಮುಗಿಸಿಕೊಂಡು ವಿಜೇತರು ದೇಶಕ್ಕೆ ಮರಳಿದ್ದಾರೆ.

oscar winners back to India
ದೇಶಕ್ಕೆ ವಾಪಸ್ಸಾದ ಆಸ್ಕರ್​​ ವಿಜೇತರು

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ಆರ್​ಆರ್​ಆರ್​ ಸಿನಿಮಾದ ಸೂಪರ್​ ಹಿಟ್​ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ, ಹಾಗೆಯೇ ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನ, ಗುನೀತ್​ ಮೊಂಗಾ ನಿರ್ಮಾಣದ "ದ ಎಲಿಫೆಂಟ್ ವಿಸ್ಪರರ್ಸ್" ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಭಾನುವಾರ ತಡರಾತ್ರಿ ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ ವರ್ಣರಂಜಿತ ಕಾರ್ಯಕ್ರಮ ನಡೆದಿತ್ತು. ಮಂಗಳವಾರ ತಡರಾತ್ರಿ ನಟ ಜೂ. ಎನ್​ಟಿಆರ್​ ದೇಶಕ್ಕೆ ವಾಪಸಾಗಿದ್ದರು. ಇದೀಗ ಆರ್‌ಆರ್​ಆರ್​ ತಂಡ, ಗುನೀತ್​ ಮೊಂಗಾ ತಂಡ ಮರಳಿದ್ದಾರೆ. ಭಾರತದಲ್ಲಿ ಆಸ್ಕರ್ ವಿಜೇತರಿಗೆ ಆತ್ಮೀಯ, ಭವ್ಯ ಸ್ವಾಗತ ಕೋರಲಾಗಿದೆ. 'ನಾಟು ನಾಟು'ವಿನ ಸಂಯೋಜಕ ಎಂ.ಎಂ.ಕೀರವಾಣಿ ಮತ್ತು ನಿರ್ದೇಶಕ ರಾಜಮೌಳಿ ಅವರನ್ನು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು.

ನಟ ರಾಮ್ ಚರಣ್ ಕುಟುಂಬ ಕೂಡ ವಾಪಸ್ಸಾಗಿದೆ. ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಗಿದೆ. ಪತ್ನಿ ಉಪಾಸನಾ ಮೊದಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾದ 10 ವರ್ಷಗಳ ನಂತರ ರಾಮ್​ಚರಣ್ ಮತ್ತು ಉಪಾಸನಾ ಪೋಷಕರಾಗುತ್ತಿದ್ದಾರೆ.

ಇಂದು ಬೆಳಗ್ಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಮ್ ಚರಣ್ ಬಂದಿಳಿದರು. ಇಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಮ್​ಚರಣ್, ಆಸ್ಕರ್ ವಿಜೇತ ನಾಟು ನಾಟು ಹಾಡನ್ನು ದೇಶದ ಹಾಡು, ಇದು ದೇಶದ ಗೆಲುವು ಎಂದು ಬಣ್ಣಿಸಿದರು.

ದಿ ಎಲಿಫೆಂಟ್ ವಿಸ್ಪರರ್ಸ್ ಎಂಬ ಕಿರು ಸಾಕ್ಷ್ಯಚಿತ್ರದ ಆಸ್ಕರ್ ವಿಜೇತ ನಿರ್ಮಾಪಕಿ ಗುನೀತ್ ಮೊಂಗಾ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಪತಿ ಸನ್ನಿ ಕಪೂರ್ ಕೂಡ ಜೊತೆಗಿದ್ದರು. ವಿಮಾನ ನಿಲ್ದಾಣದಲ್ಲಿ ಇಬ್ಬರಿಗೂ ಹೂವಿನ ಹಾರ ಹಾಕಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಮೊನ್ನೆಯಷ್ಟೇ ಅಮೆರಿಕದಿಂದ ಆಸ್ಕರ್ ಟ್ರೋಫಿಯೊಂದಿಗೆ ಗುನೀತ್ ಮತ್ತು ಸನ್ನಿ ಚುಂಬಿಸಿರುವ ಚಿತ್ರವೊಂದು ಮುನ್ನೆಲೆಗೆ ಬಂದಿತ್ತು.

ಇದನ್ನೂ ಓದಿ: ನನ್ನ ಜೀವನದ ಅತ್ಯುತ್ತಮ ಕ್ಷಣ.. ಆಸ್ಕರ್​ ಬಗ್ಗೆ ಜೂ. ಎನ್​ಟಿಆರ್​ ಹರ್ಷ

ಮಂಗಳವಾರ ತಡರಾತ್ರಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜೂನಿಯರ್​ ಎನ್​ಟಿಆರ್​ ಅವರನ್ನೂ ಕೂಡ ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡಿದ್ದರು. ಆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಕೀರವಾಣಿ ಮತ್ತು ಚಂದ್ರಬೋಸ್ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿದ್ದು, ನನ್ನ ಜೀವನದ "ಅತ್ಯುತ್ತಮ ಕ್ಷಣ" ಎಂದು ಬಣ್ಣಿಸಿದ್ದರು. ಪ್ರೇಕ್ಷಕರು, ಅಭಿಮಾನಿಗಳು ಮತ್ತು ಚಿತ್ರರಂಗದವರ ಪ್ರೀತಿ ಇಲ್ಲದಿದ್ದರೆ ಈ ಗೆಲುವು ಸಾಧ್ಯವಿರಲಿಲ್ಲ. ಆರ್​ಆರ್​ಆರ್​ ಬಗ್ಗೆ ಬಹಳ ಹೆಮ್ಮೆ ಅನಿಸುತ್ತಿದೆ. ನಮ್ಮ ಸಿನಿಮಾಗೆ ಪ್ರೀತಿ, ಬೆಂಬಲ ಕೊಟ್ಟ ಪ್ರತೀ ಭಾರತೀಯನಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಜಾಗತಿಕವಾಗಿಯೂ ಸಾಕಷ್ಟು ಪ್ರೀತಿ, ಬೆಂಬಲ ವ್ಯಕ್ತವಾಗಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ತಂದೆಯಂತೆ ಸಾಮಾಜಿಕ ಕಳಕಳಿಯ ಸಿನಿಮಾ: ಅಭಿಮಾನಿಗಳ ಹೃದಯದಲ್ಲಿ ಅಪ್ಪು ಅಮರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.