ETV Bharat / entertainment

ಜಗ್ಗೇಶ್ ಬಳಿಕ ಮತ್ತೆ ಬರ್ತಿದೆ 'ಮಠ'... ಸಿನೆಮಾದಲ್ಲಿದ್ದಾರೆ ಖ್ಯಾತ ನಟರು

author img

By

Published : Jun 15, 2022, 10:10 AM IST

ಸುಮಾರು ಮೂರು ವರ್ಷಗಳ ಕಾಲ ಚಿತ್ರೀಕರಣ ನಡೆಸಿರುವ 'ಮಠ' ಚಿತ್ರತಂಡ, 25 ಜಿಲ್ಲೆಗಳಲ್ಲಿ ವಿವಿಧ ಪ್ರವಾಸಿ ತಾಣಗಳಲ್ಲಿ ಕಥೆಗೆ ತಕ್ಕಂತೆ ಚಿತ್ರೀಕರಿಸಲಾಗಿದೆ. ಸುಮಾರು ಮುನ್ನೂರು ಮಠಗಳಲ್ಲಿ ಚಿತ್ರೀಕರಣ ನಡೆಸಲಾಗಿದೆಯಂತೆ. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

another-math-movie-in-kannada
ಜಗ್ಗೇಶ್ ಬಳಿಕ ಮತ್ತೆ ಬರ್ತಿದೆ 'ಮಠ'... ಸಿನೆಮಾ ಹೀರೋ ಯಾರು ಗೊತ್ತಾ?

ನವರಸನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ಗುರು ಪ್ರಸಾದ್​​ಗೆ ಸ್ಯಾಂಡಲ್​ವುಡ್​​ನಲ್ಲಿ ದೊಡ್ಡ ಮಟ್ಟದ ಬ್ರೇಕ್ ನೀಡಿದ ಸಿನಿಮಾ‌ 'ಮಠ'. ಗುರು ಪ್ರಸಾದ್ ನಿರ್ದೇಶನ ಮತ್ತು ಜಗ್ಗೇಶ್ ವಿಭಿನ್ನ ಮ್ಯಾನರಿಸಂನಿಂದ ಮಠ ಚಿತ್ರವು ಸಿನಿಪ್ರಿಯರನ್ನು ನಕ್ಕು ನಲಿಸಿತ್ತು. ಇದೀಗ ಇದೇ ಟೈಟಲ್ ಮೇಲೆ ಸಿನೆಮಾವೊಂದು ಬರುತ್ತಿದೆ. ಹಾಗಂತ ಈ ಸಿನೆಮಾಗೂ, ಆ ಸಿನೆಮಾಗೂ ಸಂಬಂಧವಿಲ್ಲ, ಇದೇ ಬೇರೆ ಅದೇ ಬೇರೆ.

ಫಿಲಾಸಫಿಕಲ್, ಕಾಮಿಡಿ, ಸತ್ಯ ಘಟನೆಯಾಧಾರಿತ ಮಠ ಸಿನೆಮಾದಲ್ಲಿ ದೊಡ್ಡ ತಾರಾಬಳಗವಿದೆ. ಬರೋಬ್ಬರಿ 82 ಜನ ಕಲಾವಿದರು ನಟಿಸಿರುವ ಈ ಚಿತ್ರದಲ್ಲಿ, ನಿರ್ದೇಶಕ ಗುರು ಪ್ರಸಾದ್ ಹಾಗೂ ತಬಲನಾಣಿ, ಮಂಡ್ಯ ರಮೇಶ್, ಬಿರಾದಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ‌.

ಸುಮಾರು ಮೂರು ವರ್ಷಗಳ ಕಾಲ ಚಿತ್ರೀಕರಣ ನಡೆಸಿರುವ ಚಿತ್ರತಂಡ, 25 ಜಿಲ್ಲೆಗಳಲ್ಲಿ ವಿವಿಧ ಪ್ರವಾಸಿ ತಾಣಗಳಲ್ಲಿ ಕಥೆಗೆ ತಕ್ಕಂತೆ ಶೂಟಿಂಗ್​ ಮಾಡಿದೆ. ಸುಮಾರು ಮುನ್ನೂರು ಮಠಗಳಲ್ಲಿ ಚಿತ್ರೀಕರಣ ನಡೆಸಲಾಗಿದೆಯಂತೆ. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

