ETV Bharat / city

ಹರ್ಷ ಕುಟುಂಬಕ್ಕೆ ಒಂದು ತಿಂಗಳ ವೇತನ ಕೊಡಲು ಮುಂದಾದ ಶಾಸಕ ಭರತ್ ಶೆಟ್ಟಿ

author img

By

Published : Feb 22, 2022, 11:09 AM IST

ಶಿವಮೊಗ್ಗದಲ್ಲಿ ಕೊಲೆಯಾದ ಭಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ತಮ್ಮ ಒಂದು ತಿಂಗಳ ವೇತನವನ್ನು ನೀಡುವುದಾಗಿ ಘೋಷಿಸಿದ್ದಾರೆ.

MLA Bharat shetty
ಶಾಸಕ ಭರತ್ ಶೆಟ್ಟಿ

ಮಂಗಳೂರು(ದಕ್ಷಿನ ಕನ್ನಡ): ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಅವರು ತಮ್ಮ ಒಂದು ತಿಂಗಳ ವೇತನವನ್ನು ನೀಡುವುದಾಗಿ ತಿಳಿಸಿದ್ದಾರೆ.

  • We have lost our young Karyakarta. Least we can do is to support his family.
    Donating my 1 month salary and allowances to the family of #Harsha. Will stand by his family in this hour of grief. https://t.co/tapvuI9oOL

    — Dr Bharath Shetty (@bharathshetty_y) February 21, 2022 " class="align-text-top noRightClick twitterSection" data=" ">

ಈ ಘಟನೆಯ ಬಳಿಕ ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್ ಅವರು ಟ್ವೀಟ್ ಮಾಡಿ, ಮೃತ ಹರ್ಷನ ಮನೆಯವರ ಜೊತೆ ನಿಲ್ಲೋಣ. ನೊಂದ ಕುಟುಂಬಕ್ಕೆ ಆಸರೆಯಾಗೋಣ‌ ಎಂದು ಹೇಳಿದ್ದರು.

ಇದನ್ನೂ ಓದಿ: 'ಕೊಲೆ ಮಾಡಿದ್ದು ಮುಸ್ಲಿಂ ಗೂಂಡಾಗಳೆಂದು ಹೇಳಿದ್ದೆ, ಈಗಲಾದ್ರೂ ಹರಿಪ್ರಸಾದ್ ಒಪ್ಕೋತಾರಾ?'

ಈ ಟ್ವೀಟ್​ ರೀಟ್ವೀಟ್ ಮಾಡಿರುವ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ನಾವು ಕಾರ್ಯಕರ್ತನನ್ನು ಕಳೆದುಕೊಂಡಿದ್ದು, ಆತನ ಕುಟುಂಬದ ಜೊತೆಗೆ ‌ನಿಲ್ಲಬೇಕು‌. ನಾನು ಒಂದು ತಿಂಗಳ ವೇತನ ಮತ್ತು ಅಲೋವೆನ್ಸ್ ಅನ್ನು ಆತನ ಕುಟುಂಬಕ್ಕೆ ನೀಡುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.