ETV Bharat / city

ಎಸ್​ಡಿಪಿಐ, ಕಾಂಗ್ರೆಸ್ - ಕಮ್ಯೂನಿಸ್ಟ್‌ ಪಕ್ಷಗಳು‌ ಬೆಳೆಸಿರುವ ಕೂಸು: ಪ್ರಹ್ಲಾದ್ ಜೋಶಿ

author img

By

Published : May 28, 2022, 6:16 PM IST

ಕರ್ನಾಟಕದಲ್ಲಿ ಎಸ್​ಡಿಪಿಐ ಸಂಘಟನೆಯನ್ನು ಬೆಳೆಸಿದ್ದು ಕಾಂಗ್ರೆಸ್​ ಮತ್ತು ಸಿದ್ದರಾಮಯ್ಯ ಎಂದು ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯಲ್ಲಿ ಆರೋಪಿಸಿದ್ದಾರೆ.

Hubli Dharwad mayor upa mayor
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದ ಹಿನ್ನೆಲೆಯಲ್ಲಿ ನೂತನ ಮೇಯರ್ ಮತ್ತು ಉಪಮೇಯರ್​​​ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶುಭ ಕೋರಿದರು. ಮೂರು ವರ್ಷಗಳ‌ ಬಳಿಕ ಪಾಲಿಕೆಗೆ ಈಗ ಆಡಳಿತ ಕಾರ್ಯಗಳು ಚುರುಕುಗೊಳಲಿದೆ. ನಮ್ಮ ಪಕ್ಷದ ಸದಸ್ಯರು ಅಧಿಕಾರ ಹಿಡಿದಿರುವುದು ಸಂತಸದ ವಿಷಯ ಎಂದರು.

ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಜನಪರ ಆಡಳಿತವನ್ನು ನೀಡಿ ಜನರ ಮನ್ನಣೆಗೆ ಮೇಯರ್ ಮತ್ತು ಉಪಮೇಯರ್ ಪಾತ್ರವಾಗಬೇಕು. ಅಲ್ಲದೇ ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಅವಳಿನಗರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ನೂತನ ಮೇಯರ್ ಈರೇಶ್ ಅಂಚಟಗೇರಿ ಮತ್ತು ಉಪಮೇಯರ್ ಉಮಾ ಮುಕುಂದ ಅವರಿಗೆ ಸಲಹೆ ನೀಡಿದರು.

ಎಸ್​ಡಿಪಿಐ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್‌ ಪಕ್ಷಗಳು‌ ಬೆಳೆಸಿರುವ ಕೂಸು

ಎಸ್.ಡಿ.ಪಿ.ಐ ಸಂಘಟನೆ ಕಾಂಗ್ರೆಸ್ ಬೆಳೆಸಿದ ಕೂಸು: ಎಸ್​​​​ಡಿಪಿಐ ಸಂಘಟನೆ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್‌ ಪಕ್ಷಗಳು‌ ಬೆಳೆಸಿರುವ ಕೂಸು. ಸಿದ್ಧರಾಮಯ್ಯ ಸಿಎಂ ಇದ್ದಾಗ ಎಸ್​​​ಡಿಪಿಐ ಮೇಲಿನ ಕೇಸ್​ಗಳನ್ನು ವಜಾ ಮಾಡಿದರು. ಇನ್ನೂ ಸಿದ್ದರಾಮಯ್ಯ ಆರ್​ಎಸ್​ಎಸ್ ಮತ್ತು ಬಿಜೆಪಿ ಮೂಲ ಕೇಳತ್ತಾರೆ.‌ ಆದರೆ, ಅವರ ಮೂಲವನ್ನೇ ಜನ ಕಿತ್ತುಕೊಂಡಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ಸಿದ್ದರಾಮಯ್ಯಗೆ ಮೂಲ ನೆಲೆ ಇಲ್ಲ. ಕಾಂಗ್ರೆಸ್ ಮೂಲ ಇಟಲಿಯದು. ಕೇರಳ ಸರ್ಕಾರ ಎಸ್​ಡಿಪಿಐ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ದೇಶಕ್ಕೆ ಸಂದೇಶ ನೀಡಬೇಕು. ಬಾಲಕನ ಕೈಯಲ್ಲಿ ಘೋಷಣೆ ಕೂಗಿಸಿದವರ ಬಗ್ಗೆ ತನಿಖೆ ಆಗಬೇಕು ಎಂದು ಅವರು ಇದೇ ವೇಳೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಅವಳಿ ನಗರದ ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ: ನೂತನ ಮೇಯರ್ - ಉಪಮೇಯರ್ ಭರವಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.