another-math-movie-in-kannada
ಮಠ ಸಿನೆಮಾ ತಾರಾಬಳಗ

ಈ ಬಗ್ಗೆ ಮಾತನಾಡಿದ ಹಾಸ್ಯ ನಟ ಸಾಧುಕೋಕಿಲ, ನಾನು ಸುಮಾರು ಮಾಡಿರಬಹುದು. ಆದರೆ ಲೆಕ್ಕ ಇಟ್ಟಿಲ್ಲ. ಸುಮಾರು 600ರಿಂದ 700 ಸಿನೆಮಾ ಮಾಡಿರಬಹುದು. ಜಾಸ್ತಿ ಅಥವಾ ಕಡಿಮೆ ಎರಡು ಇರಬಹುದು. ಆದರೆ, ಗುರು ಪ್ರಸಾದ್ ಮಠ ಸಿನೆಮಾದಲ್ಲಿ ನಾನು ಒಂದೆರೆಡು ಸೀನ್​ನಲ್ಲಿ ಮಾಡಿದ್ದೇನೆ. ಈ ಚಿತ್ರದಲ್ಲಿ ಮಠ ಎಂದು ಹೆಸರು ತೆಗೆದುಕೊಳ್ಳಲಾಗಿದೆ, ಕಥಾವಸ್ತು ಬೇರೆ. ನಾನು ಮೇಜರ್ ರೋಲ್ ಮಾಡಿದ್ದು, ಆದರೆ, ಅದು ನನಗೆ ಕಾಮಿಡಿಯಲ್ಲ. ಇದು ನಿಜ ಜೀವನದ ಕಥೆ. ಒಂದೊಂದು ಪಾತ್ರವೂ ಕಥಾನಕ‌ ಎಂದು ಹೇಳಿದರು.

ಮನೆ ಕಟ್ಟುವುದು ಸುಲಭ, ಮಠ ಕಟ್ಟೋದಿ ಕಷ್ಟ: ಬಳಿಕ ನಿರ್ದೇಶಕ ಗುರು ಪ್ರಸಾದ್ ಮಾತನಾಡಿ, ಮನೆ ಕಟ್ಟುವುದು ಸುಲಭ. ಮಠ ಕಟ್ಟುವುದು ಕಷ್ಟ. 290 ದಿನ ಪಯಣ ಮಾಡಿ ಮಠಗಳಿಗೆ ಭೇಟಿ‌ ಕೊಟ್ಟು ಕಥೆ ಮಾಡಿ ಸಿನೆಮಾ ಮಾಡೋದು ಕಷ್ಟ. ಈ ಚಿತ್ರವು ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.

another-math-movie-in-kannada
ಗುರು ಪ್ರಸಾದ್, ತಬಲನಾಣಿ ಹಾಗೂ ಸಾಧುಕೋಕಿಲ

ಮಠ ಸಿನೆಮಾ ಕಥೆಗೆ ಹೊಂದಿಕೆಯಾಗುತ್ತದೆ ಎಂಬ ಕಾರಣಕ್ಕೆ ಈ ಶೀರ್ಷಿಕೆ ಇಟ್ಟಿದ್ದಾರೆ. ಗುರು ಪ್ರಸಾದ್ ಇಲ್ಲದೇ ಮಠ ಅಪೂರ್ಣ. ಹೀಗಾಗಿ ಅವರನ್ನು ಕೇಳಿದ್ದೆವು. ಅವರು ಗ್ರೀನ್ ಸಿಗ್ನಲ್ ಕೊಟ್ಟರು, ಸಿನೆಮಾ ಮಾಡಿದ್ದೇವೆ ಎನ್ನುತ್ತಾರೆ ನಿರ್ದೇಶಕ ರವೀಂದ್ರ ವಂಶಿ.

ಈ ಚಿತ್ರಕ್ಕೆ ಜೀವನ್ ಗೌಡ ಛಾಯಾಗ್ರಹಣ, ರಾಜ್ಯಪ್ರಶಸ್ತಿ ವಿಜೇತ ಸಿ. ರವಿಚಂದ್ರನ್ ಸಂಕಲನ, ವಿ. ಮನೋಹರ್ ಸಂಗೀತ ನಿರ್ದೇಶನ, ಯೋಗರಾಜ್ ಭಟ್​​​, ವಿ‌. ನಾಗೇಂದ್ರ ಪ್ರಸಾದ್, ಗೌಸ್ ಫೀರ್ ಸಾಹಿತ್ಯವಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಮಠ ಸಿನೆಮಾ ಸದ್ಯದಲ್ಲೇ ತೆರೆಗೆ ಬರಲಿದೆ.

ಇದನ್ನೂ ಓದಿ: 'ದಿ ಲೇಡಿ ಕಿಲ್ಲರ್'​ಗಾಗಿ ನೈನಿತಾಲ್​ನಲ್ಲಿ ಬೀಡುಬಿಟ್ಟ ನಟ ಅರ್ಜುನ್ ಕಪೂರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.