ಪಾಟ್ನಾ (ಬಿಹಾರ): ಮೂರು ದಿನಗಳ ಹಿಂದೆ ಕಿಡ್ನ್ಯಾಪ್ ಆಗಿದ್ದ ಇಬ್ಬರು ಮಕ್ಕಳು ಇದೀಗ ನದಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಬಿಹಾರದ ಪಾಟ್ನಾದ ಮಖ್ದಂಪುರ್ ಎಂಬ ಗ್ರಾಮದಿಂದ ಅನೀಶ್ ಕುಮಾರ್ ಮತ್ತು ಶಿವಂ ಕುಮಾರ್ ಎಂಬ ಮಕ್ಕಳು ಕಾಣೆಯಾಗಿದ್ದರು. ವಿನೋದ್ ಕುಮಾರ್ ಎಂಬ ವ್ಯಕ್ತಿ ಎರಡು ಮದುವೆಯಾಗಿದ್ದು, ಈ ಮಕ್ಕಳು ಎರಡನೇ ಹೆಂಡತಿಯ ಮಕ್ಕಳಾಗಿದ್ದಾರೆ. ಆಸ್ತಿ ವಿವಾದ ಹಿನ್ನೆಲೆ ಮೊದಲ ಹೆಂಡತಿ ಸುನೀತಾ ದೇವಿ ಹಾಗೂ ಅವರ ಪುತ್ರರಾದ ಸೌರಭ್ ಕುಮಾರ್, ಗುಲ್ಶನ್ ಕುಮಾರ್ ಸೇರಿಕೊಂಡು ಮಕ್ಕಳನ್ನು ಅಪಹರಿಸಿ, ಕೊಲೆ ಮಾಡಿ ಬಳಿಕ ಮೃತದೇಹಗಳನ್ನು ನದಿಯಲ್ಲಿ ಎಸೆದಿದ್ದಾರೆ.
ಇದನ್ನೂ ಓದಿ: ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿಸುವ ಮೂಲಕ ಮುಕ್ತವಾಗಿ ಮಾತನಾಡುವುದಕ್ಕೆ ತಡೆ ಹಾಕಲು ಸಾಧ್ಯವಿಲ್ಲ: ಸುಪ್ರೀಂ
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೂವರೂ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.