ಸುರತ್ಕಲ್ ಫಾಜಿಲ್​ ಕೊಲೆ ಪ್ರಕರಣ: ಏಳು ಮಂದಿ ಬಂಧನ

author img

By

Published : Aug 2, 2022, 9:41 AM IST

Updated : Aug 2, 2022, 2:48 PM IST

Six people arrested over Surathkal Fazil murder case, Surathkal Fazil murder case, Surathkal Fazil murder case 2022, Surathkal Fazil murder case update, ಸುರತ್ಕಲ್ ಫಾಜಿಲ್ ಕೊಲೆ ಪ್ರಕರಣದಲ್ಲಿ ಆರು ಜನ ಬಂಧನ, ಸುರತ್ಕಲ್ ಫಾಜಿಲ್ ಕೊಲೆ ಪ್ರಕರಣ, ಸುರತ್ಕಲ್ ಫಾಜಿಲ್ ಕೊಲೆ ಪ್ರಕರಣ 2022, ಸುರತ್ಕಲ್ ಫಾಜಿಲ್ ಕೊಲೆ ಪ್ರಕರಣ ಅಪ್​ಡೇಟ್​,
ಸುರತ್ಕಲ್ ಪಾಜಿಲ್ ಹತ್ಯೆ ಪ್ರಕರಣ- ಆರು ಮಂದಿ ಬಂಧನ ()

ಸುರತ್ಕಲ್​ ಯುವಕನ ಕೊಲೆ ಪ್ರಕರಣದಲ್ಲಿ ಈಗಾಗಲೇ ಆರೋಪಿ ಕಾರು ಮಾಲೀಕನನ್ನು ಬಂಧಿಸಲಾಗಿದೆ. ಈಗ ಮತ್ತೆ ಆರು ಜನರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಮಂಗಳೂರು: ಸುರತ್ಕಲ್​ನಲ್ಲಿ ಫಾಜಿಲ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಕಾರು ಮಾಲೀಕ ಸೇರಿ 7 ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಬಜ್ಪೆಯ ಸುಹಾಸ್ ಶೆಟ್ಟಿ (29), ಕುಳಾಯಿಯ ಮೋಹನ್ ಸಿಂಗ್ ಅಲಿಯಾಸ್​ ನೇಪಾಲಿ ಮೋಹನ್ (26), ಗಿರಿಧರ್ (23), ಕಾಟಿಪಳ್ಳ ನಿವಾಸಿಗಳಾದ ಅಭಿಷೇಕ್ (21), ಶ್ರೀನಿವಾಸ್ (23), ದೀಕ್ಷಿತ್ (21) ಎಂದು ಗುರುತಿಸಲಾಗಿದೆ.

ನಡೆದಿದ್ದೇನು?: ಜುಲೈ 28 ರಂದು ಸುರತ್ಕಲ್​ನಲ್ಲಿ ಫಾಜಿಲ್​ನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರದಂದು ಹತ್ಯೆಗೆ ಆರೋಪಿಗಳಿಗೆ ಕಾರು ನೀಡಿದ್ದ ಅಜಿತ್ ಕ್ರಾಸ್ತಾನನ್ನು ಪೊಲೀಸರ ಬಂಧಿಸಿದ್ದರು. ಇದೀಗ ಮತ್ತೆ ಆರು ಆರೋಪಿಗಳನ್ನು ಸಿಸಿಬಿ ಪೊಲೀಸರು ಇಂದು ನಸುಕಿನ ಜಾವ ಬಂಧಿಸಿದ್ದಾರೆ.

Six people arrested over Surathkal Fazil murder case, Surathkal Fazil murder case, Surathkal Fazil murder case 2022, Surathkal Fazil murder case update, ಸುರತ್ಕಲ್ ಫಾಜಿಲ್ ಕೊಲೆ ಪ್ರಕರಣದಲ್ಲಿ ಆರು ಜನ ಬಂಧನ, ಸುರತ್ಕಲ್ ಫಾಜಿಲ್ ಕೊಲೆ ಪ್ರಕರಣ, ಸುರತ್ಕಲ್ ಫಾಜಿಲ್ ಕೊಲೆ ಪ್ರಕರಣ 2022, ಸುರತ್ಕಲ್ ಫಾಜಿಲ್ ಕೊಲೆ ಪ್ರಕರಣ ಅಪ್​ಡೇಟ್​,
ಸುರತ್ಕಲ್ ಪಾಜಿಲ್ ಹತ್ಯೆ ಪ್ರಕರಣ- ಆರು ಮಂದಿ ಬಂಧನ

ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದ ಜುಲೈ 26 ರಂದು ರಾತ್ರಿ ಆರೋಪಿ ಸುಹಾಸ್ ಶೆಟ್ಟಿ ಮತ್ತು ಅಭಿಷೇಕ್ ಯಾರನ್ನಾದರೂ ಕೊಲೆ ಮಾಡಬೇಕು ಎಂದು ದೂರವಾಣಿಯಲ್ಲಿ ಚರ್ಚಿಸಿದ್ದರು‌. ಮರುದಿನ ( ಜು.27 ) ಹೋಟೆಲ್​ನಲ್ಲಿ ಮತ್ತೆ ಚರ್ಚೆ ಈ ಕೊಲೆ ಬಗ್ಗೆ ನಡೆಸಿದ್ದರು.

ಆಗ ಅವರಿಗೆ ಅಲ್ಲಿ ನೇಪಾಲಿ ಮೋಹನ್ ಭೇಟಿಯಾಗಿದ್ದಾನೆ. ಅವರಿಗೆ ತನ್ನ ಗೆಳೆಯರಾದ ಶ್ರೀನಿವಾಸ , ದೀಕ್ಷಿತ್, ಗಿರಿಧರನನ್ನು ಈ ಕೃತ್ಯದಲ್ಲಿ ಸೇರಿಸುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸ್​ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಕೊಲೆ ಬಗ್ಗೆ ನಗರ ಆಯುಕ್ತರ ಹೇಳಿಕೆ

ಹೋಟೆಲ್​ನಲ್ಲಿ ಚರ್ಚೆ ಮಾಡುತ್ತಿರುವ ಸಂದರ್ಭದಲ್ಲಿ ಯಾರನ್ನಾದರೂ ಕೊಲೆ ಮಾಡಬೇಕು ಎಂದು ಆರು ಜನರ ಹೆಸರನ್ನು ಪ್ರಸ್ತಾಪಿಸುತ್ತಾರೆ. ಆದರೆ, ಆ ವೇಳೆ ಯಾವುದೂ ಫೈನಲ್ ಆಗಿರಲಿಲ್ಲ. ಇದರ ಮಧ್ಯೆ ಮೋಹನ್ ಮತ್ತು ಗಿರಿಧರ್ ಕೃತ್ಯ ನಡೆಸಲು ಅಜಿತ್ ಕ್ರಾಸ್ತಾನಿಂದ ಕಾರು ತರುತ್ತಾರೆ. ಒಂದು ಬಹುದೊಡ್ಡ ಕೆಲಸವಿದೆ.

ಅದರಲ್ಲಿ ಯಶಸ್ಸು ಆದರೆ 3 ದಿನಕ್ಕೆ 15 ಸಾವಿರ ನೀಡುತ್ತೇವೆ ಎಂದು ಅಜಿತ್ ಕ್ರಾಸ್ತಾಗೆ ಆಮಿಷವೊಡ್ಡುತ್ತಾರೆ. ಅಷ್ಟೇ ಅಲ್ಲ ಆಗ ಅಜಿತ್ ಕ್ರಾಸ್ತಾಗೆ ಕಾರಿನ ಗುರುತು ಸಿಗದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ. ಕಾರು ತಂದರೂ ಸಹ ಆ ದಿನ ಕೊಲೆ ಮಾಡಲು ಪ್ಲ್ಯಾನ್ ಆಗಿರಲಿಲ್ಲ. ಅವತ್ತು ಸುರತ್ಕಲ್​ನಲ್ಲಿ ಸುಹಾಸ್ ಶೆಟ್ಟಿ, ಗಿರಿಧರ್, ಮೋಹನ್ ಹೊರತು ಪಡಿಸಿ ಉಳಿದವರು ಸಂಜೆಯಾದ್ರೂ ಸೇರಿರಲಿಲ್ಲ.

ಜುಲೈ 28 ರಂದು ಸುಹಾಸ್ ಶೆಟ್ಟಿ ಕಾರಿನಲ್ಲಿ ಮಾರಕಾಸ್ತ್ರಗಳನ್ನಿಟ್ಟು ಸ್ನೇಹಿತರ ಜೊತೆಗೆ ಕಾರಿಂಜೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿಂದ ಬಂದ ಸುಹಾಸ್​ ಶೆಟ್ಟಿ ಕೇಸ್​ವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ಬಳಿಕ ಮತ್ತೆ ಯಾರನ್ನು ಕೊಲೆ ಮಾಡುವುದು ಎಂದು ಚರ್ಚೆ ಮಾಡಿದ್ದರು.

