ETV Bharat / entertainment

'ನನ್ನ ದೇಹದ ಪ್ರತೀ ಜೀವಕೋಶವೂ ಇಂದಿರಾ ಗಾಂಧಿಯಾಗಿತ್ತು, ಮುಂದಿನ ಚಿತ್ರಕ್ಕೆ ತಯಾರಿ ಆರಂಭ': ಕಂಗನಾ

author img

By

Published : Jun 13, 2023, 12:51 PM IST

Updated : Jun 13, 2023, 1:22 PM IST

'ಎಮರ್ಜೆನ್ಸಿ' ಸಿನಿಮಾ ಕೆಲಸ ಪೂರ್ಣಗೊಂಡಿದ್ದು, ಮುಂದಿನ ಆ್ಯಕ್ಷನ್​ ಕಾಮಿಡಿ ಚಿತ್ರಕ್ಕೆ ತಯಾರಿ ಆರಂಭವಾಗಿದೆ ಎಂದು ನಟಿ ಕಂಗನಾ ರಣಾವತ್​​ ತಿಳಿಸಿದ್ದಾರೆ.

Kangana Ranaut
ಕಂಗನಾ ರಣಾವತ್​​

ಸಿನಿಮಾ ಜೊತೆಗೆ ಬೋಲ್ಡ್​​ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಬಾಲಿವುಡ್​​​ನ ಪ್ರತಿಭಾನ್ವಿತ ನಟಿ ಕಂಗನಾ ರಣಾವತ್​​ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಒಂದನ್ನು ಶೇರ್ ಮಾಡಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ತಮ್ಮ ಬಹುನಿರೀಕ್ಷಿತ ಚಿತ್ರ 'ಎಮರ್ಜೆನ್ಸಿ' ಕೆಲಸ​ ಪೂರ್ಣಗೊಳಿಸಿದ್ದು, ಮುಂದಿನ ಚಿತ್ರಕ್ಕೆ ತಯಾರಿ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

  • For past two years every cell in my body was Mrs Gandhi, now is the time to move on to the next role, happy to get back to my fitness routine for next action packed comedy 🙂
    (Announcement coming soon) pic.twitter.com/lS3k2RKz0a

    — Kangana Ranaut (@KanganaTeam) June 13, 2023 " class="align-text-top noRightClick twitterSection" data=" ">

ಟ್ವಿಟರ್​, ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿರುವ ಬಾಲಿವುಡ್​ ನಟಿ ಕಂಗನಾ ರಣಾವತ್,​​ ''ಕಳೆದ ಎರಡು ವರ್ಷಗಳಿಂದ ನನ್ನ ದೇಹದ ಪ್ರತೀ ಜೀವಕೋಶವೂ ಶ್ರೀಮತಿ ಗಾಂಧಿಯಾಗಿತ್ತು. ಈಗ ಮುಂದಿನ ಪಾತ್ರಕ್ಕೆ ತೆರಳುವ ಸಮಯ ಬಂದಿದೆ. ಮುಂದಿನ ಆ್ಯಕ್ಷನ್​, ಕಾಮಿಡಿ ಚಿತ್ರಕ್ಕಾಗಿ ನನ್ನ ಫಿಟ್ನೆಸ್​​ ದಿನಚರಿಗೆ ಮರಳಲು ಸಂತೋಷವಾಗಿದೆ'' ಎಂದು ಬರೆದುಕೊಂಡಿದ್ದಾರೆ. ವ್ಯಾಯಾಮ ಮಾಡುತ್ತಿರುವ ವಿಡಿಯೋ ಇದಾಗಿದೆ. ನಟಿಯ ಮುಂದಿನ ಚಿತ್ರದ ಘೋಷಣೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

'ಎಮರ್ಜೆನ್ಸಿ' ಈ ಸಾಲಿನ ಬಹುನಿರೀಕ್ಷಿತ ಚಿತ್ರ. ರಾಜಕೀಯ ಕಥೆಯಾಧಾರಿತ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತರರಾಗಿದ್ದಾರೆ. 'ಎಮರ್ಜೆನ್ಸಿ' ಚಿತ್ರದಲ್ಲಿ ಕಂಗನಾ ರಣಾವತ್ ಅವರು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಜನವರಿಯಲ್ಲಿಯೇ ಶೂಟಿಂಗ್​ ಪೂರ್ಣಗೊಂಡಿರುವ ಈ ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್​ ಹಂತದಲ್ಲಿದೆ. ಈ ಸಿನಿಮಾ ಶೂಟಿಂಗ್​ ಪೂರ್ಣಗೊಂಡ ವೇಳೆ, ಚಿತ್ರಕ್ಕಾಗಿ ಎಲ್ಲವನ್ನೂ ಪಣಕ್ಕಿಟ್ಟಿರುವುದಾಗಿ ಕಂಗನಾ ಹೇಳಿಕೊಂಡಿದ್ದರು. 'ನನ್ನ ಆಸ್ತಿಯನ್ನು ಅಡವಿಟ್ಟಿದ್ದೇನೆ, ಅನಾರೋಗ್ಯವಿದ್ದರೂ ಸಿನಿಮಾ ಚಿತ್ರೀಕರಣ​ ಮುಗಿಸಿದ್ದೇನೆ' ಎಂದು ತಿಳಿಸಿದ್ದರು.

