ETV Bharat / city

ಪಾದಚಾರಿಗೆ ಗುದ್ದಿದ ಬಿಆರ್‌ಟಿಎಸ್ ಬಸ್.. ಗಾಯಾಳು ಸ್ಥಿತಿ ಗಂಭೀರ!

author img

By

Published : Dec 7, 2021, 12:17 PM IST

ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯ ಈ ಕುರಿತು ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Bus collided with man at hubli
ಹುಬ್ಬಳ್ಳಿಯಲ್ಲಿ ಪಾದಾಚಾರಿಗೆ ಗುದ್ದಿದ ಬಸ್​

ಹುಬ್ಬಳ್ಳಿ : ಬಿಆರ್‌ಟಿಎಸ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.

ಪಾದಚಾರಿಗೆ ಗುದ್ದಿದ ಬಸ್.. ಗಾಯಾಳು ಸ್ಥಿತಿ ಗಂಭೀರ!

ಓರ್ವ ಪಾದಚಾರಿ ರಸ್ತೆ ದಾಟುತ್ತಿದ್ದ ವೇಳೆ ಬಿಆರ್‌ಟಿಎಸ್ ಬಸ್ ಗುದ್ದಿದ ಹಿನ್ನೆಲೆ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ವ್ಯಕ್ತಿಯ ಹೆಸರು, ಅವರು ಯಾರೆಂದು ತಿಳಿದು ಬಂದಿಲ್ಲ.

ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯ ಈ ಕುರಿತು ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದಾಖಲೆ ಬಳಸಿ ಹಣ ವಂಚನೆ : ಆನ್​ಲೈನ್​ನಲ್ಲಿ ಸಾಲ ಪಡೆಯುವ ಮುನ್ನ ಎಚ್ಚರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.