ETV Bharat / city

ರಾಜ್ಯಕ್ಕೆ ವಿಧಿ ವಿಜ್ಞಾನ ವಿವಿ ನೀಡುವಂತೆ ಅಮಿತ್ ಶಾಗೆ ಮನವಿ:  ಗೃಹ ಸಚಿವ ಆರಗ ಜ್ಞಾನೇಂದ್ರ

author img

By

Published : Apr 2, 2022, 5:58 PM IST

ವಿಧಿ ವಿಜ್ಞಾನ ವಿಶ್ವ ವಿದ್ಯಾನಿಲಯ ಬೇಡಿಕೆ ಇಟ್ಟಿದ್ದು ಕ್ಯಾಬಿನೆಟ್​ನಲ್ಲಿ ತೀರ್ಮಾನ ಮಾಡಿ ಕಳುಹಿಸಿ ಎಂದು ಹೇಳಿದ್ದಾರೆ ಎಂದರು.

Araga Jnanendra
ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ: ರಾಜ್ಯಕ್ಕೆ ವಿಧಿ ವಿಜ್ಞಾನ ವಿಶ್ವ ವಿದ್ಯಾನಿಲಯ ಮಂಜೂರು ಮಾಡಬೇಕೆಂದು ಕೇಂದ್ರದ ಗೃಹ ಸಚಿವ ಅಮಿತಾ ಶಾರಲ್ಲಿ ಮನವಿ ಮಾಡಲಾಗಿದೆ ಎಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತಾ ಶಾ ಅವರು ಮೊನ್ನೆ ರಾತ್ರಿಯಿಂದ ನಿನ್ನೆ ರಾತ್ರಿಯ ತನಕ ನಮ್ಮ ರಾಜ್ಯದ ಪ್ರವಾಸದಲ್ಲಿದ್ದರು.‌ ನಾನೂಬ್ಬ ಗೃಹ ಸಚಿವನಾಗಿ ಅವರ ಮುಂದೆ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದೇನೆ ಎಂದರು.

ಗೃಹ ಸಚಿವರು ನಮ್ಮ ರಾಜ್ಯಕ್ಕೆ ಭೇಟಿ ನೀಡಿದಕ್ಕೆ ನಮಗೆಲ್ಲಾ ತುಂಬ ಸಂತೋಷವಾಗಿದೆ. ನಾನು ನಮ್ಮ ರಾಜ್ಯಕ್ಕೆ ಅನುಕೂಲವಾಗುವಂತಹ ಕರಾವಳಿ ಕಾವಲು ಪಡೆಗೆ 12 ಹೊಸ ಯಾಂತ್ರಿಕೃತ ಬೋಟುಗಳನ್ನು ಕೇಳಿದ್ದೇನೆ. ರಾಜ್ಯದ ಪೊಲೀಸರಿಗೆ ಅವಶ್ಯಕವಾಗಿರುವ ನೆರವನ್ನು ಕೇಳಿದ್ದೇನೆ ಎಂದರು.

ರಾಜ್ಯಕ್ಕೆ ವಿಧಿ ವಿಜ್ಞಾನ ವಿವಿಗೆ ಅಮಿತ್ ಶಾ ಅವರಲ್ಲಿ ಮನವಿ ಮಾಡಲಾಗಿದೆ

ಗುಜರಾತ್​ನಲ್ಲಿ ಬಹಳ ದೊಡ್ಡ ವಿಧಿ ವಿಜ್ಞಾನ ಪ್ರಯೋಗಾಲಯ ಇದೆ. ಅಲ್ಲಿಗೆ ರಾಜ್ಯದ ಪೊಲೀಸರನ್ನು ತರಬೇತಿಗೆ ಕಳುಹಿಸುತ್ತಿದ್ದೇವೆ. ಇಂತಹ ವಿವಿ ನಮ್ಮಲ್ಲಿ ಇದ್ದರೆ ಅನುಕೂಲವಾಗುತ್ತದೆ. ಹಣ ಇದೆ ಕ್ಯಾಬಿನೆಟ್​ನಲ್ಲಿ ತೀರ್ಮಾನ ಮಾಡಿ ಕಳುಹಿಸಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಂತಹ ಸದಾರಮೆ ನಾಟಕ ಹೊಸದಲ್ಲ.. HDK ರಾಜಕೀಯ ಜೀವನವೇ ಒಂದು ಡ್ರಾಮಾ, ಅವ್ರ ಕುಟುಂಬವೇ ನಾಟಕ ಕಂಪನಿ : ಬಿಜೆಪಿ ಟ್ವೀಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.