ETV Bharat / city

ಜಿಂಕೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್ ಅಪಘಾತ : ಬಿಜೆಪಿ ಎಸ್ಸಿ ಮೋರ್ಚಾದ ಕಾರ್ಯದರ್ಶಿ ಸಾವು

author img

By

Published : Apr 8, 2022, 9:33 AM IST

ಜಿಂಕೆಗೆ ಬೈಕ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಬೈಕ್​​ನ ಹಿಂಬದಿ ಸವಾರ ಬಿದ್ದು ಸಾವನ್ನಪ್ಪಿರುವ ಘಟನೆ ಸಾಗರದಲ್ಲಿ ನಡೆದಿದೆ. ಸಾಗರ ತಾಲೂಕಿನ ಬಿಜೆಪಿ ಎಸ್​ಸಿ ಮೋರ್ಚಾದ ಕಾರ್ಯದರ್ಶಿ ಪರಶುರಾಮ್​​ ಮೃತ ದುರ್ದೈವಿ..

BJP SC Morcha Secretary died
ಪರಶುರಾಮ್​​ ಮೃತ ದುರ್ದೈವಿ

ಶಿವಮೊಗ್ಗ : ಎದುರಿಗೆ ಬಂದ ಜಿಂಕೆಗೆ ಬೈಕ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಬೈಕ್​​ನ ಹಿಂಬದಿ ಸವಾರ ಬಿದ್ದು ಸಾವನ್ನಪ್ಪಿರುವ ಘಟನೆ ಸಾಗರದಲ್ಲಿ ನಡೆದಿದೆ. ತಾಲೂಕಿನ ತ್ಯಾಗರ್ತಿ ನಿವಾಸಿ ಪರಶುರಾಮ್​​ (30) ಎಂಬಾತ ಮೃತ ದುರ್ದೈವಿ. ಇವರು ಸಾಗರ ತಾಲೂಕಿನ ಬಿಜೆಪಿಯ ಎಸ್ಸಿ ಮೋರ್ಚಾದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.

ಪರಶುರಾಮ್ ಹಾಗೂ ಮಂಜುನಾಥ್ ಎಂಬುವರು ಬೈಕ್​​ನಲ್ಲಿ ತ್ಯಾಗರ್ತಿಯಿಂದ ಸಾಗರಕ್ಕೆ ತೆರಳುವಾಗ ಬೊಮ್ಮತ್ತಿಯ ರೈಲ್ವೆ ಕ್ರಾಸ್ ಬಳಿ ದಿಢೀರನೆ ಬೈಕ್​​ಗೆ ಜಿಂಕೆ ಅಡ್ಡ ಬಂದಿದೆ. ಇದನ್ನು ತಪ್ಪಿಸಲು ಬ್ರೇಕ್ ಹಾಕಿದ್ದಾರೆ. ಆಗ ಹಿಂಬದಿ ಕುಳಿತಿದ್ದ ಪರಶುರಾಮ್ ನೆಲಕ್ಕೆ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದಿದೆ.

ತಕ್ಷಣ ಅವರನ್ನು ಆ್ಯಂಬುಲೆನ್ಸ್​​ ಮೂಲಕ ಆಸ್ಪತ್ರೆಗೆ ಕರೆದು ಕೊಂಡು ಹೋದರು ಸಹ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನು ಮಂಜುನಾಥ್ ಅವರಿಗೆ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.