ETV Bharat / entertainment

RRR ನಾಟು ನಾಟು ಹಾಡಿಗೆ 'G-20' ಪ್ರತಿನಿಧಿಗಳೂ ಫಿದಾ: ವಿಡಿಯೋ

author img

By

Published : Mar 30, 2023, 12:38 PM IST

ಆಸ್ಕರ್ ಪ್ರಶಸ್ತಿ ವಿಜೇತ 'ನಾಟು ನಾಟು' ಹಾಡಿಗೆ G-20 ಪ್ರತಿನಿಧಿಗಳು ಡ್ಯಾನ್ಸ್ ಮಾಡಿದ್ದಾರೆ.

G-20 representatives dance for natu natu
ನಾಟು ನಾಟು ಹಾಡಿಗೆ ಮೈ ಕುಣಿಸಿದ 'G-20' ಪ್ರತಿನಿಧಿಗಳು

ಚಂಡೀಗಢ (ಪಂಜಾಬ್): 2023ನೇ ಸಾಲಿನ ಆಸ್ಕರ್​ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ತೆಲುಗಿನ ಆರ್​ಆರ್‌ಆರ್​ ಚಿತ್ರದ ಸೂಪರ್​ ಹಿಟ್​ ಹಾಡು​ ನಾಟು ನಾಟು ಕ್ರೇಜ್​ ಮುಂದುವರಿದಿದೆ. ಚಂಡೀಗಢದಲ್ಲಿ ಬುಧವಾರ ಜಿ-20 ಎರಡನೇ ಕೃಷಿ ಪ್ರತಿನಿಧಿಗಳ ಸಭೆಯ (ADM) ಸಂದರ್ಭದಲ್ಲಿ ಪ್ರತಿನಿಧಿಗಳು ಜನಪ್ರಿಯ ಹಾಡಿಗೆ ಮೈ ಕುಣಿಸಿದರು. ವಿದೇಶಿ ಪ್ರತಿನಿಧಿಗಳು ಚಂಡೀಗಢದ ಸ್ಥಳೀಯ ನೃತ್ಯಗಾರರೊಂದಿಗೆ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

  • #WATCH | Chandigarh: G20 delegates dance to the tunes of 'Naatu Naatu' song from RRR movie

    The 2nd Agriculture Deputies Meeting (ADM) of Agriculture Working Group under India’s G20 presidency began in Chandigarh yesterday. pic.twitter.com/zhsF5GPkP5

    — ANI (@ANI) March 29, 2023 " class="align-text-top noRightClick twitterSection" data=" ">

ಇತ್ತೀಚೆಗಷ್ಟೇ ಪ್ರತಿಷ್ಠಿತ ಆಸ್ಕರ್ 2023 ಸಮಾರಂಭ ನಡೆಯಿತು. ಆರ್​ಆರ್​ಆರ್​ ಚಿತ್ರದ ಸೂಪರ್​ ಹಿಟ್​ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರತಿಷ್ಟಿತ​ ಪ್ರಶಸ್ತಿ ಪಡೆದುಕೊಂಡಿದೆ. ಈ ಪ್ರಶಸ್ತಿ ಪಡೆದ ಬಳಿಕ ನಟ ರಾಮ್​ ಚರಣ್​, ಜೂ. ಎನ್​ಟಿಆರ್​, ನಿರ್ದೇಶಕ ರಾಜಮೌಳಿ ಅವರ ಖ್ಯಾತಿ ಸಾಗರದಾಚೆಗೂ ಹಬ್ಬಿದೆ. ಭಾರತೀಯ ಚಲನಚಿತ್ರೋದ್ಯಮ ಮತ್ತಷ್ಟು ಸೃಜನಶೀಲ ಸಿನಿಮಾಗಳನ್ನು ನಿರ್ಮಿಸಲು ಪ್ರಶಸ್ತಿ ಪ್ರೇರಣೆ ಒದಗಿಸಿದೆ.

ನಾಟು ನಾಟು ಗೀತೆ ರಚನೆಕಾರ ಚಂದ್ರಬೋಸ್, ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ ಅವರ ಹಾಡಿಗೆ ಆಕರ್ಷಕವಾಗಿ ನೃತ್ಯ ಮಾಡಿ ಮನಸ್ಸು ಗೆದ್ದವರು ರಾಮ್​ ಚರಣ್​ ಮತ್ತು ಜೂ. ಎನ್​ಟಿಆರ್​. ಎಲ್ಲರ ಪ್ರರಿಶ್ರಮದ ಫಲ ಮತ್ತು ಅಭಿಮಾನಿಗಳ ಬೆಂಬಲ, ಪ್ರೀತಿಯಿಂದಾಗಿ ನಾಟು ನಾಟು ಆಸ್ಕರ್​ ಗೆಲ್ಲಲು ಸಾಧ್ಯವಾಯಿತು ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ: ಮಾಡದ ಅಪರಾಧಕ್ಕೆ ನಾನೇಕೆ ನರಳಬೇಕು?: ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ

ಗೀತೆ ರಚನೆಕಾರ ಚಂದ್ರಬೋಸ್ ಅವರ 27 ವರ್ಷಗಳ ಬರವಣಿಗೆಯ ಪಯಣದಲ್ಲಿ ಈ ಹಾಡಿಗೆ ಕೊಟ್ಟಷ್ಟು ಸಮಯವನ್ನು ಅವರು ಮತ್ಯಾವುದಕ್ಕೂ ಕೊಟ್ಟಿಲ್ಲವಂತೆ. ಹಾಡು ಬರೆಯಲು 19 ತಿಂಗಳು ಸಮಯ ತೆಗೆದುಕೊಂಡಿದ್ದಾರೆ. ''ಹಾಡನ್ನು ನಾಲ್ಕೈದು ದಿನಗಳಲ್ಲಿ ಮುಗಿಸಬೇಕು. ಬಹಳ ಎಂದರೆ ಒಂದು ತಿಂಗಳು. ಆದರೆ ನಾಟು ನಾಟು ಪೂರ್ಣಗೊಳಿಸಲು 19 ತಿಂಗಳು ಬೇಕಾಯಿತು. ತಾಳ್ಮೆ ಕಳೆದುಕೊಳ್ಳದೇ ಕುಳಿತು ಪ್ರತಿ ಪದವನ್ನೂ ಬಹಳ ಜಾಗರೂಕತೆಯಿಂದ ಬರೆದೆ. ಹಾಗಾಗಿ ಸಾಹಿತ್ಯದ ಜೊತೆಗೆ ತಾಳ್ಮೆಗೂ ಪ್ರಶಸ್ತಿ ಸಿಕ್ಕಂತಾಗಿದೆ'' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

ಇದನ್ನೂ ಓದಿ: ಮತ ಎಣಿಕೆಗೆ ಎರಡು ದಿನ ಬೇಕೆ? ಸಂಚಲನ ಮೂಡಿಸಿದ ಉಪ್ಪಿ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.