ಆಗ ಚರ್ಚೆಯಲ್ಲಿ ಫಾಜಿಲ್‌ ಮೊಹಮ್ಮದ್​ನನ್ನು ಕೊಲೆ ಮಾಡಲು ನಿರ್ಧರಿಸಿದ್ದರು. ಬಳಿಕ ಮಂಕಿಕ್ಯಾಪ್ ಖರೀದಿಸಿ ಕಿನ್ನಿಗೋಳಿ ಬಾರ್​ನಲ್ಲಿ ಊಟ ಮಾಡಿ ಮತ್ತಿಬ್ಬರು ಆರೋಪಿಗಳು ಅವರ ಜೊತೆಗೂಡಿ ಫಾಜಿಲ್ ಹತ್ಯೆ ಮಾಡಲು ಜಾಗ ನಿರ್ಧರಿಸಿದ್ದರು‌.

ಫಾಜಿಲ್ ಇರುವುದನ್ನು ಗುರುತಿಸಿ ಕಾರಿನಿಂದಿಳಿದ ಸುಹಾಸ್, ಮೋಹನ್, ಅಭಿಷೇಕ್ ಮಾರಕಾಸ್ತ್ರಗಳಿಂದ ಕೊಚ್ಚಿದ್ದಾರೆ. ಗಿರಿಧರ್ ಡ್ರೈವಿಂಗ್ ಮಾಡುತ್ತಿದ್ದರೆ, ದೀಕ್ಷಿತ್ ವಾಹನದಲ್ಲಿ ಕುಳಿತಿದ್ದರು. ಶ್ರೀನಿವಾಸ ಹಲ್ಲೆ ನಡೆಸಿದಾಗ ಯಾರಾದರೂ ತಡೆಯುತ್ತಾರೋ ಎಂದು ಪರಿಶೀಲಿಸುತ್ತಿದ್ದ.

ಘಟನೆ ನಡೆದ ಬಳಿಕ ಅವರು ಫಲಿಮಾರ್ ಮಾರ್ಗವಾಗಿ ತೆರಳಿ ಇನ್ನಾ ಎಂಬಲ್ಲಿ ಕಾರು ಬಿಟ್ಟು ಅಲ್ಲಿಂದ ಬೇರೆ ಕಾರು ತರಿಸಿ ಪರಾರಿಯಾಗಿದ್ದರು. ಇವತ್ತು ಬೆಳಗಿನ ಜಾವ 2-3 ಗಂಟೆಗೆ ಸಿಸಿಬಿ ಪೊಲೀಸರ ತಂಡ ಆರು ಜನರನ್ನು ಬಂಧಿಸಿತ್ತು ಎಂದು ನಗರ ಪೊಲೀಸ್​ ಆಯುಕ್ತ ಶಶಿಕುಮಾರ್​ ಮಾಧ್ಯಮಕ್ಕೆ ಹೇಳಿದ್ದಾರೆ.

ಈ ಸಂಬಂಧ ನಿನ್ನೆ ಮಾಹಿತಿ ನೀಡಿದ್ದ ಮಂಗಳೂರು ಪೊಲೀಸ್​​ ಆಯುಕ್ತರು, ಪ್ರಕರಣಕ್ಕೆ ಸಂಬಂಧಿಸಿದಂತೆ 51 ಮಂದಿಯನ್ನು ವಿಚಾರಣೆ ನಡೆಸಿ, ಪ್ರಕರಣದ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದ್ದರು. ಇನ್ನು ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದ ಡಿಜಿಪಿ - ಐಜಿಪಿ ಪ್ರವೀಣ್​ ಸೂದ್​, ಮಂಗಳೂರಿಗೆ ಭೇಟಿ ನೀಡಿ ತನಿಖೆಗೆ ಮತ್ತಷ್ಟು ಚುರುಕುಗೊಳಿಸಿದ್ದರು. ತಪ್ಪಿತಸ್ಥರು ಯಾರೇ ಇರಲಿ ಬಿಡುವುದಿಲ್ಲ ಎಂದು ಗುಡುಗಿದ್ದರು.

ಓದಿ: ಸುರತ್ಕಲ್ ಫಾಜಿಲ್ ಹತ್ಯೆ ಕೇಸ್: ಹಣದಾಸೆಗೆ ಆರೋಪಿಗಳಿಗೆ ಕಾರು ನೀಡಿದ್ದ ಮಾಲೀಕ ಅರೆಸ್ಟ್​

Last Updated :Aug 2, 2022, 2:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.