ಅಕ್ಟೋಬರ್​ 20ರಂದು ತೆರೆಕಾಣಲು ಸಜ್ಜಾಗಿರುವ 'ಎಮರ್ಜೆನ್ಸಿ' ಚಿತ್ರ ಕಂಗನಾ ಅವರಿಗೆ ದೊಡ್ಡ ಪರೀಕ್ಷೆ ಅಂದ್ರೆ ತಪ್ಪಾಗಲ್ಲ. ಈ ಚಿತ್ರದಲ್ಲಿ ಕೇವಲ ನಟಿಯಾಗಿ ಕೆಲಸ ಮಾಡಿಲ್ಲ. 'ಎಮರ್ಜೆನ್ಸಿ' ಮೂಲಕ ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿಯೂ ಹೊರ ಹೊಮ್ಮಲಿದ್ದಾರೆ. ಆಸ್ತಿ ಅಡವಿಟ್ಟು ಸಿನಿಮಾ ಮಾಡಿರುವ ಹಿನ್ನೆಲೆ ಕಂಗನಾ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: Adipurush: 24 ಗಂಟೆಯಲ್ಲಿ 36 ಸಾವಿರ 'ಆದಿಪುರುಷ್' ಟಿಕೆಟ್​ಗಳ ಮಾರಾಟ.. ಆರ್​ಆರ್​ಆರ್​​, ಪಠಾಣ್​ ದಾಖಲೆಗಳು ಉಡೀಸ್​!

ಸಿನಿಮಾ ಮಾತ್ರವಲ್ಲದೇ ಬೋಲ್ಡ್​ ಹೇಳಿಕೆಗಳಿಗೂ ಹೆಸರುವಾಸಿಯಾಗಿರುವ ಕಂಗನಾ ರಣಾವತ್​ ಇತ್ತೀಚೆಗೆ ರಾಮಾಯಣ ಆಧಾರಿತ ಸಿನಿಮಾ ಬಗ್ಗೆ ಮಾತನಾಡಿದ್ದರು. ಇನ್‌ಸ್ಟಾಗ್ರಾಮ್ ಸ್ಟೋರಿಸ್​ನಲ್ಲಿ, ಬಾಲಿವುಡ್​ ನಟ ರಣ್​ಬೀರ್​ ಕಪೂರ್​ ಅವರ ಬಗ್ಗೆ ಟೀಕಿಸಿದ್ದರೆ, ಕನ್ನಡ ನಟ ಯಶ್​​ ಬಗ್ಗೆ ಗುಣಗಾನ ಮಾಡಿದ್ದರು. ಬಾಲಿವುಡ್​ನಲ್ಲಿ ರಾಮಾಯಣ ಆಧಾರಿತ ಸಿನಿಮಾಗೆ ತಯಾರಿ ಆರಂಭಗೊಂಡಿದ್ದು, ಬಹುಬೇಡಿಕೆ ತಾರೆಯರಾದ ರಣ್​ಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ರಾಮ ಸೀತೆ ಪಾತ್ರದಲ್ಲಿ ರಾಕಿಂಗ್​ ಸ್ಟಾರ್ ಯಶ್​​ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದ್ರೀಗ ಯಶ್​ ರಾವಣನ ಪಾತ್ರವನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ ಎನ್ನುವ ಮಾಹಿತಿ ಇದೆ. ಆದ್ರೆ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಅಸಮಧಾನ ವ್ಯಕ್ತಪಡಿಸಿದ್ದ ಕಂಗನಾ, ತೆಳು ಬಿಳಿ ಇಲಿ ರಾಮನ ಪಾತ್ರಕ್ಕೆ, ಶ್ರೀರಾಮನಂತೆ ಕಾಣುವ ದಕ್ಷಿಣದ ಸೂಪರ್​ ಸ್ಟಾರ್​ಗೆ ರಾವಣನ ಪಾತ್ರವೇ? ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: Kangana Ranaut.. 'ಬಿಳಿ ಇಲಿ ರಾಮನ ಪಾತ್ರಕ್ಕೆ ಬೇಡ': ಭಗವಾನ್​ನಂತೆ ಯಶ್​ ಕಾಣುತ್ತಾರೆಂದ ಕಂಗನಾ

Last Updated : Jun 13, 2023, 1:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.