ETV Bharat / city

ಆಕ್ಸಿಡೆಂಟ್​ ಆದ ವ್ಯಕ್ತಿಯನ್ನ ತಮ್ಮದೇ ಕಾರ್​ನಲ್ಲಿ ಆಸ್ಪತ್ರೆಗೆ ಸಾಗಿಸಿದ ಹೆಡ್​ಕಾನ್​ಸ್ಟೇಬಲ್​!

author img

By

Published : Sep 2, 2021, 1:02 AM IST

ಅಪಘಾತವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿಯೋರ್ವನನ್ನ ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿ ಪೊಲೀಸ್ ಹೆಡ್​ ಕಾನ್​ಸ್ಟೇಬಲ್​ವೊರ್ವರು ಮಾನವೀಯತೆ ಮರೆದಿದ್ದಾರೆ.

http://10.10.50.85//karnataka/01-September-2021/kn-mng-03-accident-script-ka10015_01092021224308_0109f_1630516388_648.jpg
police head constable

ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನದ ದಾರಿಯಲ್ಲಿ ನಡೆದ ಅಪಘಾತದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿಯೋರ್ವನನ್ನ ಬಜಪೆ ಠಾಣೆಯ ಪೋಲಿಸ್ ಸಿಬ್ಬಂದಿ ತನ್ನದೇ ಕಾರಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿರುವ ಘಟನೆ ನಡೆದಿದೆ.

police head constable
ಪೊಲೀಸ್ ಹೆಡ್​ಕಾನ್​ಸ್ಟೇಬಲ್​ ಗೋಪಾಲಕೃಷ್ಣ

ಬಜಪೆ ಠಾಣೆಯ ಹೆಡ್​ಕಾನ್​ಸ್ಟೇಬಲ್ ಗೋಪಾಲಕೃಷ್ಣ ತಮ್ಮ ಕರ್ತವ್ಯ ಮುಗಿಸಿ ತೆರಳುತ್ತಿರುವ ಸಮಯದಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ಗಮನ ರಸ್ತೆಯ ಜಂಕ್ಷನ್‌ನಲ್ಲಿ ದ್ವಿಚಕ್ರ ವಾಹನಗಳೆರಡರ ಮಧ್ಯೆ ಅಪಘಾತ ಸಂಭವಿಸಿತ್ತು. ಘಟನೆಯಿಂದ ಅಮಾನುಲ್ಲಾ ಎಂಬುವವರು ಪ್ರಜ್ಞಾಹೀನಸ್ಥಿತಿಯಲ್ಲಿ ರಸ್ತೆಯಲ್ಲಿಯೇ ಬಿದ್ದಿದ್ದರು. ಕೂಡಲೇ ಗೋಪಾಲಕೃಷ್ಣ ತಮ್ಮದೇ ಕಾರಿನಲ್ಲಿ ಅವರನ್ನು ಎ.ಜೆ.ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮರೆದಿದ್ದಾರೆ.

ಇದನ್ನೂ ಓದಿರಿ: ಜಮ್ಮು-ಕಾಶ್ಮೀರ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿದ್ದ ಸೈಯದ್​ ಅಲಿ ಶಾ ಗಿಲಾನಿ ನಿಧನ

ಈ ವಿಚಾರವನ್ನು ಮಂಗಳೂರು ಸಿಟಿ ಪೋಲಿಸ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಅನೇಕರು ಗೋಪಾಲಕೃಷ್ಣ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.