ETV Bharat / city

ವಿಧಾನಸೌಧದ ಕಂಬಗಳೇ ಹೇಳುತ್ತಿವೆ ಶೇ 40 ರ ಸರ್ಕಾರ ಎಂದು: ಡಾ ಜಿ. ಪರಮೇಶ್ವರ್ ಲೇವಡಿ

author img

By

Published : Jul 22, 2022, 6:21 PM IST

ನಾಯಕರ ಕುರ್ಚಿ ಗಲಾಟೆಗೆ ಕಾಂಗ್ರೆಸ್​ನಲ್ಲಿ ಸಮರ್ಥ ನಾಯಕರು ತುಂಬಾ ಜನ ಇರುವುದು ಕಾರಣ ಎಂದು ಡಾ ಜಿ. ಪರಮೇಶ್ವರ್ ಹೇಳಿದರು.

ETV Bharat Kannada
ಡಾ ಜಿ. ಪರಮೇಶ್ವರ್

ಮೈಸೂರು: ವಿಧಾನಸೌಧದ ಕಂಬಗಳನ್ನು ತಟ್ಟಿದರೆ ನಲವತ್ತು ನಲವತ್ತು ಎನ್ನುತ್ತದೆ. 40 ಪರ್ಸೆಂಟ್ ಭ್ರಷ್ಟ ಸರ್ಕಾರ ಎಂದು ಕಂಬಗಳಿಗೂ ಗೊತ್ತು ಎಂದು ಮಾಜಿ ಉಪಮುಖ್ಯಮಂತ್ರಿ ಡಾ ಜಿ. ಪರಮೇಶ್ವರ್ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.

ಇಂದು ಗಾಂಧಿ ವೃತ್ತದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಯಾವುದೇ ದೂರು ಸಾಕ್ಷ್ಯಾಧಾರಗಳು ಇಲ್ಲದೇ ಇದ್ದರೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಹಿಂಸೆ ನೀಡುತ್ತಿದ್ದಾರೆ ಎಂದರು.

ವಿಧಾನ ಸೌಧದ ಕಂಬಗಳನ್ನು ತಟ್ಟಿದರೆ ಅವುಗಳೇ ಹೇಳುತ್ತಿವೆ ಶೇ 40 ರ ಸರ್ಕಾರ ಎಂದು

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಖ್ಯೆ ಕಡಿಮೆಯಿದ್ದರೂ ಕನ್ಯಾ ಕುಮಾರಿಯಿಂದ ಕಾಶ್ಮೀರದ ವರೆಗೆ ಕಾರ್ಯಕರ್ತರು ಇದ್ದಾರೆ. ಆದರೆ, ಬಿಜೆಪಿಗೆ ಆ ಶಕ್ತಿ ಇಲ್ಲ. ಅನ್ಯ ಮಾರ್ಗಗಳ ಮೂಲಕ ಎರಡನೇ ಬಾರಿಯೂ ಬಿಜೆಪಿ ಅಧಿಕಾರ ಹಿಡಿದಿದೆ ಎಂದು ವಾಗ್ದಾಳಿ ನಡೆಸಿದರು.

ಶಾಸಕಾಂಗ ಸಭೆಯಲ್ಲಿ ಸಿಎಂ ಆಯ್ಕೆ : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಾಸಕಾಂಗ ಸಭೆಯಲ್ಲಿ ಸಿಎಂ ಆಯ್ಕೆ ಮಾಡಲಾಗುವುದು ಈಗ ಜಾತಿ ಲೆಕ್ಕಾಚಾರ ದಲಿತ ಸಿಎಂ ಬಗ್ಗೆ ಮಾತನಾಡುವುದು ತಪ್ಪು. ಮೊದಲು ಕಾಂಗ್ರೆಸ್ ಪಕ್ಷ ಬಹುಮತ ಬಂದರೆ ಶಾಸಕಾಂಗ ಸಭೆಯಲ್ಲಿ ಸಿಎಂ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ಸಮರ್ಥ ನಾಯಕರು ಇದ್ದಾರೆ : ಇನ್ನು ಕಾಂಗ್ರೆಸ್​​​ನಲ್ಲಿ ಸಿಎಂ ಸ್ಥಾನದ ಬಗ್ಗೆ ಚರ್ಚೆ ನಡೆಯುತ್ತಿರುವುದನ್ನು ನೋಡಿದರೆ ಅಷ್ಟೊಂದು ಸಮರ್ಥ ನಾಯಕರು ಇದ್ದಾರೆ ಎಂಬುದನ್ನು ತೋರಿಸುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : ತಂದೆಯವರ ಮಾರ್ಗದರ್ಶನ, ಪಕ್ಷದ ನಿರ್ಧಾರದಂತೆ ನಡೆದುಕೊಳ್ತೇನೆ: ಬಿ.ವೈ. ವಿಜಯೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.